ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದಲ್ಲಿ ಯಾರಿಗಾದರೆ ಹೆದರಿದ್ದರೆ ಅದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ, ಖರ್ಗೆ ಅವರು ಸಂಸತ್ತಿನಲ್ಲಿ ಮಾತನಾಡಿ ಸರಕಾರದ ಸಾಧನೆಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರೆ, ಮೋದಿ ಉತ್ತರಿಸುವುದೇ ಇಲ್ಲ ಎಂದು ಟೀಕಿಸಿದರು ಸಚಿವೆ ಜಯಮಾಲಾ ಮೋದಿಯವರನ್ನು ಟೀಕಿಸಿದ್ದಾರೆ.
ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಕೆಲವರಿಗೆ ಬಾಯಿಚಪಲ ಮಾತನಾಡುತ್ತಾರೆ. ದೇವರು ನಾಲಿಗೆ ಕೊಟ್ಟಿದ್ದಾನೆ ಉದ್ದ ಚಾಚುತ್ತಾರೆ ಆ ಬಗ್ಗೆ ನಾನು ಏನು ಹೇಳುವುದಿಲ್ಲ. ಯಾಕೆಂದರೆ, ನನ್ನ ಹಣೆಬರಹ ಬರೆಯುವವರು ನೀವು ನನ್ನ ಪರವಾಗಿವಾಗಿದ್ದೀರಿ. ಸಾಮೂಹಿಕ ಬೆಂಬಲ ಘೋಷಿಸಿದ್ದೀರಿ ಹಾಗಾಗಿ ನಿಮಗೆ ನಾನು ಆಭಾರಿಯಾಗಿದ್ದೇನೆ,
ಸಂವಿಧಾನದ ಅಡಿಯಲ್ಲಿ ಎಲ್ಲಾ ಹಿಂದುಳಿದ, ದಲಿತ ಹಾಗೂ ಇತರೆ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸಲಾಗಿದೆ ಸಂವಿಧಾನದ ಆಶಯಕ್ಕೆ ದಕ್ಕೆ ಬಂದರೆ ಎಲ್ಲಾ ಸೌಲಭ್ಯಗಳು ರದ್ದಾಗಲಿದೆ ಹಾಗಾಗಿ ಈ ಬಾರಿ ಎಚ್ಚರ ವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನನಗೆ ಮತ ನೀಡುವ ಮೂಲಕ ಸಂವಿಧಾನವನ್ನು ರಕ್ಷಿಸಬೇಕು ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು ಪ್ರಚಾರ ಸಭೆಯಲ್ಲಿ ಮನವಿಯನ್ನ ಮಾಡಿದ್ರು.