ರಾಹುಲ್‍ಗೆ ಶುರುವಾಗಿದೇ ಮತ್ತೊಂದು ಕಾನೂನು ಕಂಟಕ..!

admin
By admin
1 Min Read

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಖೂನ್ ಕಿ ದಲಾಲಿ (ಹತ್ಯೆಯ ದಲ್ಲಾಳಿ)ಎಂದು ನಿಂದಿಸಿದರೆನ್ನಲಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೊಸ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ.

ಈ ಹೇಳಿಕೆ ನೀಡಿರುವ ರಾಹುಲ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ಜೂನ್ 7ರಂದು ಆದೇಶ ನೀಡುವುದಾಗಿ ದೆಹಲಿಯ ನ್ಯಾಯಾಲಯವೊಂದು ತೀರ್ಪು ಕಾದಿರಿಸಿದೆ.

ಹಿರಿಯ ವಕೀಲ ಜೋಗಿಂದರ್ ಟುಲಿ ಈ ಸಂಬಂಧ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೆಚ್ಚುವರಿ ಮುಖ್ಯ ಮೆಟ್ರೋಆಲಿಟನ್ ದಂಡಾಧಿಕಾರಿ ಸಮರ್ ಶಾಲ್ ಜೂನ್ 7ಕ್ಕೆ ಕಾದಿರಿಸಿದರು. ರಾಹುಲ್ 2016ರಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಮೋದಿ ವಿರುದ್ಧ ಈ ಹೇಳಿಕೆ ನೀಡಿದ್ದರೆನ್ನಲಾಗಿದೆ.

ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಬೇಕೆಂದು ಜೋಗಿಂದರ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.ದೆಹಲಿ ಪೊಲೀಸರು ಮೇ 15ರಂದು ಈ ಸಂಬಂಧ ನ್ಯಾಯಾಲಯಕ್ಕೆ ಕೈಗೊಂಡ ಕ್ರಮದ ವರದಿ ಸಲ್ಲಿಸಿ. ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಈ ಹೇಳಿಕೆ ನೀಡಿರುವುದು ನಿಜವೆಂದು ಹೇಳಿದ್ದರು. ಇದರ ಆಧಾರದ ಮೇಲೆ ಜೋಗಿಂದರ್ ದಾವೆ ಸಲ್ಲಿಸಿ ಎಫ್‍ಐಆರ್‍ಗೆ ಆಗ್ರಹಿಸಿದ್ದಾರೆ.

Share This Article