ಚುನಾವಣಾ ಕಣಕ್ಕೆ ಇಳಿದೇ ಬಿಟ್ಟರು ವರ್ಲ್ಡ್​​ಕಪ್ ಹೀರೋ.! ಗಂಭೀರ್​ಗೆ ಟಿಕೆಟ್​.. ಯಾವಕ್ಷೇತ್ರ ಗೊತ್ತಾ?

Date:

ಟೀಮ್​ಇಂಡಿಯಾದ ಮಾಜಿ ಓಪನರ್… ವರ್ಲ್ಡ್​​ಕಪ್ ಹೀರೋ ಗೌತಮ್​ ಗಂಭೀರ್​ ಬಿಜೆಪಿ ಸೇರ್ಪಡೆಗೊಂಡಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ. ಈಗ ಗೌತಿಗೆ ಬಿಜೆಪಿ ಟಿಕೆಟ್​ ಕೂಡ ಸಿಕ್ಕಿದೆ.
ಭಾರತ ತಂಡದ ನಂಬಿಕಸ್ತ ಬ್ಯಾಟ್ಸ್​ಮನ್ ಆಗಿ 2004ರಿಂದ 2016ರ ತನವೂ ಆಧಾರವಾಗಿದ್ದರು. 2003ರಿಂದ 2016ರವರೆಗೆ ಟೆಸ್ಟ್, 2003ರಿಂದ 22013ರವರೆಗೆ ಏಕದಿನ ಕ್ರಿಕೆಟ್​ ಅನ್ನು ಭಾರತದ ಪರವಾಗಿ ಆಡಿದ್ದಾರೆ. 2010ರ ಅವಧಿಯಲ್ಲಿ 6 ಮ್ಯಾಚ್​ಗಳಲ್ಲಿ ನಾಯಕತ್ವವಹಿಸಿಕೊಂಡಿದ್ದರು. ಆ 6 ಮ್ಯಾಚ್​ಗಳಲ್ಲೂ ಭಾರತ ಗೆದ್ದಿತ್ತು. ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದಿದ್ದರು. ಮುಖ್ಯವಾಗಿ 2011ರ ವಿಶ್ವಕಪ್ ಫೈನಲ್​ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದಲ್ಲಿ 97ರನ್​ಗಳಿಸಿ ಗೆಲುವಿನ ಸಾರಥಿ ಆಗಿದ್ದರು.
ನಂತರ ಟೀಮ್ ಇಂಡಿಯಾದಿಂದ ಅವಕಾಶ ವಂಚಿತರಾದ ಗೌತಿ. ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರಿಗೆ ಬಿಜೆಪಿ ಪೂರ್ವ ದೆಹಲಿಯಿಂದ ಟಿಕೆಟ್​ ನೀಡಿದೆ. ಗೌತಿ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...