ಪೂರ್ವಜನ್ಮದಲ್ಲಿ ನೀವು ಏನ್ ಆಗಿದ್ರಿ ಗೊತ್ತಾ.?

Date:

ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ರಿ…? ಅಯ್ಯೋ,  ಚಿಕ್ಕವರಿದ್ದಾಗ ಏನ್  ಮಾಡಿದ್ವಿ, ಹೇಗ್ ಇದ್ವಿ ಅನ್ನೋದೇ ಸರಿಯಾಗಿ ನೆನಪಿರಲ್ಲ..! ಹೀಗಿರುವಾಗ ಹೋದ್ ಜನ್ಮದ್ದು ಯಾವನಿಗೆ ಗೊತ್ತಿರುತ್ತೆ..? ಅಷ್ಟೇ ಅಲ್ಲ.. ಹೋದ್ ಜನ್ಮ ಅನ್ನೋದೆಲ್ಲ ಇಲ್ಲ.. ಅಂತೀರಾ..? ನೀವು ನಂಬೋದಾದ್ರೆ ನಂಬಿ.. ನಮ್ಗೂ ಯಾರೋ ಹೇಳಿದ್ದು, ನಾವ್ ಕೇಳಿದ್ದು, ಒಂಥರಾ ಇಂಟ್ರೆಸ್ಟಿಂಗ್ ಅಂತ ಅನಿಸ್ತು..! ಅದ್ಕೆ ನಿಮ್ಗೂ ತಿಳಿಸ್ತಾ ಇದ್ದೀವಿ..!

ಹೇಗ್ ಗೊತ್ತಾ ತಿಳಿಯೋದ್..?
ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ ಆಗಸ್ಟ್ 9, 1992 ಅಂತ ಅನ್ಕೊಳ್ಳಿ. ಈಗ ತಿಂಗಳು+ ದಿನಾಂಕ+ ಇಸವಿ ಕೂಡಬೇಕು :
8+9+1991 =2009.
ಈಗ ಇವುಗಳನ್ನು ಕೂಡಿ 2+0+0+9 =11
ನಂತರ ಇದನ್ನು ಸಹ ಕೂಡಿ 1+1 =2 ಇದು ನಿಮ್ಮ ಲೈಫ್ ಪಾತ್ ನಂಬರ್..!
ಈಗ ನಿಮ್ಮ ಹೆಸರಲ್ಲಿನ ಸ್ವರಾಕ್ಷರಗಳ ನಂಬರ್‍ಗಳನ್ನು ತಿಳಿದು ಅವುಗಳನ್ನು ಕೂಡಬೇಕು.
ಉದಾಹರಣೆಗೆ ನಿಮ್ಮ ಹೆಸರು RAKSHITH   ಎಂದಿರಲಿ. ಇಲ್ಲಿನ ಸ್ವರಗಳು A+I

1+9=10 ಇದನ್ನು ಮತ್ತೆ ಕೂಡಬೇಕು1+0= 1 ನಿಮ್ಮ ನಿಮ್ಮ ಇನ್ನರ್ ನೀಡ್ ನೀಡ್ ನಂಬರ್ 1
ಈಗ ಲೈಫ್ ಪಾತ್ ನಂಬರ್ + ಇನ್ನರ್ ನೀಡ್ ನಂಬರ್ ಕೂಡಿ..
02+01= 03 ಇದನ್ನು ಮತ್ತೆ ಕೂಡಿ 0+3=3
3 ನಿಮ್ಮ ಪೂರ್ವ ಜನ್ಮದ ಸಂಖ್ಯೆ.. (ಪೂರ್ವ ಜನ್ಮದ ಸಂಖ್ಯೆ 1 ರಿಂದ 9ರವರೆಗೆ ಇರುತ್ತೆ..

1 : ನಿಮ್ಮ ಪೂರ್ವ ಜನ್ಮದ ಸಂಖ್ಯೆ 1 ಆಗಿದ್ದಲ್ಲಿ ಹೋದ್ ಜನ್ಮದಲ್ಲಿ ರಾಜ ಅಥವಾ ರಾಣಿ, ಪೊಲೀಸ್ ಅಧಿಕಾರಿ/ ಪೊಲಿಟಿಕಲ್ ಲೀಡರ್ (ರಾಜಕೀಯ ನಾಯಕ) ಆಗಿರ್ತೀರಿ..!

2: ನಿಮ್ಮ ಪೂರ್ವ ಜನ್ಮದ ಸಂಖ್ಯೆ 2 ಬಂದಲ್ಲಿ .. ನೀವು ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಎಲ್ಲಾವನ್ನೂ ಕಳೆದು ಕೊಂಡವರಂತೆ ಇರ್ತೀರಿ..! ನೀವು ಯಾವ ಕೆಲಸವನ್ನೂ ಮಾಡಿರಲ್ಲ..! ಸಿಕ್ಕಾಪಟ್ಟೆ ಸಮಸ್ಯೆ ಎದುರಿಸಿರ್ತೀರಿ. ಬರೀ ಕಷ್ಟವೇ ನಿಮ್ಮ ಜೀವನ ಆಗಿತ್ತು..! ನೀವು ಅವಳಿ-ಜವಳಿ ಆಗಿದ್ರಿ..!

3: 3 ನಿಮ್ಮ ಪೂರ್ವ ಜನ್ಮದ ಸಂಖ್ಯೆ ಆಗಿದ್ರೆ ನೀವು ಕಲಾವಿದರು ಅಥವಾ ಬರಹಗಾರರಾಗಿರ್ತೀರಿ.

4: ಹಿಂದಿನ ಜನ್ಮದ ಸಂಖ್ಯೆ 4 ಆಗಿದ್ದಲ್ಲಿ ಗುಲಾಮರಾಗಿರ್ತೀರಿ.

5 : ನಿಮ್ಮ ಪೂರ್ವ ಜನ್ಮದ ನಂಬರ್ 5..? ನೀವು ಶ್ರೇಷ್ಠ ಯೋಧರಾಗಿದ್ರಿ..!

6: ನಿಮ್ಮ ಹೋದ್ ಜನ್ಮದ ನಂಬರ್  ಆರ..? ಹಾಗದ್ರೆ ನೀವೊಬ್ಬ ಸನ್ಯಾಸಿ ಅಥವಾ ಗುರು ಆಗಿದ್ರಿ.

7:  7 ನಿಮ್ಮ ಪಾಸ್ಟ್ ಲೈಫ್ ನಂಬರ್ ಆಗಿದ್ಯಾ..? ನೀವು ವೈದ್ಯ ಅಥವಾ  ವ್ಯಾಪಾರಿ ಆಗಿರುತ್ತೀರಿ..!
8 : ಪೂರ್ವ ಜನ್ಮದ ಸಂಖ್ಯೆ 8 ಆಗಿದ್ದಲ್ಲಿ ನೀವು  ಬೋಧಕರು ಅಥವಾ ವಿಮರ್ಶಕರಾಗಿರುತ್ತೀರಿ.
9 : ಪೂರ್ವ ಜನ್ಮದ ನಂಬರ್ 9 ಆಗಿದ್ದಲ್ಲಿ ಜ್ಯೋತಿಷಿ ಆಗಿರುತ್ತೀರಂತೆ..!

Share post:

Subscribe

spot_imgspot_img

Popular

More like this
Related

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ ಓದಿ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ...