ವಿಂಡೀಸ್ ಪ್ರವಾಸಕ್ಕೆ ಮೂವರು ಕನ್ನಡಿಗರಿಗೆ ಸ್ಥಾನ – ಧೋನಿ ಇಲ್ಲದ ಕೊಹ್ಲಿ ಪಡೆಯಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

Date:

ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್, 3 ಒಡಿಐ ಹಾಗೂ 3 ಟಿ20 ಮ್ಯಾಚ್​ಗಳ ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಮಾಡಿದೆ. ಕನ್ನಡಿಗರಾದ ಕೆ.ಎಲ್ ರಾಹುಲ್, ಮನೀಷ್ ಪಾಂಡೆ ಮತ್ತು ಮಯಾಂಕ್ ಅಗರ್​ವಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್ ಮೂರೂ ಮಾದರಿಗೂ ಆಯ್ಕೆಯಾಗಿದ್ದಾರೆ. ಅಗರ್ವಾಲ್ ಟೆಸ್ಟ್​ಗೆ ಸೆಲೆಕ್ಟ್ ಆಗಿದ್ದು, ಮನೀಷ್ ಪಾಂಡೆ ಏಕದಿನ ಮತ್ತು ಟಿ20ಗೆ ಆಯ್ಕೆಯಾಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಮೂರು ಫಾರ್ಮೆಟ್​ಗೂ ಸೆಲೆಕ್ಟ್ ಆಗಿದ್ದಾರೆ.ವಿಕೆಟ್ ಕೀಪರ್ ಆಗಿ ಟೆಸ್ಟ್ ಗೆ ಪಂತ್ ಮಾತ್ರವಲ್ಲದೆ ವೃದ್ಧಿಮಾನ್ ಸಾಹಾ ಅವರಿಗೂ ಅವಕಾಶ ನೀಡಿದ್ದಾರೆ. ಏಕದಿನ ಮತ್ತು ಟಿ20ಕ್ಕೆ ಸಾಹಾ ಇಲ್ಲ.
ಶ್ರೇಯಸ್ ಅಯ್ಯರ್, ಸೈನಿ, ದೀಪಕ್ ಚಾಹರ್, ರಾಹುಲ್ ಚಾಹರ್ ಸೇರಿದಂತೆ ಹಲವು ಹೊಸಬರು ವಿಂಡೀಸ್ ಪ್ರವಾಸಕ್ಕೆ ಕೊಹ್ಲಿ ನಾಯಕತ್ವದಲ್ಲಿ ತೆರಳಲಿದ್ದಾರೆ.
ಟೆಸ್ಟ್​ : ವಿರಾಟ್​ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಮಯಾಂಕ್​ ಅಗರ್ವಾಲ್​, ಕೆ.ಎಲ್.ರಾಹುಲ್​, ಚೇತೇಶ್ವರ ಪೂಜಾರಾ, ಹನುಮ ವಿಹಾರಿ, ರೋಹಿತ್​ ಶರ್ಮಾ, ರಿಶಭ್​ ಪಂತ್​(ವಿಕೆಟ್​ ಕೀಪರ್​), ವೃದ್ದಿಮಾನ್​ ಸಾಹಾ (ವಿಕೆಟ್​ ಕೀಪರ್​), ಆರ್​ ಅಶ್ವಿನ್​, ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ಜಸ್ಪ್ರೀತ್​ ಬುಮ್ರಾ, ಉಮೇಶ್​ ಯಾದವ್​.

ಏಕದಿನ : ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ಮನೀಶ್​ ಪಾಂಡೆ, ರಿಶಭ್​ ಪಂತ್​(ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಯಜುವೇಂದ್ರ ಚಹಾಲ್​, ಕೇದಾರ್​ ಜಾಧವ್​, ಮೊಹಮ್ಮದ್​ ಶಮಿ, ಭುವನೇಶ್ವರ್​ ಕುಮಾರ್​, ಖಲೀಲ್​ ಅಹ್ಮದ್​, ನವದೀಪ್​ ಸೈನಿ.

ಟಿ-20: ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್ ರಾಹುಲ್​, ಶ್ರೇಯಸ್​ ಅಯ್ಯರ್​, ಮನೀಶ್​ ಪಾಂಡೆ, ರಿಶಭ್​ ಪಂತ್​, ಕೃನಾಲ್​ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​, ರಾಹುಲ್​ ಚಹಾರ್​ ಭುವನೇಶ್ವರ್​ ಕುಮಾರ್​, ಖಲೀಲ್​ ಅಹ್ಮದ್​, ದೀಪಕ್​ ಚಹಾರ್​, ನವದೀಪ್​ ಸೈನಿ

Share post:

Subscribe

spot_imgspot_img

Popular

More like this
Related

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಬೆಂಗಳೂರು: ಪ್ರಧಾನಮಂತ್ರಿ...

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ ರೆಡ್ಡಿ ಆರೋಪ

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ...

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು!

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು! ಉಗುರು ಕಚ್ಚುವುದು...

ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಕಳಪೆ: ಬೆಂಗಳೂರು, ಮಂಗಳೂರು ನಗರವಾಸಿಗಳಿಗೆ ಆತಂಕ

ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಕಳಪೆ: ಬೆಂಗಳೂರು, ಮಂಗಳೂರು ನಗರವಾಸಿಗಳಿಗೆ ಆತಂಕ ಬೆಂಗಳೂರು: ಕಳೆದ...