ಭಾರತಕ್ಕೆ ಎಬಿಡಿ 47 ಕೋಟಿ ಕೊಟ್ರಾ? ಇಲ್ಲಿದೆ ಸತ್ಯಾಂಶ!

Date:

ಸಿನಿಮಾ ನಟರ ಆಗಲಿ ಅಥವಾ ಕ್ರಿಕೆಟಿಗರ ಆಗಲಿ, ಅವರ ಮೇಲಿನ ಅಭಿಮಾನ ಆ ಅಭಿಮಾನಕ್ಕಷ್ಟೇ ಸೀಮಿತವಾಗಬೇಕೆ ಹೊರತು ಅದನ್ನು ಮೀರಬಾರದು. ಒಂದುವೇಳೆ ಆ ಅಭಿಮಾನವನ್ನೂ ಮೀರಿ ಹೆಚ್ಚಿನ ಪ್ರೀತಿ ಹುಚ್ಚು ಆ ಆಟಗಾರ ಅಥವಾ ನಟನ ಮೇಲೆ ಹುಟ್ಟಿದರೆ ಇಂತಹ ಇಲ್ಲ ಸಲ್ಲದ ಬಿಟ್ಟಿ ಪ್ರಚಾರಗಳು ಹುಟ್ಟಿಕೊಂಡು ಬಿಡುತ್ತವೆ.

 

 

ಹೌದು ಸೆಲೆಬ್ರಿಟಿಗಳ ಮೇಲಿನ ಅತಿಯಾದ ಹುಚ್ಚು ಸುಳ್ಳು ಸುದ್ದಿಗಳಿಗೆ ನಾಂದಿ.. ಈ ಹಿಂದೆ ಹಲವಾರು ನಟರ ಅಭಿಮಾನಿಗಳು ನಮ್ಮ ನಟ ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ಅಷ್ಟು ಕೋಟಿ ಕೊಟ್ಟಿದ್ದಾರೆ, ಇಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡಿದ್ದರು. ಅದೆಲ್ಲಾ ಸುಳ್ಳು ಸುದ್ದಿ ಎಂದು ತಿಳಿಯಲು ಸಾಮಾನ್ಯ ಜನರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಇದೀಗ ಅಂತಹದ್ದೇ ಮತ್ತಷ್ಟು ಸಾಲು ಸಾಲು ಸುಳ್ಳುಸುದ್ದಿಗಳು ನಮ್ಮ ನಿಮ್ಮ ನಡುವೆಯೇ ಹರಿದಾಡುತ್ತಿವೆ.

 

 

ಅದರಲ್ಲಿ ಪ್ರಮುಖವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಎಬಿ ಡಿ ವಿಲಿಯರ್ಸ್ ಭಾರತದ ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ 47.5 ಕೋಟಿ ಕೊಟ್ಟಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಷ್ಟೋ ಜನ ಎಬಿಡಿವಿಲಿಯರ್ಸ್ ಅವರು ಇಷ್ಟು ದೊಡ್ಡ ಮಟ್ಟದ ಮೊತ್ತವನ್ನು ದಾನ ಮಾಡಿದ್ದಾರೆ ಎಂದೇ ತಿಳಿದಿದ್ದಾರೆ. ಆದರೆ ಸತ್ಯಾಂಶವೆನೆಂದರೆ ಎಬಿಡಿವಿಲಿಯರ್ಸ್ ಅವರು ಯಾವುದೇ ರೀತಿಯ ಧನಸಹಾಯವನ್ನು ಕೊರೋನಾವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಮಾಡಿಯೇ ಇಲ್ಲ. ಹೀಗಾಗಿ ಎಬಿಡಿವಿಲಿಯರ್ಸ್ ಅವರು 47.5 ಕೋಟಿ ರೂಪಾಯಿ ಹಣವನ್ನು ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ನೀಡಿದ್ದಾರೆ ಎಂಬುದು ಅಕ್ಷರಶಃ ಸುಳ್ಳು ಸುದ್ದಿ. ಇಂತಹ ಸುದ್ದಿಯನ್ನು ಹಂಚಿ ಇತರರಿಗೆ ತಪ್ಪು ಮಾಹಿತಿಯನ್ನು ನೀಡುವುದನ್ನು ಆದಷ್ಟು ಕಡಿಮೆ ಮಾಡಿ.

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...