ಮನೆಮಂದಿಗೆ ಕಿಚ್ಚನ ಕೈರುಚಿಯ ಭಾಗ್ಯ! ಯಾವ ಜನ್ಮದ ಪುಣ್ಯವೋ ಎಂದ ಹನುಮಂತ
ಬಿಗ್ ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ರೋಚಕ ಘಟ ತಲುಪುತ್ತಿದೆ. ಈಗಾಗಲೇ 95 ದಿನಗಳ ಆಟ ಮುಗಿಸಿರುವ ದೊಡ್ಮನೆ ಸದ್ಯದಲ್ಲೇ ಫಿನಾಲೆಗೆ ಎದುರು ನೋಡುತ್ತಿದೆ. ಈ ಮಧ್ಯೆಮನೆಯಲ್ಲಿರುವ ಸ್ಪರ್ಧಿಗಳಿಗೆ ಸುದೀಪ್ ಸರ್ಪ್ರೈಸ್ ಕೊಟ್ಟಿದ್ದಾರೆ. ಮನೆಮಂದಿಗೆ ಕಿಚ್ಚನ ಕೈರುಚಿ ತಿನ್ನುವ ಭಾಗ್ಯ ಸಿಕ್ಕಿದೆ. ಈ ಕುರಿತ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿದೆ.
ಮನೆಯಲ್ಲಿರುವ ಸ್ಪರ್ಧಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಸುದೀಪ್ ಕಳುಹಿಸಿದ್ದಾರೆ. ಊಟ ಸವಿದು ಸ್ಪರ್ಧಿಗಳು ಖುಷಿಪಟ್ಟಿದ್ದಾರೆ. ಸ್ಪರ್ಧಿಗಳಿಗೆ ಡಿನ್ನರ್ ನೈಟ್ ಅರೆಂಜ್ ಮಾಡಿ ಅವರವರ ಅಭಿರುಚಿ ತಕ್ಕಂತೆ ಊಟವನ್ನು ಕಿಚ್ಚ ಕಳುಹಿಸಿದ್ದಾರೆ. ಸುದೀಪ್ ಕಳುಹಿಸಿದ ಊಟ ಸವಿದ ಬಳಿಕ ರಜತ್ ಮಾತನಾಡಿ,
ಇಂತಹವೊಂದು ಸರ್ಪ್ರೈಸ್ ಅನ್ನು ಕ್ರಿಯೆಟ್ ಮಾಡೋಕೆ ನಿಮ್ಮಿಂದ ಮಾತ್ರ ಸಾಧ್ಯ ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೈಯಲ್ಲಿ ನನ್ನ ಹೆಸರು ಬರೆದಿರೋದೆ ನನ್ನ ಭಾಗ್ಯ ಎಂದು ಚೈತ್ರಾ ಖುಷಿಪಟ್ಟಿದ್ದಾರೆ. ಇತ್ತ ಹನುಮಂತ ಮತ್ತು ಧನರಾಜ್ ನಾವು ಬಿಗ್ ಬಾಸ್ಗೆ ಬಂದಿದ್ದು, ಸಾರ್ಥಕವಾಯ್ತು ಎಂದು ಮಾತನಾಡಿದ್ದಾರೆ.