ವಿಜಿನ ವಾಪಸ್ ಕೊಟ್ಬಿಡಿ: ವಿಜಯಲಕ್ಷ್ಮಿ ಕಣ್ಣೀರು

Date:

ಸಂಚಾರಿ ವಿಜಯ್ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ವಿಜಯಲಕ್ಷ್ಮಿ ‘ಪವಾಡ ಏನಾದರೂ ಆಗಲಿ, ಉಳಿಸಿಕೊಳ್ಳಲು ಸಾಧ್ಯವಾದರೆ ದಯವಿಟ್ಟು ನಮ್ಮ ವಿಜಿ ಬ್ರೋನ ವಾಪಸ್ ಕೊಟ್ಬಿಡು ದೇವರೇ’ ಎಂದು ಕೇಳಿಕೊಂಡಿದ್ದಾರೆ.

ಸಂಚಾರಿ ವಿಜಯ್ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ ವಿಜಯಲಕ್ಷ್ಮಿ ‘ಕಳೆದ ವರ್ಷ ನಾನು ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಯದಲ್ಲಿ ಸಂಚಾರಿ ವಿಜಯ್ ಮತ್ತು ಕಾರುಣ್ಯ ರಾಮ್ ನನ್ನ ಯೋಗಕ್ಷೇಮ ವಿಚಾರಿಸಿದವರಲ್ಲಿ ಮೊದಲಿಗರು. ತುಂಬಾ ಪ್ರೀತಿಯಿಂದ, ತುಂಬಾ ಆತ್ಮೀಯತೆಯಿಂದ ನನ್ನ ಭೇಟಿ ಮಾಡಿದರು. ವಿಜಯ್ ಭೇಟಿ ಬಳಿಕ ನನಗೊಬ್ಬ ಸಹೋದರ ಸಿಕ್ಕಿದ್ದರು. ವಿಜಯ್ ಬ್ರೋ ಎಂದು ಕರೆಯುತ್ತಿದ್ದೆ. ಈ ಸುದ್ದಿ ಕೇಳಿದಾಗನಿಂದಲೂ ಇದು ನಿಜ ಆಗಿರಬಾರದು ಅನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ವಿಜಿಗೆ ಹೀಗಾಗಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ವಿಜಿ ಬ್ರೋ ನಮ್ಮನ್ನು ಬಿಟ್ಟು ಹೋಗ್ಬೇಕು ಅಂತ ಏಕೆ ಅನಿಸಿತು. ಬಹಳ ಶೋಕದಲ್ಲಿದ್ದೇವೆ. ಪ್ರತಿಭಾನ್ವಿತ ನಟ ಜೊತೆಗೆ ಒಳ್ಳೆಯ ಮನುಷ್ಯ. ಕಲಾವಿದರು ಈ ರೀತಿ ದುರಂತ ಎದುರಿಸುವುದು ಬಹಳ ನೋವು ಉಂಟು ಮಾಡುತ್ತಿದೆ’ ಎಂದು ಭಾವುಕರಾದರು.

‘ದಯವಿಟ್ಟು ವಿಜಿ ಅವರಿಗೆ ಏನಾದರು ಪವಾಡ ಆಗಬಾರದೇ? ದೇವರೇ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾದರೆ ವಿಜಿನಾ ಕೊಟ್ಬಿಡು. ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಈ ಸುದ್ದಿ ನೋಡಲು ಸಹ ಸಾಧ್ಯವಾಗ್ತಿಲ್ಲ’ ಎಂದು ನಟಿ ವಿಜಯಲಕ್ಷ್ಮಿ ವಿನಂತಿಸಿದರು.

 

 

 

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...