ಗುಡುಗಿದ ಚಂದನ್ ಶೆಟ್ಟಿ..! ಕಾರಣ ಏನ್ ಗೊತ್ತಾ?

Date:

ಇತ್ತೀಚೆಗಷ್ಟೇ ಹೊಸ ಹಾಡು ರಿಲೀಸ್‌ ಮಾಡಿರುವ ಗಾಯಕ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆ ಮೂಲಕ ಕೆಲವು ಪಬ್‌ಗಳ ಬಗ್ಗೆ ತಕರಾರು ತೆಗೆದಿದ್ದಾರೆ. ಬೆಂಗಳೂರಿನ ಪಬ್‌ಗಳಲ್ಲಿ ಕನ್ನಡ ಹಾಡನ್ನು ಹಾಕುವುದಿಲ್ಲ ಎಂದು ಅವರು ಗುಡುಗಿದ್ದಾರೆ. ತಾವು ಭೇಟಿ ನೀಡಿದ ಪಬ್‌ನಲ್ಲಿ ಯಾವ ರೀತಿಯ ಪರಿಸ್ಥಿತಿ ಇತ್ತು ಎಂಬುದನ್ನು ಅವರು ವಿವರಿಸಿದ್ದಾರೆ.
‘ನನಗೆ ಅರ್ಥ ಆಗತ್ತೆ ಸ್ವಾಮಿ. ಬೆಂಗಳೂರು ಒಂದು ಮೆಟ್ರೋಪಾಲಿಟನ್‌ ಸಿಟಿ. ಇಲ್ಲಿಗೆ ಬೇರೆ ಬೇರೆ ಭಾಷೆ, ರಾಜ್ಯ ಮತ್ತು ದೇಶದ ಜನರು ಬಂದಿದ್ದಾರೆ. ಎಲ್ಲ ಭಾಷೆಯ ಹಾಡುಗಳನ್ನು ಹಾಕಬೇಕು. ಕನ್ನಡವನ್ನೂ ಹಾಕಿ ಎಂದು ನಾವು ಮನವಿ ಮಾಡುತ್ತಿದ್ದೇವೆ. ಕನ್ನಡವನ್ನೇ ಹಾಕಬೇಕು ಅಂತ ನಾನೇನೂ ಹೇಳುತ್ತಿಲ್ಲವಲ್ಲ. ಕನ್ನಡ ಹಾಡು ಹಾಕಿದರೆ ನಿಮ್ಮ ವ್ಯಾಲ್ಯೂ ಕಡಿಮೆ ಆಗುತ್ತೆ ಎಂಬ ಮನಸ್ಥಿತಿಯಿಂದ ದಯವಿಟ್ಟು ಪಬ್‌ನ ಮ್ಯಾನೇಜ್‌ಮೆಂಟ್‌ನವರು ಹೊರಬನ್ನಿ. ನಮ್ಮಲ್ಲೂ ಮಿಲಿಯನ್‌ಗಟ್ಟಲೆ ಓಡಿದ ಹಾಡುಗಳಿವೆ. ಆಲ್‌ ಓಕೆ ಮುಂತಾದ ಒಳ್ಳೆಯ ಆರ್ಟಿಸ್ಟ್‌ಗಳ ಹಾಡುಗಳನ್ನು ಪ್ಲೇ ಮಾಡಿ. ಎಲ್ಲ ಕಲಾವಿದರ ಪರವಾಗಿ ನಾನು ಇದನ್ನು ಹೇಳುತ್ತಿದ್ದೇನೆ’ ಎಂಬುದು ಚಂದನ್‌ ಶೆಟ್ಟಿ ಮಾತುಗಳು.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...