ಪುನೀತ್ ಬೆನ್ನಿಗೆ ಚೂರಿ ಹಾಕಿದ ರಾಜ್ಯ ಸರ್ಕಾರ

Date:

ನಾವು ಚಿತ್ರಮಂದಿರಗಳ ಮೇಲೆ ಯಾವುದೇ ರೀತಿಯ ಹೇಳಿಕೆ ಹೇರುವುದಿಲ್ಲ ನಿಮ್ಮ ಪಾಡಿಗೆ ನೀವು ಸಿನಿಮಾವನ್ನ ಬಿಡುಗಡೆ ಮಾಡಿ ಮಾಸ್ಕ್ ಧರಿಸಿ ಸಿನಿಮಾ ನೋಡಿ ನಾವು ನಿಮಗೆ ಅಡ್ಡಿ ಮಾಡುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಟ್ವೀಟ್ ಮುಖಾಂತರ ಯುವರತ್ನ ಚಿತ್ರತಂಡಕ್ಕೆ ಆಶ್ವಾಸನೆಯನ್ನು ನೀಡಿದ್ದರು.

 

ರಾಜಕಾರಣಿಗಳ ಆಶ್ವಾಸನೆಯನ್ನು ನಂಬಬೇಡಿ ಎಂದು ಎಷ್ಟೇ ಹೇಳಿದರೂ ಕೇಳದ ನಾವು ನೀವೆಲ್ಲರೂ ಯಡಿಯೂರಪ್ಪನವರ ಈ ಟೊಳ್ಳು ಆಶ್ವಾಸನೆಯನ್ನು ನಂಬಿ ಮೋಸ ಹೋಗಿದ್ದಂತೂ ನಿಜ. ಕೇವಲ ನಾವು ನೀವು ಮಾತ್ರವಲ್ಲ ಯುವರತ್ನ ಚಿತ್ರತಂಡ ಮತ್ತು ಪುನೀತ್ ರಾಜ್ ಕುಮಾರ್ ಅವರು ಸಹ ಯಡಿಯೂರಪ್ಪನವರ ಮೋಸದ ಮಾತಿಗೆ ಮರುಳಾದರು.

 

 

ನಿಮ್ಮ ಪಾಡಿಗೆ ನೀವು ಸಿನಿಮಾ ರಿಲೀಸ್ ಮಾಡಿ ನಾವು ಯಾವುದೇ ಕಾರಣಕ್ಕೂ ಚಿತ್ರಮಂದಿರದ ಮೇಲೆ ಅರ್ಧದಷ್ಟು ಭಾಗ ಬ್ಯಾನ್ ಮಾಡುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪನವರು ನಾಳೆಯಿಂದಲೇ ರಾಜ್ಯಾದ್ಯಂತ ಶೇಕಡಾ 50 ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ನೀಡುತ್ತೇವೆ ಎಂದು ಹೊಸ ಕಾನೂನು ಜಾರಿಗೆ ತಂದಿದೆ. ಹಾಗಾದರೆ ಅಂದು ಆಶ್ವಾಸನೆ ನೀಡಿದ್ದ ಮಾತು ಎಲ್ಲಿಗೆ ಹೋಯ್ತು? ನಿಮ್ಮ ಪಾಡಿಗೆ ನೀವು ಸಿನಿಮಾ ರಿಲೀಸ್ ಮಾಡಿ ಎಂದು ಮುಂದೆ ಬಿಟ್ಟು ನಟರಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಎಷ್ಟು ಸರಿ?

 

ರಾಜಕಾರಣಿಗಳ ಬಾಯಿಂದ ಬರೋ ಮಾತೆಲ್ಲ ಸುಳ್ಳು ಎಂದು ಹಲವಾರು ಮಂದಿ ಹೇಳುತ್ತಾರೆ ಇದೀಗ ಸಿನಿಮಾ ವಿಚಾರದಲ್ಲಿ ಅದನ್ನ ಸ್ವತಃ ರಾಜಕಾರಣಿಗಳು ಪದೇ ಪದೇ ಸಾಬೀತು ಪಡಿಸಿಕೊಳ್ಳುತ್ತಿದ್ದಾರಾ? ಅವರು ಪ್ರತಿನಿತ್ಯ ಓಡಾಡುವ ಜಾಗದಲ್ಲಿ ಹಲವಾರು ಮಂದಿಯ ಗುಂಪು ಕಟ್ಟಿಕೊಂಡು ಹೊರಡುತ್ತಾರೆ ಸಿನಿಮಾಗಳ ಮೇಲೆ ಈ ತಾರತಮ್ಯ ಯಾಕೆ ಎಂದು ನೆಟ್ಟಿಗರು ರಾಜ್ಯ ಸರ್ಕಾರಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಕಾಮೆಂಟ್ ಮಾಡುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...