ಪ್ಲಾಸ್ಟಿಕ್ ಬಾಟಲಿಗೇಕೆ ಪೆಟ್ರೋಲ್ ತುಂಬಬಾರದು?

Date:

ಮಾರ್ಗಮಧ್ಯದಲ್ಲಿ ಪೆಟ್ರೋಲ್ ಕಾಲಿಯಾಗಿ ನಿಮ್ಮ ಗಾಡಿ ಕೈ ಕೊಡುತ್ತೆ. ಆಗ ನೀವು ನಿಮ್ಮ ಬಳಿಯ ಕಾಲಿ ನೀರಿನ ಬಾಟಲಿಲಿ ಹತ್ತಿರದ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತುಂಬಿಸಿಕೊಳ್ತೀರಿ. ಆದರೆ, ನಿಮಗೆ ಗೊತ್ತೇ? ಕಾಲಿ ನೀರಿ ಬಾಟಲಿಲಿ‌ ಪೆಟ್ರೋಲ್ ತುಂಬಿಸೋದು ತಪ್ಪು , ಅದು‌ ಕಾನೂನು ಬಾಹಿರವೂ ಹೌದು‌ .


ಯಸ್, ಆಯಿಲ್ ಮಾರ್ಕೆಟಿಂಗ್ ಕಂಪನಿ ಮಾಜಿ ಸೇಲ್ಸ್ ಎಕ್ಸಿಕ್ಯೂಟಿವ್ ಶಿವಂ ಚಾವ್ಲಾ ಅವರು ಹೇಳುವಂತೆ ಭಾರತದಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ತುಂಬಿಸೋದು ಇಲೀಗಲ್ …! ಆದರೆ, 2002ರ ಪೆಟ್ರೋಲಿಯಂ ನಿಯಮಗಳ ಸೆಕ್ಷನ್ 8 ರ ಪ್ರಕಾರ ಗ್ಲಾಸ್ವೇರ್ ಅಥವಾ ಸ್ಟೋನ್ ವೇರ್ ಬಾಟಲಿಗಳಲ್ಲಿ 1 ಲೀಟರ್ ವರೆಗೆ ಹಾಗೂ ಲೋಹದ ಕ್ಯಾನ್ (ಮೆಟಲ್ ಕ್ಯಾನ್) ಗಳಲ್ಲಿ 25 ಲೀಟರ್ ವರೆಗೆ ಖರೀದಿಸಲು ಪರವಾನಗಿ (ಲೈಸೆನ್ಸ್) ಇದೆ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪೆಟ್ರೋಲ್ ಏಕೆ ತುಂಬಿಸಬಾರದು?

1) ಪರವಾನಗಿ ಅಥವಾ ಲೈಸೆನ್ಸ್ ಮಿತಿ ಉಲ್ಲಂಘನೆ
: ಪೆಟ್ರೋಲ್ ಬಂಕ್ ಗಳು ಪಿಇಎಸ್ಒ ( PESO) (Petroleum and Explosive Safety Organization) ನಿಯಂತ್ರಣದಲ್ಲಿವೆ. ಆದ್ದರಿಂದ ಕೆಲವು ನಿಯಮಗಳನ್ನು ಪಾಲಿಸಲೇ ಬೇಕು‌.
ಈ ಮೊದಲೇ ಹೇಳಿದಂತೆ 2002ರ ಪ್ರೆಟೋಲಿಯಂ ನಿಯಮಗಳ ಪ್ರಕಾರ ಪೆಟ್ರೋಲ್ ಪಂಪ್ ಗಳಿಗೆ ಕೇವಲ ವಾಹನಗಳ ಟ್ಯಾಂಕ್ ಗಳಿಗೆ ಮಾತ್ರ ಪೆಟ್ರೋಲ್ ಫಿಲ್ ಮಾಡುವ ಲೈಸೆನ್ಸ್ ನೀಡಲಾಗಿದೆ. ಅದೇರೀತಿ ಗ್ಲಾಸ್ವೇರ್, ಸ್ಟೋನ್ ವೇರ್ ಬಾಟಲಿಗಳಿಗೆ 1 ಲೀಟರ್ ವರೆಗೆ, ಮೆಟಲ್ ಕ್ಯಾನ್ ಗಳಿಗೆ 25 ಲೀಟರ್ ತನಕ ತುಂಬ ಬಹುದು.

2) ಪ್ಲಾಸ್ಟಿಕ್ ಕರಗುತ್ತದೆ : ನಾವು ಸಾಮಾನ್ಯವಾಗಿ ಪೆಟ್ರೋಲ್ ಅನ್ನು ಬಾಟಲಿಗೆ ತುಂಬಿಸುವುದಾದರೆ ಮಿನರಲ್ ವಾಟರ್ ಬಾಟಲ್ ಗೆ ತುಂಬಿಸ್ತೀವಿ. ಈ ಬಾಟಲ್ ಗಳು ಪಾಲಿಥೈಲೀನ್ ಟೆರಫ್ತಾಲೇಟ್ (ಪಿಇಟಿ) ನಿಂದ ಮಾಡಲ್ಪಟ್ಟಿವೆ. ಇವು ಪೆಟ್ರೋಲ್ ನಲ್ಲಿ ಕರಗುತ್ತವೆ. ಪಿಇಟಿ ಬಾಟಲ್ ನಲ್ಲಿ ತುಂಬಿಸಿದಾಗ ಅದು ಕರಗಿ ಪೆಟ್ರೋಲ್ ಲೀಕ್ ಆಗುತ್ತದೆ. ಇದು ಅಪಾಯಕಾರಿ.

3) ಅಸಾಮಾಜಿಕ ಅಂಶಗಳು ಅಥವಾ ಅನ್ ಸೋಶಿಯಲ್ ಎಲಿಮೆಂಟ್ಸ್ : ಸಮಾಜದ ಶಾಂತಿ ಕದಲುವ ಘಟನೆಗಳಲ್ಲಿ ಬಳಸಲಾಗುತ್ತದೆ. ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಸಣ್ಣಪುಟ್ಟ ಬ್ಲಾಸ್ಟ್ ಮಾಡೋದು, ವಾಹನಗಳನ್ನು ಸುಡುವುದು , ಬೆಂಕಿ ಹಚ್ಚುವುದು ಮೊದಲಾದ ದುಷ್ಕೃತ್ಯಗಳಿಗೆ ಬಳಕೆ ಮಾಡಿದವುದರಿಂದ ಬಾಟಲಿಗೆ ತುಂಬಿಸುವುದಿಲ್ಲ‌.

4) ಅಪಾಯಕಾರಿಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ತಗಲುವ ಸಂಭವ ಇರುವುದರಿಂದ ಪ್ಲಾಸ್ಟಿಕ್ ಬಾಟಲಿಗಳಿಗೆ ಪೆಟ್ರೋಲ್ ತುಂಬಿಸಬಾರದು.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...