ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ವಿದ್ಯಾಕಾಶಿ ಬೆಚ್ಚಿ ಬಿದ್ದಿದೆ. ಉತ್ತರ ಕನ್ನಡದ ದಾಂಡೇಲಿ ಮೂಲದ ಶ್ಯಾಂ ಸುಂದರ್ ಮುತಕುಡಿ (40) ದುಷ್ಕರ್ಮಿಗಳ ಗುಂಡಿಟ್ಟು ಹತ್ಯೇ ಗಯ್ದಿದ್ದಾರೆ.
ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿರುವ ಹೊಯ್ಸಳ ನಗರದ ತಪೋವನ ಬಳಿ ಇಂದು ಬೆಳಗ್ಗೆ 10 ಗಂಟೆಗೆ ಕಾರಿನಲ್ಲಿ ಬರುತ್ತಿದ್ದ ದಾಂಡೇಲಿಯ ಶ್ಯಾಂ ಸುಂದರನ್ನು ಬೈಕ್ನಲ್ಲಿ ಹಿಂಬಾಲಿಸಿ ಬಂದ ಮೂವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.