ಪರೀಕ್ಷೆ ಬರೆಯಬೇಕು ಅಂದ್ರೆ ತಾಳಿ ತೆಗೆಯಬೇಕು ಅಂತಾ ಹೇಳಿದ್ರು: ಅಭ್ಯರ್ಥಿ ರಾಜಮ್ಮ

Date:

ಕಲಬುರಗಿ: ಕಲಬುರಗಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಗ್ರೂಪ್ ಸಿ ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ತಾಳಿ, ಕಾಲುಂಗುರ ಹಾಗೂ ಕಿವಿಯಲ್ಲಿದ್ದ ಓಲೆಗಳನ್ನು ಅಧಿಕಾರಿಗಳು ತೆಗೆಸಿದ್ದರು. ಈ ವೇಳೆ ತಾಳಿ ತೆಗೆಯಲು ಹಿಂದೇಟು ಹಾಕಿದ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು. ಅಲ್ಲದೇ ಕಿವಿ ಓಲೆ ತೆಗೆಯಲು ಬರದಿದ್ದಾಗ ಚಿನ್ನದಂಗಡಿಗೆ ಹೋಗಿ ಮಹಿಳೆಯರು ತೆಗೆಸಿಕೊಂಡು ಬಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಅಭ್ಯರ್ಥಿ ರಾಜಮ್ಮ ನೋವಿನ ಮಾತುಗಳಾನ್ನಾಡಿದ್ದಾರೆ.
ಹಿಂದು ಸಂಪ್ರದಾಯದಲ್ಲಿ ತಾಳಿ ಕಾಲುಂಗರಕ್ಕೆ ತನ್ನದೇ ಆದ ಸಂಸ್ಕ್ರತಿಯಿದೆ. ಗಂಡ ಸತ್ತಾಗ ಅಥವಾ ಹೆರಿಗೆ ಸಮಯದಲ್ಲಿ ಮಾತ್ರ ತಾಳಿ ತೆಗೆಯುತ್ತೆವೆ. ಇಷ್ಟು ಹೇಳಿದ್ರು ಪರೀಕ್ಷಾ ಸಿಬ್ಬಂದಿ ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ, ಪರೀಕ್ಷೆ ಬರೆಯಬೇಕು ಅಂದ್ರೆ ತಾಳಿ ತೆಗೆಯಬೇಕು ಅಂತಾ ಹೇಳಿದ್ರು. ಹೀಗಾಗಿ ಪರೀಕ್ಷೆ ದೃಷ್ಟಿಯಿಂದ ಸಹೋದರನ ಕೈಯಲ್ಲಿ ತಾಳಿ ಕೊಟ್ಟು ಹೋದ್ವಿ, ಪರೀಕ್ಷೆ ಬರೆದ ಬಳಿಕ ಮತ್ತೆ ಬಂದು ತಾಳಿ ಧರಿಸಿದಿವಿ, ಈ ವಿಷ್ಯ ನಮ್ಮ ಮನಸ್ಸಿಗೆ ಆಘಾತ ತಂದಿದೆ ಸರ್ಕಾರ ಹೀಗೆ ಮಾಡಬಾರದಿತ್ತು ಎಂದು ಮಾಧ್ಯಮಗಳಿಗೆ ಪರೀಕ್ಷಾ ಅಭ್ಯರ್ಥಿ ರಾಜಮ್ಮ ನೋವಿನ ಮಾತುಗಳಾನ್ನಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ʼನಲ್ಲೇ ತಮ್ಮದೇ ಪಕ್ಷದ ಶಾಸಕರನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ಮತ್ತು ಪಕ್ಷದ ಒಳಗಿನ ಅಧಿಕಾರಕ್ಕಾಗಿ...

ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಸಿದರೆ ಬಿಜೆಪಿಗೆ ಜನಾಶೀರ್ವಾದ: ಬೊಮ್ಮಾಯಿ

ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಸಿದರೆ ಬಿಜೆಪಿಗೆ...

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮತ್ತೊಮ್ಮೆ...

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ ಮಹಿಳೆಯರ...