ವಿಶಾಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಿಗ್ ಬಾಸ್ ಸ್ಪರ್ಧಿ!

Date:

ಬಿಗ್ ಬಾಸ್ ಶೋನಲ್ಲಿ ಪಾಲ್ಗೊಂಡ ನಂತರದಲ್ಲಿ ನಟಿ, ಕೊರಿಯೋಗ್ರಾಫರ್ ಗಾಯಿತ್ರಿ ರಘುರಾಮ್ ಅವರನ್ನು ಅನೇಕರು ಇಷ್ಟಪಡುತ್ತಿಲ್ಲ. ಬಿಜೆಪಿ ಸದಸ್ಯೆಯಾಗಿ ಕೆಲಸ ಮಾಡುತ್ತಿರುವ ಇವರು ಈಗ ನಟ ವಿಶಾಲ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ವಿಶಾಲ್ ಅವರು ತಮಿಳುನಾಡಿನ ಪಿಎಸ್‌ಬಿಬಿ ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಶಿಕ್ಷಣ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳುವುದು, ಕ್ಷಮೆ ಕೇಳುವುದು ಮಾಡಿರಲಿಲ್ಲ. ಈ ಕುರಿತು ನಟ ವಿಶಾಲ್ ಅವರು ಟ್ವೀಟ್ ಮಾಡಿದ್ದು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು. ನಟ ವಿಶಾಲ್ ಅವರ ಟ್ವೀಟ್ ನೋಡಿದ ನಂತರದಲ್ಲಿ ನಟಿ ಗಾಯತ್ರಿ ರಘುರಾಮ್ ಅವರು ಒಂದಾದ ಮೇಲೆ ಒಂದರಂತೆ ಟ್ವೀಟ್ ಮಾಡಿದ್ದಾರೆ.


“ಚಿತ್ರರಂಗದಲ್ಲಿ ಇರೋದರಿಂದ ಮೊದಲು ಲೈಂಗಿಕ ದೌರ್ಜನ್ಯ, ಕಿರುಕುಳ ಖಂಡಿಸಿ. ಹೊಸದಾಗಿ ಬರುತ್ತಿರುವ ಹುಡುಗಿಯರಿಗೆ ಏನಾಗುತ್ತಿದೆ ಅಂತ ತಿಳಿದುಕೊಳ್ಳಿ. ಮಹಿಳಾ ಕಲಾವಿದರಿಗೆ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಒಮ್ಮೆ ನೋಡಿ. ಉಪಯೋಗಿಸಿ ಬಿಸಾಡುವ ಮನೋಭಾವವನ್ನು ನೀವು, ನಿಮ್ಮ ಸ್ನೇಹಿತರು ಹೊಂದಿದ್ದೀರಿ. ನಿಮ್ಮಿಂದ ಅನೇಕರಿಗೆ ಸಮಸ್ಯೆಯಾಗಿದೆ” ಎಂದು ಗಾಯಿತ್ರಿ ರಘುರಾಮ್ ಅವರು ಟ್ವೀಟ್ ಮಾಡಿದ್ದರು.


“ಬೇರೆ ಮಾರ್ಗದಲ್ಲಿ ನಿಮ್ಮ ಹೀರೋಯಿಸಂ ತೋರಿಸುವ ಬದಲು, ನಿಮ್ಮ ಸಿನಿಮಾ ರಂಗದ ಹೆಣ್ಣುಮಕ್ಕಳಿಗೆ ಸಹಾಯ ಬೇಕಿದ್ದಾಗ ಹೀರೋಯಿಸಂ ತೋರಿಸಬೇಕು. ಪದೇ ಪದೇ ನೀವು ಕೇಳುವುದರಿಂದ ನಿಮ್ಮಿಂದ ಮಹಿಳಾ ಕಲಾವಿದರು ಓಡಿ ಹೋಗುತ್ತಿದ್ದಾರೆ. ನಿಮಗದು ಗೊತ್ತಿರಬೇಕು” ಎಂದು ಗಾಯಿತ್ರಿ ರಘುರಾಮ್ ಅವರು ಟ್ವೀಟ್ ಮಾಡಿದ್ದರು.
“ಬೇರೆ ಮಾರ್ಗದಲ್ಲಿ ನಿಮ್ಮ ಹೀರೋಯಿಸಂ ತೋರಿಸುವ ಬದಲು, ನಿಮ್ಮ ಸಿನಿಮಾ ರಂಗದ ಹೆಣ್ಣುಮಕ್ಕಳಿಗೆ ಸಹಾಯ ಬೇಕಿದ್ದಾಗ ಹೀರೋಯಿಸಂ ತೋರಿಸಬೇಕು. ಪದೇ ಪದೇ ನೀವು ಕೇಳುವುದರಿಂದ ನಿಮ್ಮಿಂದ ಮಹಿಳಾ ಕಲಾವಿದರು ಓಡಿ ಹೋಗುತ್ತಿದ್ದಾರೆ. ನಿಮಗದು ಗೊತ್ತಿರಬೇಕು” ಎಂದು ಗಾಯಿತ್ರಿ ರಘುರಾಮ್ ಅವರು ಟ್ವೀಟ್ ಮಾಡಿದ್ದರು.

2019ರಲ್ಲಿಯೇ ಅನಿಶಾ ಜೊತೆಗೆ ನಿಶ್ಚಿತಾರ್ಥ ನಟ ವಿಶಾಲ್ ಅವರ ನಿಶ್ಚಿತಾರ್ಥ ನಡೆದಿತ್ತು, ಆದರೆ ಮದುವೆ ನಡೆದಿಲ್ಲ. ಅವರಿಬ್ಬರು ಯಾಕೆ ಮದುವೆಯಾಗುತ್ತಿಲ್ಲ ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇನ್ನು ಅನಿಶಾ ಕೂಡ ಬೇರೆ ಮದುವೆಯಾಗಲಿದ್ದಾರಂತೆ ಎಂದು ಹೇಳಲಾಗಿತ್ತು.

Share post:

Subscribe

spot_imgspot_img

Popular

More like this
Related

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...