ಪ್ಲಾಸ್ಟಿಕ್ ಬಾಟಲಿಗೇಕೆ ಪೆಟ್ರೋಲ್ ತುಂಬಬಾರದು?

Date:

ಮಾರ್ಗಮಧ್ಯದಲ್ಲಿ ಪೆಟ್ರೋಲ್ ಕಾಲಿಯಾಗಿ ನಿಮ್ಮ ಗಾಡಿ ಕೈ ಕೊಡುತ್ತೆ. ಆಗ ನೀವು ನಿಮ್ಮ ಬಳಿಯ ಕಾಲಿ ನೀರಿನ ಬಾಟಲಿಲಿ ಹತ್ತಿರದ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತುಂಬಿಸಿಕೊಳ್ತೀರಿ. ಆದರೆ, ನಿಮಗೆ ಗೊತ್ತೇ? ಕಾಲಿ ನೀರಿ ಬಾಟಲಿಲಿ‌ ಪೆಟ್ರೋಲ್ ತುಂಬಿಸೋದು ತಪ್ಪು , ಅದು‌ ಕಾನೂನು ಬಾಹಿರವೂ ಹೌದು‌ .


ಯಸ್, ಆಯಿಲ್ ಮಾರ್ಕೆಟಿಂಗ್ ಕಂಪನಿ ಮಾಜಿ ಸೇಲ್ಸ್ ಎಕ್ಸಿಕ್ಯೂಟಿವ್ ಶಿವಂ ಚಾವ್ಲಾ ಅವರು ಹೇಳುವಂತೆ ಭಾರತದಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ತುಂಬಿಸೋದು ಇಲೀಗಲ್ …! ಆದರೆ, 2002ರ ಪೆಟ್ರೋಲಿಯಂ ನಿಯಮಗಳ ಸೆಕ್ಷನ್ 8 ರ ಪ್ರಕಾರ ಗ್ಲಾಸ್ವೇರ್ ಅಥವಾ ಸ್ಟೋನ್ ವೇರ್ ಬಾಟಲಿಗಳಲ್ಲಿ 1 ಲೀಟರ್ ವರೆಗೆ ಹಾಗೂ ಲೋಹದ ಕ್ಯಾನ್ (ಮೆಟಲ್ ಕ್ಯಾನ್) ಗಳಲ್ಲಿ 25 ಲೀಟರ್ ವರೆಗೆ ಖರೀದಿಸಲು ಪರವಾನಗಿ (ಲೈಸೆನ್ಸ್) ಇದೆ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪೆಟ್ರೋಲ್ ಏಕೆ ತುಂಬಿಸಬಾರದು?

1) ಪರವಾನಗಿ ಅಥವಾ ಲೈಸೆನ್ಸ್ ಮಿತಿ ಉಲ್ಲಂಘನೆ
: ಪೆಟ್ರೋಲ್ ಬಂಕ್ ಗಳು ಪಿಇಎಸ್ಒ ( PESO) (Petroleum and Explosive Safety Organization) ನಿಯಂತ್ರಣದಲ್ಲಿವೆ. ಆದ್ದರಿಂದ ಕೆಲವು ನಿಯಮಗಳನ್ನು ಪಾಲಿಸಲೇ ಬೇಕು‌.
ಈ ಮೊದಲೇ ಹೇಳಿದಂತೆ 2002ರ ಪ್ರೆಟೋಲಿಯಂ ನಿಯಮಗಳ ಪ್ರಕಾರ ಪೆಟ್ರೋಲ್ ಪಂಪ್ ಗಳಿಗೆ ಕೇವಲ ವಾಹನಗಳ ಟ್ಯಾಂಕ್ ಗಳಿಗೆ ಮಾತ್ರ ಪೆಟ್ರೋಲ್ ಫಿಲ್ ಮಾಡುವ ಲೈಸೆನ್ಸ್ ನೀಡಲಾಗಿದೆ. ಅದೇರೀತಿ ಗ್ಲಾಸ್ವೇರ್, ಸ್ಟೋನ್ ವೇರ್ ಬಾಟಲಿಗಳಿಗೆ 1 ಲೀಟರ್ ವರೆಗೆ, ಮೆಟಲ್ ಕ್ಯಾನ್ ಗಳಿಗೆ 25 ಲೀಟರ್ ತನಕ ತುಂಬ ಬಹುದು.

2) ಪ್ಲಾಸ್ಟಿಕ್ ಕರಗುತ್ತದೆ : ನಾವು ಸಾಮಾನ್ಯವಾಗಿ ಪೆಟ್ರೋಲ್ ಅನ್ನು ಬಾಟಲಿಗೆ ತುಂಬಿಸುವುದಾದರೆ ಮಿನರಲ್ ವಾಟರ್ ಬಾಟಲ್ ಗೆ ತುಂಬಿಸ್ತೀವಿ. ಈ ಬಾಟಲ್ ಗಳು ಪಾಲಿಥೈಲೀನ್ ಟೆರಫ್ತಾಲೇಟ್ (ಪಿಇಟಿ) ನಿಂದ ಮಾಡಲ್ಪಟ್ಟಿವೆ. ಇವು ಪೆಟ್ರೋಲ್ ನಲ್ಲಿ ಕರಗುತ್ತವೆ. ಪಿಇಟಿ ಬಾಟಲ್ ನಲ್ಲಿ ತುಂಬಿಸಿದಾಗ ಅದು ಕರಗಿ ಪೆಟ್ರೋಲ್ ಲೀಕ್ ಆಗುತ್ತದೆ. ಇದು ಅಪಾಯಕಾರಿ.

3) ಅಸಾಮಾಜಿಕ ಅಂಶಗಳು ಅಥವಾ ಅನ್ ಸೋಶಿಯಲ್ ಎಲಿಮೆಂಟ್ಸ್ : ಸಮಾಜದ ಶಾಂತಿ ಕದಲುವ ಘಟನೆಗಳಲ್ಲಿ ಬಳಸಲಾಗುತ್ತದೆ. ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಸಣ್ಣಪುಟ್ಟ ಬ್ಲಾಸ್ಟ್ ಮಾಡೋದು, ವಾಹನಗಳನ್ನು ಸುಡುವುದು , ಬೆಂಕಿ ಹಚ್ಚುವುದು ಮೊದಲಾದ ದುಷ್ಕೃತ್ಯಗಳಿಗೆ ಬಳಕೆ ಮಾಡಿದವುದರಿಂದ ಬಾಟಲಿಗೆ ತುಂಬಿಸುವುದಿಲ್ಲ‌.

4) ಅಪಾಯಕಾರಿಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ತಗಲುವ ಸಂಭವ ಇರುವುದರಿಂದ ಪ್ಲಾಸ್ಟಿಕ್ ಬಾಟಲಿಗಳಿಗೆ ಪೆಟ್ರೋಲ್ ತುಂಬಿಸಬಾರದು.

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...