ದೇಶ ಇದ್ರೆ ನಾನು, ನನ್ನ ಹೆಂಡ್ತಿ, ಮಕ್ಕಳು, ವ್ಯಾಪಾರ ಎಲ್ಲಾವು ಉಳಿಯುತ್ತೆ: ಪ್ರಮೋದ್ ಮುತಾಲಿಕ್
ಬೆಂಗಳೂರು: ದೇಶ ಇದ್ರೆ ನಾನು, ನನ್ನ ಹೆಂಡ್ತಿ, ಮಕ್ಕಳು, ವ್ಯಾಪಾರ ಎಲ್ಲಾವು ಉಳಿಯುತ್ತೆ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಯಾರೋ ಮಿಲ್ಟ್ರಿ ಪೊಲೀಸ್, ರಾಜಕಾರಣಿಗಳು ರಕ್ಷಣೆ ಮಾಡ್ತಾರೆ ಅನ್ನೋದನ್ನ ಬಿಟ್ಟು ದೇಶಕ್ಕಾಗಿ ಕೆಲಸ ಮಾಡಬೇಕಿದೆ. ದೇಶ ಇದ್ರೆ ನಾನು, ನನ್ನ ಹೆಂಡ್ತಿ, ಮಕ್ಕಳು, ವ್ಯಾಪಾರ ಎಲ್ಲಾವು ಉಳಿಯುತ್ತೆ. ದೇಶ ಮೊದಲು ಅನ್ನೋ ಸಂಕಲ್ಪ ಮಾಡಲೇಬೇಕು.
ಇಲ್ಲದಿದ್ದರೆ ಇರಾನ್, ಇರಾಕ್, ಪಾಕಿಸ್ತಾನದ ಪರಿಸ್ಥಿತಿ ಬರಲಿದೆ. ಪೆಹಲ್ಗಾಮ್ ಘಟನೆ ನೆನಪು ಮಾಡಿಕೊಳ್ಳೋಣ. ಇದನ್ನೆಲ್ಲ ಮಾಡಿದ್ದು ಇಸ್ಲಾಮಿಕ್ ಟೆರರಿಸಮ್. ಭಯೋತ್ಪಾದನೆಗೆ ಧರ್ಮ ಇಲ್ಲ ದೇಶ ಇಲ್ಲ ಅನ್ನೋ ರಾಜಕಾರಣಿಗಳ ಬಾಯಗೆ ಬೂಟು ಇಡಬೇಕು. ಅಲ್ಲೇ ಇದ್ದ ಮುಸ್ಲಿಂ ವ್ಯಾಪಾರಿಗಳಿಗೆ ಏನು ಮಾಡಿಲ್ಲ. ಧರ್ಮ ಕೇಳಿ ಹೊಡೆದಿದ್ದಾರೆ.
ರಾಜಕಾರಣಿಗಳದ್ದು ಬಾಯಲ್ಲ ಬಚ್ಚಲು. ಮುಖ್ಯಮಂತ್ರಿಯಿಂದ ಹಿಡಿದು ಬೇರೆ ಬೇರೆ ನಾಯಕರು ಏನೇನೋ ಮಾತಾನಾಡುತ್ತಿದ್ದಾರೆ. 27 ಅಮಾಯಕರು ಮುಸ್ಲಿಮರ ಬೈಲಿಲ್ಲ. ರಾಜಕಾರಣಿಗಳ ಬೈದಿಲ್ಲ. ಪ್ರವಾಸಕ್ಕೆ ಹೋದವರು ಸತ್ತರು. ರಾಜಕಾರಣಿಗಳು ಸತ್ತವರ ಮನೆಗೆ ಹೋಗಿ ಬನ್ನಿ ಎಂದು ಕಿಡಿಕಾರಿದ್ದಾರೆ.