ಮಾಲಶ್ರೀ ಪತಿ ಕೊರೊನಾಗೆ ಬಲಿ- ಇವ್ರು ಯಾವೆಲ್ಲಾ ಸಿನಿಮಾ ನಿರ್ಮಾಣ ಮಾಡಿದ್ರು ಗೊತ್ತಾ?

Date:

ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಇಂದು (ಏ 26) ಕೊರೊನಾ ವೈರಸ್‌ನಿಂದ ನಿಧನರಾಗಿದ್ದಾರೆ. ಕನ್ನಡದ ಅನೇಕ ಸಿನಿಮಾಗಳನ್ನು ರಾಮು ನಿರ್ಮಾಣ ಮಾಡಿದ್ದರು.

ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕಳೆದ ಶನಿವಾರ ದಾಖಲೆಯಾಗಿದ್ದರು. ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿತ್ತು. ಸರಿ ಸುಮಾರು ಇಂದು 8 ಗಂಟೆ ಹೊತ್ತಿಗೆ ರಾಮು ನಿಧನರಾಗಿದ್ದಾರೆ. ‘ಲಾಕಪ್ ಡೆತ್’, ‘AK-47’, ‘ರಾಕ್ಷಸ‌’, ‘ಕಲಾಸಿಪಾಳ್ಯ’, ‘ಅರ್ಜುನ್ ಗೌಡ’ ಸೇರಿ ಅವರು ಹಲವು ಸಿನಿಮಾ ನಿರ್ಮಾಣ ಮಾಡಿದ್ದರು.

’99’, ‘ಮುಂಬೈ’, ‘ದಂಡು’, ‘ಡೇಂಜರ್ ಝೋನ್’, ‘ಗಂಗಾ’, ‘ಶಿವಾಜಿನಗರ’, ‘ವೀರ’, ‘ಎಲೆಕ್ಷನ್’, ‘ಸಾಗರ್’, ‘ಕಂಠಿವೀರ’, ‘ಶಕ್ತಿ’, ‘ಗಂಡೆದೆ’, ‘ಕನ್ನಡದ ಕಿರಣ್ ಬೇಡಿ’, ‘ರಜನಿ’, ‘ಗೂಳಿ’, ‘ಮಸ್ತಿ’, ‘ಪ್ರೀತಿಗಾಗಿ’, ‘ತವರಿನ ಸಿರಿ’, ‘ರಾಕ್ಷಸ’, ‘ಆಟೋ ಶಂಕರ್’, ‘ಮಲ್ಲ’, ‘ದುರ್ಗಿ’, ‘ಕಲಾಸಿ ಪಾಳ್ಯ’, ‘ಕಿಚ್ಚ’, ‘ನಂಜುಂಡಿ’, ‘ಹಾಲಿವುಡ್’, ‘ಲಾ ಆಂಡ್ ಆರ್ಡರ್’, ‘ಬಾವ ಬಾಮೈದ’, ‘ಚಾಮುಂಡಿ’, ‘ಸಿಬಿಐ ದುರ್ಗ’, ‘ಲೇಡಿ ಕಮಿಷನರ್’, ‘ಸಿಂಹದ ಮರಿ’, ‘ಹೆಲೋ ಸಿಸ್ಟರ್’, ‘ಮುತ್ತಿನಂಥ ಹೆಂಡತಿ’, ‘ಗೋಲಿಬಾರ್’ ಮುಂತಾದ ಸಿನಿಮಾಗಳಿಗೆ ರಾಮು ಹಣ ಹೂಡಿದ್ದರು. ‘ಗೋಲಿಬಾರ್’ ಅವರ ಮೊದಲ ನಿರ್ಮಾಣದ ಸಿನಿಮಾ

ರಾಮು ಎಂಟರ್‌ಪ್ರೈಸಸ್ ಮೂಲಕ ರಾಮು ಅವರು 30ಕ್ಕೂ ಅಧಿಕ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ನಟಿ ಮಾಲಾಶ್ರೀ ಅವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ರಾಮು ಅವರು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ. ಮಾಲಾಶ್ರೀ, ಮಗ, ಮಗಳನ್ನು ರಾಮು ಅಗಲಿದ್ದಾರೆ.

 

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...