ಜೂಜಾಟಕ್ಕೆ ಪತ್ನಿಯನ್ನೇ ಅಡವಿಟ್ಟ ಭೂಪ… ಇದು ಕಲಿಯುಗದ ಗಂಡನ ಕರ್ಮಕಾಂಡ..!

Date:

ನೀವು ಮಹಾಭಾರತದಲ್ಲಿ ಧರ್ಮರಾಯ ದ್ರೌಪದಿಯನ್ನು ಜೂಜಾಟದಲ್ಲಿ ಅಡವಿಟ್ಟ ಕಥೆಯನ್ನು ಕೇಳಿದ್ದೀರಿ. ಮಹಾಭಾರತದ ಆ ಘಟನೆಯನ್ನೇ ಹೋಲುವಂತೆ ಉತ್ತರ ಪ್ರದೇಶದಲ್ಲೊಂದು ಘಟನೆ ನಡೆದಿದೆ.
ಜೂಜಾಟ ಮತ್ತು ಮದ್ಯ ವ್ಯಸನಕ್ಕೆ ದಾಸನಾಗಿದ್ದ ವ್ಯಕ್ತಿ ತನ್ನಲ್ಲಿ ಹಣವಿಲ್ಲದೇ ಇರುವಾಗ ತನ್ನ ಪತ್ನಿಯನ್ನೇ ಅಡವಿಟ್ಟು ಜೂಜಾಡಿದ್ದಾನೆ..! ಆತ ಆಟದಲ್ಲಿ ಸೋತಿದ್ದರಿಂದ ಆತನ ಸ್ನೇಹಿತರು ಆತನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಘಟನೆ ನಡೆದ ನಂತರದಲ್ಲಿ ಸಂತ್ರಸ್ತೆ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾಳೆ.. ಆಗ ಆಕೆಯನ್ನು ಹಿಂಬಾಲಿಸಿದ ಗಂಡನೆಂಬ ಭೂಪ ನನ್ ತಪ್ಪಿನಿಂದ ಹಿಂಗಾಗಿದೆ.. ನನ್ನ ಕ್ಷಮಿಸು ಅಂತ ಆಕೆಯಲ್ಲಿ ಬೇಡಿಕೊಂಡಿದ್ದಾನೆ. ಆಗ ಆಕೆ ಅವನನ್ನು ಕ್ಷಮಿಸಿ.. ಅವನ ಕಾರಲ್ಲೇ ಮನೆಗೆ ಅವನೊಡನೆ ಹೊರಟಿದ್ದಾಳಂತೆ..! ಆಗಲೂ ತನ್ನ ಕೊಳಕು, ನೀಚ ಬುದ್ಧಿಯನ್ನು ಬಿಡದ ಭೂಪ ಪತಿರಾಯ ದಾರಿ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತನ್ನ ಸ್ನೇಹಿತರಿಗೆ ಆಕೆ ಮೇಲೆ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟಿದ್ದಾನಂತೆ..!


ನಂತರ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ..! ತನ್ನ ಪತಿಯ ಗೆಳೆಯರಾದ ಅರುಣ್ ಮತ್ತು ಸಂಬಂಧಿ ಅನಿಲ್ ಮದ್ಯಪಾನಕ್ಕೆ ಹಾಗೂ ಜೂಜಾಟಕ್ಕೆ ನಮ್ ಮನೆಗೆ ಬರ್ತಿದ್ರು. ಪತಿ ಜೂಜಾಟದಲ್ಲಿ ಸೋತಿದ್ದಕ್ಕೆ ನನ್ನ ಮೇಲೆ ಅತ್ಯಾಚಾರವೆಸಗಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾನೆ ಅಂತ ಕಂಪ್ಲೇಂಟ್ ಕೊಟ್ಟಿದ್ದಾರೆ. ಆದರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರ್ಲಿಲ್ಲ. ನಂತರ ಸಂತ್ರಸ್ತೆ ನ್ಯಾಯಲಯದ ಮೊರೆ ಹೋದಾಗ ಕೋರ್ಟ್ ಆದೇಶದಂತೆ ಜಪ್ಪರಾಬಾದ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆಂದು ವರದಿಯಾಗಿದೆ.

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...