ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

Date:

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ಕರ್ನಾಟಕ ಸರ್ಕಾರ 2026ನೇ ಸಾಲಿನ ಸಾರ್ವತ್ರಿಕ ಸರ್ಕಾರಿ ರಜೆಗಳ ಪಟ್ಟಿಯನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪಟ್ಟಿಗೆ ಅನುಮೋದನೆ ದೊರೆತಿದ್ದು, ಮುಂದಿನ ವರ್ಷ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಒಟ್ಟು 20 ರಜೆಗಳು ಅನ್ವಯವಾಗಲಿವೆ. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ನಾಡಹಬ್ಬಗಳೂ ಈ ಪಟ್ಟಿಯಲ್ಲಿ ಸೇರಿವೆ.

2026ರ ಸಾರ್ವತ್ರಿಕ ಸರ್ಕಾರಿ ರಜೆಗಳ ಪಟ್ಟಿ

ದಿನಾಂಕ ವಾರದ ದಿನ ಹಬ್ಬ/ಕಾರಣ
15.01.2026 ಗುರುವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26.01.2026 ಸೋಮವಾರ ಗಣರಾಜ್ಯೋತ್ಸವ
19.03.2026 ಗುರುವಾರ ಯುಗಾದಿ
21.03.2026 ಶನಿವಾರ ಖುತುಬ್–ಎ–ರಂಜಾನ್
31.03.2026 ಮಂಗಳವಾರ ಮಹಾವೀರ ಜಯಂತಿ
03.04.2026 ಶುಕ್ರವಾರ ಗುಡ್ ಫ್ರೈಡೇ
14.04.2026 ಮಂಗಳವಾರ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
20.04.2026 ಸೋಮವಾರ ಬಸವ ಜಯಂತಿ, ಅಕ್ಷಯ ತೃತೀಯ
01.05.2026 ಶುಕ್ರವಾರ ಕಾರ್ಮಿಕ ದಿನಾಚರಣೆ
28.05.2026 ಗುರುವಾರ ಬಕ್ರೀದ್
26.06.2026 ಶುಕ್ರವಾರ ಮೊಹರಂ (ಕಡೆ ದಿನ)
15.08.2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
26.08.2026 ಬುಧವಾರ ಈದ್–ಮಿಲಾದ್
14.09.2026 ಸೋಮವಾರ ವರಸಿದ್ಧಿ ವಿನಾಯಕ ವ್ರತ
02.10.2026 ಶುಕ್ರವಾರ ಗಾಂಧಿ ಜಯಂತಿ
20.10.2026 ಮಂಗಳವಾರ ಮಹಾನವಮಿ, ಆಯುಧಪೂಜೆ
21.10.2026 ಬುಧವಾರ ವಿಜಯದಶಮಿ
10.11.2026 ಮಂಗಳವಾರ ಬಲಿಪಾಡ್ಯಮಿ, ದೀಪಾವಳಿ
27.11.2026 ಶುಕ್ರವಾರ ಕನಕದಾಸ ಜಯಂತಿ
25.12.2026 ಶುಕ್ರವಾರ ಕ್ರಿಸ್‌ಮಸ್

ಪಟ್ಟಿಯಲ್ಲಿ ಸೇರಿಸದ ರಜಾದಿನಗಳು

ಭಾನುವಾರ ಅಥವಾ ಎರಡನೇ ಶನಿವಾರ ಬರುವ ಕಾರಣ ಕೆಳಗಿನ ಹಬ್ಬಗಳು ಪಟ್ಟಿಯಲ್ಲಿ ಇಲ್ಲ:

ಮಹಾಶಿವರಾತ್ರಿ – 15.02.2026 (ಭಾನುವಾರ)

ಮಹರ್ಷಿ ವಾಲ್ಮೀಕಿ ಜಯಂತಿ – 25.10.2026 (ಭಾನುವಾರ)

ಕನ್ನಡ ರಾಜ್ಯೋತ್ಸವ – 01.11.2026 (ಭಾನುವಾರ)

ನರಕ ಚತುರ್ದಶಿ – 08.11.2026

ಮಹಾಲಯ ಅಮವಾಸ್ಯೆ – 10.10.2026 (ಎರಡನೇ ಶನಿವಾರ)

ಮುಸ್ಲಿಂ ಉದ್ಯೋಗಿಗಳಿಗೆ ವಿಶೇಷ ಸೌಲಭ್ಯ

ಪಟ್ಟಿಯಲ್ಲಿ ನೀಡಿರುವ ಮುಸ್ಲಿಂ ಹಬ್ಬಗಳು ನಿಗದಿತ ದಿನಾಂಕದಲ್ಲಿ ಬರದಿದ್ದರೆ, ಅಸಲಿ ಹಬ್ಬದ ದಿನವೇ ರಜೆ ಮಂಜೂರು ಮಾಡುವ ಅವಕಾಶವನ್ನು ಸರ್ಕಾರ ನೀಡಿದೆ.

ಕೊಡಗು ಜಿಲ್ಲೆಯ ವಿಶೇಷ ಸ್ಥಳೀಯ ರಜೆಗಳು

ಕೊಡಗು ಜಿಲ್ಲೆಗೆ ಕೆಳಗಿನ ದಿನಗಳಲ್ಲಿ ಮಾತ್ರ ಸ್ಥಳೀಯ ಸಾರ್ವತ್ರಿಕ ರಜೆ ಅನ್ವಯವಾಗುತ್ತದೆ:

03.09.2026 (ಗುರುವಾರ) – ಕ್ರೈಲ್ ಮೂಹೂರ್ತ

18.10.2026 (ಭಾನುವಾರ) – ತುಲಾ ಸಂಕ್ರಮಣ

26.11.2026 (ಗುರುವಾರ) – ಹುತ್ತರಿ ಹಬ್ಬ

Share post:

Subscribe

spot_imgspot_img

Popular

More like this
Related

ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ: ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ: ಸಿದ್ದರಾಮಯ್ಯ ಹಾಸನ: ಮಹಿಳಾ...

ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ: ರಾಜ್ಯ...

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...