ಧೋನಿಗೆ ಪ್ರೀತಿ ಜಿಂಟಾ ನೀಡಿದ ಆ ಎಚ್ಚರಿಕೆ ನಿಮಗೆ ಗೊತ್ತಾ..? ಪ್ರೀತಿ ಹೀಗೆ ಮಾಡಲ್ಲ ಬಿಡಿ..!

Date:

ಟೀಮ್​ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನ ಹಾಲಿ ನಾಯಕ.. ಕೂಲ್ ಕ್ಯಾಪ್ಟನ್ ಎಂದೇ ಮನೆ ಮಾತಾಗಿರುವ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಝೀವಾ ಈಗ ಮಾಹಿ ಅಷ್ಟೇ ಫೇಮಸ್​.. ಝೀವಾ ಧೋನಿ-ಸಾಕ್ಷಿ ಗೆ ಮಾತ್ರ ಜೀವ ಅಲ್ಲ ಇಡೀ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೂ ಝೀವಾ ಅಂದ್ರೆ ಜೀವ..! ಅಂದ್ರೆ, ಮುದ್ದಾದ ಝೀವಾ ಎಂದರೆ ಎಲ್ಲರಿಗೂ ಅಷ್ಟೊಂದು ಅಚ್ಚು-ಮೆಚ್ಚು..! ಇಂಥಾ ಝೀವಾಳನ್ನು ಕಿಡ್ನಾಪ್ ಮಾಡಲು ನಟಿ ಪ್ರೀತಿ ಜಿಂಟಾ ಪ್ಲಾನ್ ಮಾಡಿದ್ದಾರೆ..!
ಪ್ರೀತಿ ಧೋನಿಗೆ ಎಚ್ಚರಿಕೆ ನೀಡಿದ್ದಾರೆ. ಕಿಂಗ್ಸ್ ಇಲೆವೆನ್ ತಂಡ ಒಡತಿಯೂ ಆಗಿರುವ ಪ್ರೀತಿ, ಚೆನ್ನೈ ಸೂಪರ್ ಕಿಂಗ್ಸ್​ನ ಧೋನಿ ಅವರಡೊನೆಯ ಫೋಟೋವನ್ನು ಅಪ್​ಲೋಡ್ ಮಾಡಿ ಕಿಡ್ನಾಪ್​ ಬಗ್ಗೆ ಮಾತಾಡಿದ್ದಾರೆ. ಆ ಟ್ವೀಟ್ ಈಗ ಎಲ್ಲೆಡೆ ಹರಿದಾಡುತ್ತಿದೆ.
ಕ್ಯಾಪ್ಟನ್ ಕೂಲ್ ನನ್ನನ್ನೂ ಒಳಗೊಂಡಂತೆ ಅನೇಕ ಅಭಿಮಾನಿಗಳನ್ನು ನೀವು ಹೊಂದಿದ್ದೀರಿ. ಧೋನಿ, ನಿಮ್ಮ ಮೇಲಿನ ನನ್ನ ನಿಷ್ಠೆ ಈಗ ನಿಮ್ಮ ಮುದ್ದಿನ ಮಗಳು ಝೀವಾ ಮೇಲೆ ಶಿಫ್ಟ್ ಆಗುತ್ತಿದೆ ಎಂದು ಹೇಳಿರುವ ಪ್ರೀತಿ ಜಿಂಟಾ, ನಿಮ್ಮ ಮಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲ ಎಂದರೆ ನಾನು ನಿಮ್ಮ ಮಗಳನ್ನು ಕಿಡ್ನಾಪ್​ ಮಾಡಬಹುದು ಎಂದು ಕಾಲೆಳೆದಿದ್ದಾರೆ. ಆಮೇಲೆ ಫ್ಯಾನ್ಸ್​ ಈಗ ಸಮಯ ನಿಮ್ಮದು.. ಈ ಫೋಟೋಕ್ಕೊಂದೊಳ್ಳೆ ಕ್ಯಾಪ್ಷನ್ ನೀಡಿ ಎಂದಿದ್ದಾರೆ ಪ್ರೀತಿ..
ಕ್ಯಾಪ್ಟನ್ ಕೂಲ್ ನನ್ನನ್ನು ಸೇರಿ ಬಹಳ ಅಭಿಮಾನಿಗಳನ್ನ ಹೊಂದಿದ್ದಾರೆ. ಆದ್ರೆ ಈಗ, ಧೋನಿ ಮೇಲಿನ ನನ್ನ ನಿಷ್ಠೆ ಧೋನಿಯ ಮುದ್ದಿನ ಮಗಳು ಝೀವಾ ಮೇಲೆ ಶಿಫ್ಟ್ ಆಗುತ್ತಿದೆ. ಇಲ್ಲಿ ನಾನು, ಧೋನಿಗೆ ನಿಮ್ಮ ಮಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲ ಅಂದ್ರೆ ನಾನು ನಿಮ್ಮ ಮಗಳನ್ನ ಕಿಡ್ನ್ಯಾಪ್ ಮಾಡಬಹುದು ಎಂದು ಹೇಳುತ್ತಿದ್ದೇನೆ. ಈಗ ನಿಮ್ಮ ಸಮಯ ಫ್ಯಾನ್ಸ್, ನೀವೂ ಈ ಫೋಟೋಗೊಂದು ಕ್ಯಾಪ್ಷನ್ ಕೊಡಿ.” ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...