ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

Date:

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಮುಂಜಾನೆ ನಮ್ಮ ಮೆದುಳು ತುoಬಾ ಸೂಕ್ಷ್ಮವಾಗಿರುತ್ತದೆ. ಈ ವೇಳೆಯಲ್ಲಿ ನಾವು ಮಾಡುವ ಹಾಗೂ ನೋಡುವ ಕೆಲವು ವಿಷಯಗಳು ನಮ್ಮ ದಿನದ ಶಕ್ತಿಗೆ ನೇರವಾಗಿ ಪ್ರಭಾವ ಬೀರುತ್ತವೆ ಎಂದು ವಾಸ್ತು ಹಾಗೂ ಧಾರ್ಮಿಕ ನಂಬಿಕೆಗಳು ಹೇಳುತ್ತವೆ.

ಕನ್ನಡಿಯಲ್ಲಿ ನೋಡುವ ಅಭ್ಯಾಸ ಅಶುಭ
ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮ ಮುಖ ನೋಡುವ ಅಭ್ಯಾಸವಿರುತ್ತದೆ. ವಾಸ್ತು ಶಾಸ್ತ್ರ ಪ್ರಕಾರ, ಇದು ಅಶುಭವನ್ನು ತರುತ್ತದೆ. ಇಂತಹ ಸಂದರ್ಭದಲ್ಲಿ ನಕಾರಾತ್ಮಕ ಶಕ್ತಿಗಳು ವ್ಯಕ್ತಿಯ ಮೇಲೆ ಪ್ರಾಬಲ್ಯ ಸಾಧಿಸಬಹುದು.

ಮುಂಜಾನೆಯನ್ನು ಹೀಗೆ ಆರಂಭಿಸಿ
ಬೆಳಿಗ್ಗೆ ಎದ್ದ ತಕ್ಷಣ ಎರಡು ಕೈಗಳನ್ನು ಉಜ್ಜಿ, ಅವುಗಳನ್ನು ನೋಡಿ ದೇವರನ್ನು ಸ್ಮರಿಸಿ. ನಂತರ ಭೂಮಾತೆಗೆ ಮತ್ತು ನಿಮ್ಮ ಕುಲದೇವತೆಗೆ ನಮಸ್ಕರಿಸುವ ಮೂಲಕ ದಿನವನ್ನು ಶುಭವಾಗಿ ಆರಂಭಿಸಬಹುದು.

ಸೂರ್ಯ ಪೂಜೆ ಅತ್ಯಂತ ಮಂಗಳಕರ
ಉದಯಿಸುತ್ತಿರುವ ಸೂರ್ಯನಿಗೆ ನಮಸ್ಕರಿಸಿ, ಸ್ನಾನದ ನಂತರ ಪ್ರತಿದಿನ ಅರ್ಘ್ಯ ಅರ್ಪಿಸುವುದು ದೀರ್ಘಾಯುಷ್ಯ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನಂಬಿಕೆ ಇದೆ.

ಇಷ್ಟದೇವರ ಪೂಜೆ ಮತ್ತು ಪ್ರಾರ್ಥನೆ
ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ನಿಮ್ಮ ಇಷ್ಟದೇವರನ್ನು ಪೂಜಿಸಿ, ಯಶಸ್ಸು ಮತ್ತು ಸಂತೋಷಕ್ಕಾಗಿ ಪ್ರಾರ್ಥನೆ ಮಾಡಿ. ಆದರೆ ಬ್ರಷ್ ಮಾಡುವ ಮುನ್ನ ಯಾವುದೇ ಆಹಾರ ಸೇವನೆ ತಪ್ಪಿಸಬೇಕು.

ಮಂಗಳಕರ ಶಬ್ದಗಳನ್ನು ಕೇಳಿ
ಪಕ್ಷಿಗಳ ಚಿಲಿಪಿಲಿ ಅಥವಾ ಮಕ್ಕಳ ನಗು ಶಬ್ದ ಬೆಳಿಗ್ಗೆ ಕೇಳುವುದು ಮಂಗಳಕರ. ಇವು ಮನಸ್ಸಿಗೆ ಶಾಂತಿ ಮತ್ತು ದಿನಕ್ಕೆ ಸಕಾರಾತ್ಮಕ ಶಕ್ತಿ ನೀಡುತ್ತವೆ.

ಎದ್ದಾಕ್ಷಣ ನೋಡಬಾರದ ವಸ್ತುಗಳು
ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ವ್ಯಕ್ತಿಯ ಅಥವಾ ಪ್ರಾಣಿಯ ಮುಖ ನೋಡುವುದನ್ನು ತಪ್ಪಿಸುವುದು ಉತ್ತಮ. ಮೊದಲು ನಿಮ್ಮ ಅಂಗೈ ನೋಡುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ.

Share post:

Subscribe

spot_imgspot_img

Popular

More like this
Related

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...