ಬಿಗ್ ಬಾಸ್ ಮನೆಯಲ್ಲಿ ಚಾಕಲೇಟ್ ಕದ್ದೋರ್ಯಾರು?

Date:

ಬೆಂಗಳೂರು: ಬಿಗ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಗೆದ್ದುಬೀಗಿದ್ದ ಶುಭಾ ಪೂಂಜಾ ನೇತೃತ್ವದ ಜಾತ್ರೆ ಟೀಂಗೆ ಗೆಲುವಿನ ಉಡುಗೊರೆಯಾಗಿ ಚಾಕೊಲೇಟ್ ಸಿಕ್ಕಿತ್ತು. ಇದನ್ನು ತಿಂದು ಉಳಿದದ್ದನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಪ್ರಶಾಂತ್ ಬೆಳಿಗ್ಗೆ ಎದ್ದು ಚಾಕೊಲೇಟ್‍ನ್ನು ಹುಡುಕಾಡಿದಾಗ ಫ್ರಿಡ್ಜ್ ನಲ್ಲಿ ಇರಲಿಲ್ಲ ಈ ವೇಳೆ ಪ್ರಶಾಂತ್ ಸಂಬರಗಿ, ಡಿ ಟೀಂನವರು ಚಾಕೊಲೇಟ್ ಕದ್ದು ತಿಂದಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ.

ಚಾಕೊಲೇಟ್ ಫ್ರಿಡ್ಜ್ ನಲ್ಲಿ ಕಾಣಿಸಿಸದೆ ಇದ್ದಾಗ ಪ್ರಶಾಂತ್ ಅತ್ತ ಇತ್ತ ಹುಡುಕಾಡಿದ್ದಾರೆ. ನಂತರ ಪ್ರಿಡ್ಜ್ ನ ಪಕ್ಕದಲ್ಲೇ ಇದ್ದ ಬಾಕ್ಸ್ ಒಂದರಲ್ಲಿ ಚಾಕೊಲೇಟ್ ಪ್ರಶಾಂತ್ ಅವರಿಗೆ ಸಿಕ್ಕಿದೆ ಈ ವೇಳೆ ಇದು ಇಲ್ಲಿ ಯಾರು ಇಟ್ಟಿದ್ದಾರೆ ಎಂದು ನನಗೆ ಗೊತ್ತು. ಅಲ್ಲಿ ಇಟ್ಟಿರುವುದರೊಂದಿಗೆ ಇದರಲ್ಲಿದ್ದ ಚಾಕೊಲೇಟ್‍ನಲ್ಲಿ ಒಂದು ಪೀಸ್ ತಿಂದಿದ್ದಾರೆ. ನಾನು ಇಲ್ಲಿ ಬಂದು ಚಾಕೊಲೇಟ್ ತೆಗೆದುಕೊಂಡಿರುವುದನ್ನು ನೋಡಿದ್ದೇನೆ ಎಂದು ಎದುರಾಳಿ ತಂಡದ ವಿರುದ್ಧ ಆರೋಪ ಮಾಡಿದ್ದಾರೆ.

ಇತ್ತ ಅಲ್ಲೇ ಪಕ್ಕದಲ್ಲೇ ಇದ್ದ ದಿವ್ಯ ಉರುಡುಗ ತಂಡ ಇದನ್ನು ಗಮನಿಸುತ್ತಿದ್ದಂತೆ, ಚಾಕೊಲೇಟ್ ತೆಗೆದಿರುವುದು ನಿಜ ಆದರೆ ತಿಂದಿದ್ದಾರೆ ಎಂದು ಆರೋಪ ಮಾಡಿರುವುದು ಸುಳ್ಳು ಎಂದು ಚರ್ಚೆ ನಡೆಸಿದ್ದಾರೆ. ಈ ವೇಳೆ ದಿವ್ಯ ಉರುಡುಗ ನಾನು ಚಾಕೊಲೇಟ್ ತೆಗೆದಿದ್ದು ನಿಜ ಅವರು ಬಂದಾಗ ಆ ಬಾಕ್ಸ್ ಒಳಗೆ ಹಾಕಿ ಬಂದಿದ್ದೆ, ಆದರೆ ನಾನು ಚಾಕೊಲೇಟ್‍ನಿಂದ ಒಂದು ಪೀಸ್ ಮುಟ್ಟಿಲ್ಲ ಎಂದಿದ್ದಾರೆ.

ಇತ್ತ ಅಲ್ಲೇ ಪಕ್ಕದಲ್ಲೇ ಇದ್ದ ದಿವ್ಯ ಉರುಡುಗ ತಂಡ ಇದನ್ನು ಗಮನಿಸುತ್ತಿದ್ದಂತೆ, ಚಾಕೊಲೇಟ್ ತೆಗೆದಿರುವುದು ನಿಜ ಆದರೆ ತಿಂದಿದ್ದಾರೆ ಎಂದು ಆರೋಪ ಮಾಡಿರುವುದು ಸುಳ್ಳು ಎಂದು ಚರ್ಚೆ ನಡೆಸಿದ್ದಾರೆ. ಈ ವೇಳೆ ದಿವ್ಯ ಉರುಡುಗ ನಾನು ಚಾಕೊಲೇಟ್ ತೆಗೆದಿದ್ದು ನಿಜ ಅವರು ಬಂದಾಗ ಆ ಬಾಕ್ಸ್ ಒಳಗೆ ಹಾಕಿ ಬಂದಿದ್ದೆ, ಆದರೆ ನಾನು ಚಾಕೊಲೇಟ್‍ನಿಂದ ಒಂದು ಪೀಸ್ ಮುಟ್ಟಿಲ್ಲ ಎಂದಿದ್ದಾರೆ.

ಈ ವೇಳೆ ತಂಡದ ಸದಸ್ಯ ರಾಜೀವ್ ಅವರು ಚಾಕೊಲೇಟ್ ತಿಂದಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ ಕ್ಯಾಮೆರಾ ನೋಡಿದರೆ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತಿದೆ ಎಂದು ತಮ್ಮ ತಂಡವನ್ನು ಸಮರ್ಥಿಸಿಕೊಂಡಿದ್ದಾರೆ.

ಚಾಕೊಲೇಟ್ ಕದ್ದು ತಿಂದಿಲ್ಲ ಎಂದು ದಿವ್ಯಾ ಟೀಂ ಹೇಳುತ್ತಿರುವುದು ನಿಜನಾ? ಅಥವಾ ಪ್ರಶಾಂತ್ ಸಂಬರಗಿ ಮಾಡಿರುವ ಆರೋಪ ನಿಜಾನ? ಎನ್ನುವುದನ್ನು ಬಿಗ್‍ಬಾಸ್ ತಮ್ಮ ಕ್ಯಾಮೆರಾದಲ್ಲಿ ಸೆರೆಮಾಡಿದ್ದು ಯಾರು ಸತ್ಯ ಹೇಳುತ್ತಿದ್ದಾರೆ ಎನ್ನುವುದು ಮುಂದೆ ತಿಳಿಯಲಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...