ನಿಮ್ಮನ್ನು ಕದಲದಂತೆ ಮಾಡುವ , ಕಾಡುವ ಸಿನಿಮಾ ಶಿವಾಜಿ ಸುರತ್ಕಲ್!

Date:

ಒಂದೊಳ್ಳೆ ಸಿನಿಮಾ ಕೂತಲ್ಲಿಂದ ಕದಲದಂತೆ ಪ್ರೇಕ್ಷಕರನ್ನು ಕೂರಿಸಿಕೊಂಡಿರುತ್ತೆ. ಮುಂದೇನಾಗುತ್ತೆ.. ಮುಂದೇನಾಗುತ್ತೆ ಅನ್ನೋ ಕುತೂಹಲವನ್ನು ಕೊನೇತನಕ ಕಾಯ್ದಿರಿಸಿಕೊಂಡು ಹೋಗುತ್ತೆ! ಪಕ್ಕಾ ಮನರಂಜೆನ ಜೊತೆಗೆ ಒಂದೊಳ್ಳೆ ಸಂದೇಶ ಕೂಡ ಆ ಸಿನಿಮಾದಲ್ಲಿ ಅಡಗಿರುತ್ತೆ..! ಅದು ಥಿಯೇಟರಿಂದ ಹೊರ ಬಂದ ಮೇಲೂ ಕಾಡುತ್ತೆ… ಥಿಯೇಟರಿಂದ ಆಚೆ ಬಂದ್​ಮೇಲೆ ಆ ಸಿನಿಮಾ ಬಗ್ಗೆ ಜನ ಮಾತಾಡಿಕೊಳ್ತಾರೆ ಅಂದ್ರೆ ಆ ಸಿನಿಮಾ ಗೆದ್ದಂತೆ..! ಇಂಥಾ ಒಂದು ಪಕ್ಕಾ ಪೈಸಾ ವಸೂಲಿ ಸಿನಿಮಾ ಶಿವಾಜಿ ಸೂರತ್ಕಲ್.
ರಮೇಶ್ ಅರವಿಂದ್ ಅಭಿನಯದ, ಆಕಾಶ್ ಸುರತ್ಕಲ್ ನಿರ್ದೇಶನದ ಶಿವಾಜಿ ಸುರತ್ಕಲ್​ ನಿರೀಕ್ಷೆಗೂ ಮೀರಿದ ಸಿನಿಔತಣವನ್ನು ಸಿನಿರಸಿಕರಿಗೆ ನೀಡಿದೆ. ನಿಗೂಢ ಸಾವಿನ ಪ್ರಕರಣದ ಸುತ್ತ ಕಥೆ ಸುತ್ತುತ್ತದೆ. ಆ ಒಂದು ಕೊಲೆ ಪ್ರಕರಣ ಹಾಗೂ ನಾಯಕ ಶಿವಾಜಿ ಸುರತ್ಕಲ್ ಗೆ​ ಕಾಡುವ ಪತ್ನಿ ಜನನಿ (ರಾಧಿಕಾ ನಾರಾಯಣ್) ನಿಗೂಢ ಸಾವು. ಕೊನೆಯಲ್ಲಿ ಎಲ್ಲದಕ್ಕೂ ಉತ್ತರ..
ರಣಗಿರಿ ಎಂಬಲ್ಲಿ ಸಚಿವರ ಮಗನ ಸಾವು.. ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಬೇಧಿಸುವ ಜವಬ್ದಾರಿ ಹೊತ್ತ ಶಿವಾಜಿ ಸುರತ್ಕಲ್..ಅವರಿಗೆ ಎದುರಾಗುವ ಸವಾಲುಗಳು , ಸಸ್ಪೆನ್ಸ್ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ.ರಮೇಶ್​ ಅರವಿಂದ್ ಅವರ 101ನೇ ಸಿನಿಮಾ ಇದಾಗಿದ್ದು, ಅವರ ನಟನೆಯಂತು ಅತ್ಯಾದ್ಭುತ. ಸಿನಿಮಾದುದ್ದಕ್ಕೂ ಅವರೊಡನೆ ಇರುವ ಗೋವಿಂದ ಪಾತ್ರದಾರಿ ರಘು ರಮಣಕೊಪ್ಪ ಹಾಸ್ಯದ ಪಂಚ್​ಗೆ ಫುಲ್​ ಮಾರ್ಕ್ಸ್​​ ಕೊಡ್ಲೇ ಬೇಕು. ಇನ್ನುಳಿದಂತೆ ರಾಧಿಕಾ ನಾರಾಯಣ್, ಅವಿನಾಶ್, ರಮೇಶ್ ಪಂಡಿತ್, ರೋಹಿತ್​ ಭಾನುಪ್ರಕಾಶ್ ನಟನೆ ಕೂಡ ತುಂಬಾ ಇಷ್ಟವಾಗುತ್ತೆ. ಸಂಗೀತ, ಕ್ಯಾಮರಾ ಕೈಚಳಕ ಸೇರಿದಂತೆ ಇಡೀ ಶಿವಾಜಿ ಸುರತ್ಕಲ್​ ಟೀಮ್​ ಶ್ರಮದಿಂದ ಒಂದೊಳ್ಳೆ ಮೂವಿ ಬಂದಿದೆ. ಒಟ್ನಲ್ಲಿ ಪಕ್ಕಾ ಸಸ್ಪೆನ್ಸ್ ‘ಶಿವಾಜಿ ಸುರತ್ಕಲ್’ ನಿಮ್ಗೂ ಇಷ್ಟವಾಗುತ್ತೆ ಅನ್ನೋದ್ರಲ್ಲಿ ಡೌಟಿಲ್ಲ.
ಚಿತ್ರ: ಶಿವಾಜಿ ಸುರತ್ಕಲ್
ನಿರ್ದೇಶಕ: ಆಕಾಶ್ ಶ್ರೀವತ್ಸ
ನಿರ್ಮಾಪಕ: ರೇಖಾ.ಕೆ.ಎನ್, ಅನೂಪ್ ಗೌಡ
ತಾರಗಣ : ರಮೇಶ್‍ಅರವಿಂದ್, ರಾಧಿಕಾ ನಾರಾಯಣ್, ಆರೋಹಿ, ಅವಿನಾಶ್, ರಘು ರಾಮನಕೊಪ್ಪ, ಇತರರು.
ಸಂಗೀತ: ಜ್ಯೂಡಾ ಸ್ಯಾಂಡಿ
ಛಾಯಾಗ್ರಹಣ: ಗುರುಪ್ರಸಾಧ್.ಎಂ.ಜಿ

ರೇಟಿಂಗ್​ : 4.5/5
-ರಘುಭಟ್

Share post:

Subscribe

spot_imgspot_img

Popular

More like this
Related

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...