ಯಡಿಯೂರಪ್ಪಗೆ ಓಟ್ ಹಾಕಲ್ಲ ಪುನೀತ್ ಫ್ಯಾನ್ಸ್!?

admin
1 Min Read

ತಿಳಿದೋ ಅಥವಾ ತಿಳಿಯದೆಯೋ ಪುನೀತ್ ಅಭಿಮಾನಿಗಳ ತಂಟೆಗೆ ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಂತಿದೆ ಯಡಿಯೂರಪ್ಪ ಸರ್ಕಾರ. ಯುವರತ್ನ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಕುಟುಂಬ ಸಮೇತರಾಗಿ ಅಭಿಮಾನಿಗಳು, ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ.

 

 

ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆಯನ್ನು ಯುವರತ್ನ ಚಿತ್ರದ ಪಡೆದುಕೊಂಡು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಆಗಲೇ ರಾಜ್ಯ ಸರ್ಕಾರದಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ ಅದೇನೆಂದರೆ ನಾಳೆಯಿಂದಲೇ ಚಿತ್ರಮಂದಿರಗಳಲ್ಲಿ ಕೇವಲ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ ಎಂಬ ಹೊಸ ನಿರ್ಧಾರವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

 

.ಇದೀಗ ದಿಢೀರನೆ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ಎಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಪುನೀತ್ ಅಭಿಮಾನಿಗಳು ಕೆಂಡ ಕಾರುತ್ತಿದ್ದು ಮುಂಚೆಯೇ ಹೇಳುವುದಕ್ಕೆ ಕಷ್ಟವೇನು? ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ವೇಳೆ ಮತ್ತೆ ಅರ್ಧದಷ್ಟು ಜನರಿಗೆ ಅವಕಾಶ ನೀಡುವುದು ತಪ್ಪು ಎಂದು ಜನರು ಮಾತನಾಡಿಕೊಳ್ಳುತ್ತಿದ್ದು ಇಂತಹ ಸರ್ಕಾರವನ್ನು ಗೆಲ್ಲಿಸಿದ್ದು ನಮ್ಮ ತಪ್ಪು ಎಂದು ಬೈದು ಕೊಳ್ಳುತ್ತಿದ್ದಾರೆ.

 

 

 

ಒಂದು ವೇಳೆ ಸರ್ಕಾರ ಅಪ್ಪಿತಪ್ಪಿ ಪುನೀತ್ ಅವರ ಚಿತ್ರಕ್ಕೆ ಕೇವಲ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ಎಂದು ಕೊನೆಯದಾಗಿ ತೀರ್ಮಾನ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ಪುನೀತ್ ಫ್ಯಾನ್ಸ್ ಗರಂ ಆಗುವುದು ಪಕ್ಕಾ.. ರಾಜ್ಯದಾದ್ಯಂತ ಪುನೀತ್ ಅವರು ದೊಡ್ಡ ಅಭಿಮಾನಿಗಳನ್ನು ಹೊಂದಿದ್ದು , ಒಂದು ವೇಳೆ ಪುನೀತ್ಅ ವರ ಅಭಿಮಾನಿ ಬಳಗ ಯುವರತ್ನ ಚಿತ್ರದ ಮೇಲೆ ರಾಜ್ಯ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಗಂಭೀರ ವಾಗಿ ಪರಿಣಮಿಸಿ ಚುನಾವಣೆಯಲ್ಲಿ ನಮ್ಮ ಆಟ ತೋರಿಸೋಣ ಎಂದು ಫಿಕ್ಸ್ ಆದರೆ ಮಾತ್ರ ಬಿಜೆಪ ಲಕ್ಷಾಂತರ ಓಟ್ ಕಳೆದುಕೊಳ್ಳುವುದು ಖಂಡಿತವಾಗಿಯೂ ಸತ್ಯ..

Share This Article
Leave a Comment