ಚಾ.ನಗರದಲ್ಲಿ ಸತ್ತ 24 ಜನರ ಮನೆಗೆ ಬೆಳಕಾದ ಕಿಚ್ಚ

Date:

ಯಾರಾದರೂ ಅಭಿಮಾನಿಗಳು ಕಷ್ಟದಲ್ಲಿದ್ದಾರೆ ಎಂದರೆ ಕಿಚ್ಚ ಸುದೀಪ್ ಮೊದಲು ಸಹಾಯಕ್ಕೆ ಬರುತ್ತಾರೆ. ತಾನೂ ತನ್ನ ಕೆಲಸಗಳಲ್ಲಿ ಬ್ಯುಸಿ ಇರುವಂತ ಸಂದರ್ಭದಲ್ಲಿ ಅಭಿಮಾನಿಗಳಿಗೆ ತೊಂದರೆಯಾದಾಗ ಅಥವಾ ಯಾವುದಾದರೂ ಸಹಾಯ ಬೇಕಾದಾಗ ತಾನು ಅದನ್ನು ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಎಂಬುದನ್ನು ಸುದೀಪ್ ಆರಂಭಿಸಿದ್ದಾರೆ. ಈ ಚಾರಿಟಬಲ್ ಟ್ರಸ್ಟ್ ಮೂಲಕ ತಾವು ಎಷ್ಟೇ ಬ್ಯುಸಿ ಇದ್ದರೂ ಕಷ್ಟ ಎಂದು ಸಹಾಯ ಹಸ್ತ ಅರಸಿ ಬರುವ ಜನರಿಗೆ ಸಹಾಯವನ್ನು ಮಾಡುತ್ತಿದ್ದಾರೆ.

 

 

ಇದೀಗ ಇದೇ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಚಾಮರಾಜನಗರದಲ್ಲಿ ಇತ್ತೀಚೆಗೆ ಆಕ್ಸಿಜನ್ ಸಿಗದೆ ರಾತ್ರೋರಾತ್ರಿ ನಿಧನ ಹೊಂದಿದ 24 ಜನರ ಕುಟುಂಬದವರಿಗೆ ಕಿಚ್ಚ ಸುದೀಪ್ ಸಹಾಯ ಮಾಡಲು ಮುಂದಾಗಿದ್ದಾರೆ. ನಿಮಗೆಲ್ಲ ತಿಳಿದಿರುವ ಹಾಗೆ ಕಳೆದೆರಡು ವಾರಗಳಿಂದ ಕಿಚ್ಚ ಸುದೀಪ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೂ ಸಹ ಚಾಮರಾಜನಗರದಲ್ಲಿ ಇಂತಹ ಘಟನೆ ನಡೆದಿದೆ ಎಂದು ತಿಳಿದ ಕೂಡಲೇ ತಮ್ಮ ಚಾರಿಟಬಲ್ ಟ್ರಸ್ಟ್ ಗೆ ಅವರೇ ಕರೆ ಮಾಡಿ ಚಾಮರಾಜನಗರದಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದು ಯಾರು ಯಾರು ಮೃತಪಟ್ಟಿದ್ದಾರೋ ಅವರೆಲ್ಲರ ಮನೆಗಳಿಗೆ ತೆರಳಿ ಅವರಿಗೆ ಯಾವ ಅಗತ್ಯತೆ ಇದೆ ಎಂಬುದನ್ನು ಕಂಡುಕೊಳ್ಳಿ ಎಂದು ಸೂಚಿಸಿದ್ದಾರೆ.

 

 

ಅಷ್ಟೇ ಅಲ್ಲದೆ ನಿಮಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಕಡೆಯಿಂದ ಯಾವ ರೀತಿಯ ಅನುಕೂಲ ಬೇಕು ಯಾವ ರೀತಿಯ ಸಹಾಯ ಬೇಕೋ ಅದನ್ನ ಒದಗಿಸುತ್ತೇವೆ ಎಂಬ ಭರವಸೆಯನ್ನು ನೀಡಿ ಬನ್ನಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದರಂತೆಯೇ ಟ್ರಸ್ಟ್ ನ ಸದಸ್ಯರು ಮೃತಪಟ್ಟ ಸೋಂಕಿತರ ಮನೆಗಳಿಗೆ ತೆರಳಿ ಅವರಿಗೆ ಯಾವ ಸಹಾಯ ಬೇಕೋ ಅದನ್ನು ತಿಳಿದುಕೊಂಡು ಕಿಚ್ಚ ಸುದೀಪ್ ಅವರಿಗೆ ಮುಟ್ಟಿಸಿದ್ದಾರೆ. ಮನಕಲಕುವ ವಿಷಯವೇನೆಂದರೆ ಮೃತಪಟ್ಟ 24 ಮಂದಿಯು ಸಹ ತೀರಾ ಬಡ ಕುಟುಂಬದವರು.

 

 

ಅವರನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಮನೆಯವರು ಇದೀಗ ಅವರನ್ನು ಕಳೆದುಕೊಂಡು ನಾವಿಕನಿಲ್ಲದ ದೋಣಿಯಂತಾಗಿದೆ. ಈ ವಿಷಯವನ್ನೆಲ್ಲಾ ತಿಳಿದ ಕಿಚ್ಚ ಸುದೀಪ್ ಅವರು ಆ ಮೃತ ವ್ಯಕ್ತಿಗಳ ಮನೆಯವರಿಗೆ ಯಾವ ಯಾವ ಸವಲತ್ತುಗಳು ಬೇಕೋ ಅದನ್ನೆಲ್ಲಾ ಕಲ್ಪಿಸಿಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸರ್ಕಾರದ ಉಡಾಫೆತನ, ಬೇಜವಾಬ್ದಾರಿತನದಿಂದ ಸತ್ತ ಆ 24 ಮಂದಿ ಮೃತರ ಕುಟುಂಬಕ್ಕೆ ಬೆಳಕು ನೀಡಲು ಮುಂದಾಗಿರುವ ಕಿಚ್ಚ ಸುದೀಪ್ ಅವರ ಈ ನಡೆ ನಿಜಕ್ಕೂ ಮಾನವೀಯತೆ ಇನ್ನೂ ಬದುಕಿದೆ ಎಂಬುದಕ್ಕೆ ನಿದರ್ಶನವಾಗಿದೆ.

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...