ವರ್ಲ್ಡ್​​​ಕಪ್​ಗೆ ಬೇಕಾಗಿದ್ದ ಕನ್ನಡಿಗ ಅಗರ್ವಾಲ್​ ವೆಸ್ಟ್​ಇಂಡೀಸ್​​​ನಲ್ಲಿ ಟೆಸ್ಟ್​​​ಗೆ ಮಾತ್ರಾನಾ?!

Date:

ಅತಿಥೇಯ ಇಂಗ್ಲೆಂಡ್ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬೌಂಡರಿ ಲೆಕ್ಕಾಚಾರದಲ್ಲಿ ರೋಚಕ ಗೆಲುವು ಕಂಡು ಚೊಚ್ಚಲ ಬಾರಿಗೆ ವಿಶ್ವಕಪ್ ತನ್ನದಾಗಿಸಿಕೊಂಡಿರುವುದು ಮುಗಿದ ಅಧ್ಯಾಯ..!
ಈಗ 2020ರಲ್ಲಿ ವೆಸ್ಟ್​ಇಂಡೀಸ್​ನಲ್ಲಿ ನಡೆಯಲಿರುವ ಟಿ20 ಮತ್ತು 2023ರಲ್ಲಿ ಭಾರತದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್​ನತ್ತ ಎಲ್ಲಾ ದೇಶಗಳು ಗಮನ ಹರಿಸಿವೆ. ಈ ಬಾರಿ ವಿಶ್ವಕಪ್ ಗೆದ್ದುಕೊಂಡೇ ಬರೋದು ಎಂದು ಇಂಗ್ಲೆಂಡ್​ಗೆ ತೆರಳಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಲೀಗ್​ನಲ್ಲಿ ಚಾಂಪಿಯನ್ ಆಟ ಆಡಿದ್ರೂ ಸೆಮಿಫೈನಲ್​ನಲ್ಲಿ ಮುಗ್ಗರಿಸಿ 3ನೇ ಬಾರಿ ವಿಶ್ವ ಚಾಂಪಿಯನ್ ಆಗುವ ಅವಕಾಶ ಮಿಸ್ ಮಾಡಿಕೊಂಡರು.
ಈಗ 2020ರ ಟಿ20, 2023ರ ಒಡಿಐ ವಿಶ್ವಕಪ್​​​ಗೆ ಬಲಾಢ್ಯ ತಂಡವನ್ನು ರೆಡಿ ಮಾಡುವ ಉದ್ದೇಶದಿಂದ ಬಿಸಿಸಿಐ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ.
ಈಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ನಿನ್ನೆಯಷ್ಟೇ ಪ್ರಕಟಿಸಲಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮೂರು ಮಾದರಿಗೆ ಆಯ್ಕೆಯಾಗಿದ್ದಾರೆ. ಮನೀಷ್ ಪಾಂಡೆ ಟಿ20 ಮತ್ತು ಒಡಿಐಗೆ ಸೆಲೆಕ್ಟ್ ಆಗಿದ್ದಾರೆ. ಮಯಾಂಕ್ ಅಗರ್ವಾಲ್ ಟೆಸ್ಟ್ಗೆ ಮಾತ್ರ ಆಯ್ಕೆಯಾಗಿದ್ದಾರೆ.


ವಿಶ್ವಕಪ್​ನಲ್ಲಿ ಆಲ್​ ರೌಂಡರ್ ವಿಜಯ್ ಶಂಕರ್ ಗಾಯಗೊಂಡು ಟೂರ್ನಿಯಿಂದ ಹೊರ ಬಂದಾಗ ಮಯಾಂಕ್ ಅವರನ್ನು ಇಂಗ್ಲೆಂಡ್​ಗೆ ಕಳುಹಿಸಲಾಗಿತ್ತು. ಪ್ರತಿಷ್ಠಿತ ಟೂರ್ನಿಗೆ ಒಡಿಐಗೆ ಆಯ್ಕೆಯಾಗಿದ್ದ ಪರಿಗಣಿಸಲ್ಪಟ್ಟಿದ್ದ ಅಗರ್ವಾಲ್ ವೆಸ್ಟ್​ ಇಂಡೀಸ್ ಟೂರ್ನಲ್ಲಿ ಒಡಿಐಗೆ ಯಾಕಿಲ್ಲ ಅನ್ನೋದು ಪ್ರಶ್ನೆ. ವಿಶ್ವಕಪ್​ಗೆ ಆಯ್ಕೆಯಾಗಿದ್ದ ಮಯಾಂಕ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬರೀ ಟೆಸ್ಟ್ಗೆ ಮಾತ್ರ ಯಾಕೆ ಸೀಮಿತ ಎನ್ನುವುದು ಚರ್ಚೆಯ ವಿಷಯವಾಗಿದೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...