ಬಿಗ್ ಬಾಸ್ ಆ ಸ್ಪರ್ಧಿ ಹತ್ತಿರ ಸ್ಪರ್ಮ್ ಕೇಳ್ತಾರಂತೆ ರಾಖಿ

Date:

ಮುಂಬೈ: ನನಗೆ ಅಭಿನವ್ ಶುಕ್ಲಾ ಸ್ಪರ್ಮ್ ದಾನ ಕೊಡಲಿ. ಬಿಗ್‍ಬಾಸ್ ಮನೆಯಿಂದ ಹೊರ ಹೋದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ.

ಈ ಬಾರಿ ಬಿಗ್‍ಬಾಸ್ ಮನೆಗೆ ರಾಖಿ ಸಾವಂತ್ ಎಂಟ್ರಿ ನೀಡಿದಾಗಿನಿಂದ ಶೋಗೆ ಹೊಸ ಲುಕ್ ಬಂದಿದೆ. ರಾಖಿಯ ಜಗಳ, ಫನ್ನಿ ಮಾತುಗಳು, ಡ್ಯಾನ್ಸ್ ನೋಡುಗರನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ವಾಹಿನಿ ಸಹ ರಾಖಿಯ ಮಾತುಗಳನ್ನ ಕೇಂದ್ರಿಕರಿಸಿ ಸಂಚಿಕೆಯ ಪ್ರೋಮೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತದೆ. ಇದೀಗ ಸಹ ಸ್ಪರ್ಧಿ ಸೋನಾಲಿ ಫೋಗಾಟ್ ಜೊತೆ ರಾಖಿ ಮಾತಾಡಿರುವ ಸಣ್ಣ ವೀಡಿಯೋ ಕ್ಲಿಪ್ ಹೊರ ಬಂದಿದ್ದು, ವೈರಲ್ ಆಗುತ್ತಿದೆ.

ಕೆಲ ದಿನಗಳ ಹಿಂದೆ ಬಿಗ್‍ಬಾಸ್ ಜೊತೆ ಮಾತನಾಡುತ್ತಾ, ಅಭಿನವ್ ಶುಕ್ಲಾ ಸ್ಮಾರ್ಟ್ ಮತ್ತು ಹ್ಯಾಂಡ್‍ಸಮ್. ನನಗೆ ಅವರು ಅಂದ್ರೆ ತುಂಬಾ ಇಷ್ಟ. ನಾನು ಅವರನ್ನ ಪಟಾಯಿಸಿಕೊಳ್ಳಲೇ ಎಂದು ಕೇಳಿ ರಾಖಿ ಕಣ್ಣು ಹೊಡೆದಿದ್ದರು. ಆದ್ರೆ ಶುಕ್ಲಾ ಪತ್ನಿ ರುಬಿನಾ ಇದಕ್ಕೆ ಒಪ್ಪಲ್ಲ ಅಲ್ಲವಾ ಎಂದು ಬೇಸರ ಸಹ ವ್ಯಕ್ತಪಡಿಸಿದ್ದರು.

ಸೋನಾಲಿ ಜೊತೆ ಮಾತನಾಡುತ್ತಾ, ಈಗಾಗಲೇ ನನ್ನ ಅಂಡಾಣುಗಳನ್ನ ಫ್ರೀಝರ್ ನಲ್ಲಿರಿಸಿದ್ದೇನೆ. ಅಭಿನವ್ ಶುಕ್ಲಾ ತಮ್ಮ ಸ್ಪರ್ಮ್ ನೀಡಿದ್ರೆ ಮುದ್ದಾದ ಮಗುವಿನ ತಾಯಿ ಆಗುತ್ತೇನೆ. ಇಲ್ಲಿಂದ ಹೊರ ಹೋದ ನಂತರ ಶುಕ್ಲಾ, ಪತ್ನಿ ರುಬಿನಾ ಹಾಗೂ ಅವರ ಕುಟುಂಬಸ್ಥರ ಜೊತೆ ಮಾತನಾಡುತ್ತೇನೆ. ಅಭಿನವ್ ನನ್ನನ್ನು ಡೇಟ್ ಗೆ ಕರೆದುಕೊಂಡು ಹೋಗಿ ಒಂದು ಕಾಫಿ ಕುಡಿಸಲಿ, ಸಿನಿಮಾಗೆ ಕರೆದುಕೊಂಡು ಹೋಗಲಿ ಎಂದು ತಮ್ಮ ಆಸೆಗಳನ್ನ ರಾಖಿ ಹೊರ ಹಾಕಿದ್ದಾರೆ.

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...