ಲಾಕ್ ಡೌನ್ ಉಲ್ಲಂಘಿಸಿ‌ ಜಾಲಿ ರೈಡ್ ಹೋದ ಪತಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ ..!

Date:

ಲಾಕ್ ಡೌನ್ ಉಲ್ಲಂಘಿಸಿ‌ ಜಾಲಿ ರೈಡ್ ಹೋದ ಪತಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ ..!

ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು , ಮಾರಣಾಂತಿಕ ವೈರಸ್ ವಿರುದ್ಧದ ಹೋರಟವಾಗಿ ಲಾಕ್ ಡೌನ್ ಮೊರೆ ಹೋಗಲಿದೆ . ಇಡೀ ದೇಶ ಸದ್ಯ ಲಾಕ್ ಡೌನ್ ಆಗಿದೆ .‌ ಕೊರೋನಾ ಹೆಮ್ಮಾರಿಯ ಮರಣಮೃದಂಗಕ್ಕೆ ಬ್ರೇಕ್ ಹಾಕಲು ಇದು ಅನಿವಾರ್ಯ . ಸಾಕಷ್ಟು ಸಂಕಷ್ಟ ಎದುರಾಗುತ್ತಿದ್ದರೂ ಕೊರೋನಾ ರಕ್ಕಸನ ನಿರ್ಣಾಮಕ್ಕೆ ಇದೊಂದೇ ಮಾರ್ಗ .

ಆದರೆ , ಕೆಲವರು ಲಾಕ್ ಡೌನ್ ಗೆ ಕ್ಯಾರೇ ಎನ್ನುತ್ತಿಲ್ಲ . ತಲೆ ಪ್ರತಿಷ್ಠೆ ಮಾಡುತ್ತಿರುವ ಅಂಥಾ ಅಧಿಕ ಪ್ರಸಂಗಿಗಳಿಗೆ ಖಾಕಿ ಪಡೆ ಬಿಸಿ ಮುಟ್ಟಿಸುತ್ತಿದೆ . ಆದರೂ ಕೆಲವರ ಮೊಂಡುತನಕ್ಕೆ ಬ್ರೇಕ್ ಬಿದ್ದಿಲ್ಲ .

ಇದೀಗ ಒಬ್ಬ ಅಂಥಾ ಅಧಿಕ ಪ್ರಸಂಗಿಗೆ ಆಕೆಯ ಪತ್ನಿಯೇ ಮೈ ಚಳಿ ಬಿಡಿಸಿದ್ದಾಳೆ . ಜಾಲಿ ರೈಡ್ ಹೋದ ಭೂಪನ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ ‌ .

ಹೌದು ಲಾಕ್ ಡೌನ್ ಉಲ್ಲಂಘಿಸಿ ಬೈಕಲ್ಲಿ ತಿರುಗಾಡುತ್ತಿದ್ದ ತಲೆಹರಟೆ ವ್ಯಕ್ತಿಗೆ ಆತನ ಪತ್ನಿ ಬಿಸಿ ಮುಟ್ಟಿಸಿದ್ದಾರೆ . ಲಾಕ್ ಡೌನ್ ಗೆ ಡೋಂಟ್ ಕ್ಯಾರ್ ಎಂದು ಜಾಲಿ ರೈಡ್ ಅಂತ ಬೈಕೇರಿ ಸುತ್ತುತ್ತಿದ್ದ ಮಹಾನುಭಾವನ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ .

ಈ ಸೋಜಿಗದ ಪ್ರಸಂಗ ನಡೆದಿರುವುದು ಕೇರಳದ ಎರ್ನಾಕುಲಂ ಜಿಲ್ಲೆಯ ಮೂವಾಟ್ಟುಪುಳದಲ್ಲಿ . ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಇದೆ ‌ . ಕೇರಳದಲ್ಲಿ ಕೊರೋನಾ ಹಾವಳಿ ಹೆಚ್ಚಿದೆ . ಈ ನಡುವೆ
ವ್ಯಕ್ತಿಯೊಬ್ಬ ತನಗೂ ಲಾಕ್ ಡೌನ್ ಗೂ ಸಂಬಂಧವಿಲ್ಲ ಎಂಬಂತೆ ಪ್ರತಿ ದಿನ ತನ್ನ ಪೋಷಕರ ಮನೆಗೆ ಬೈಕಲ್ಲಿ‌ ಓಡಾಡುತ್ತಿದ್ದ . ಮನೆಯಲ್ಲಿರೋದು ಬಿಟ್ಟು ಹೀಗೆ ಸುತ್ತುವ ಪತಿ ವಿರುದ್ಧ ಸಿಟ್ಟಾದ ಪತ್ನಿ ಸ್ಥಳೀಯ ಠಾಣಾಧಿಕಾರಿಗಳಿಗೆ ಕರೆ ಮಾಡಿ ,ಗಂಡ ಸುತ್ತಾಡುತ್ತಿದ್ದ ಬೈಕ್ ನೋಂದಣಿ ಸಂಖ್ಯೆ ನೀಡಿ ಲಾಕ್ ಡೌನ್ ಉಲ್ಲಂಘನೆ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದಾಳೆ .

ಮಹಿಳೆಯ ದೂರನ್ನು ಆಲಿಸಿದ ಪೊಲೀಸರು ಇದೊಂದು ಕೌಟುಂಬಿಕ ಕಲಹ ಇರಬಹುದು ಎಂದು ಮಹಿಳೆಯ ಮನವೊಲಿಸುವ ಪ್ರಯತ್ನ ಮಾಡಿದರು . ಆದರೆ, ಅದಕ್ಕೆ ಒಪ್ಪದ ಮಹಿಳೆ ಪತಿ ಹೊರಗಡೆ ಓಡಾಡುತ್ತಲೇ ಇದ್ದರೆ ಆತ ಕೂಡ ಕೊರೋನಾ ಸೋಂಕಿಗೆ ತುತ್ತಾಗಿ , ತನಗೂ ಸೋಂಕು ತಗುಲಬಹುದು . ಆದ್ದರಿಂದ ಆತನ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ . ಪತ್ನಿಯ ದೂರಿನ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪತಿರಾಯನಿಗೆ ಪೊಲೀಸರು ಆರಕ್ಷಕರು ನೋಟಿಸ್ ನೀಡಿದ್ದಾರೆ .

ಒಂದು ದೃಷ್ಟಿಯಲ್ಲಿ ಕೆಲವರು ಮಹಿಳೆಯ ವರ್ತನೆಯನ್ನು ಅತಿರೇಕ ಎನ್ನಬಹುದು .‌ ಆದರೆ ಇಂಥಾ ಸಂದರ್ಭದಲ್ಲಿ ಎಚ್ಚರ ಮುಖ್ಯ . ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು . ಸರ್ಕಾರ ಲಾಕ್ ಡೌನ್ ಘೋಷಿಸಿರುವುದು ತಮಾಷೆಗಲ್ಲ, ಬೇರೆ ಕೆಲಸ ಏನೂ ಇಲ್ಲ ಅಂತಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣ ಬೇಕು .

ಕೊರೋನಾ ಎಫೆಕ್ಟ್ : ಚ್ಯುಯಿಂಗ್ ಬ್ಯಾನ್ ಮಾಡಿದ ಸರ್ಕಾರ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...