ಧಾರಾಕಾರ ಮಳೆಗೆ ಈರುಳ್ಳಿ ಬೆಳೆ ನಾಶ ! ರೈತರು ಕಂಗಾಲು , ಪರಿಹಾರಕ್ಕೆ ಮನವಿ .

admin
By admin
0 Min Read

ಮರಗಂಟನಾಳ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಸರ್ಕಾರ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ರೈತರು  ಮನವಿ ನೀಡಿದರು.
ಬರಗಾಲಕ್ಕೆ ತುತ್ತಾಗಿ ಬೆಳೆ ಕೈಗೆಟುಕದೆ ರೈತರು ಕಂಗಾಲಾಗಿದ್ದರು.

ಈ ವರ್ಷ ಬೆಳೆ ಕೈಗೆಟುಕಲಿದೆ ಆಶಾಭಾವನೆ ಹೊಂದಿದ ರೈತರಿಗೆ ಧಾರಾಕಾರ ಸುರಿದ ಮಳೆಗೆ ಬೆಳೆ ನಾಶಗೊಂಡು ನಿರಾಶೆ ಉಂಟು ಮಾಡಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ .

Share This Article