ವಿಶ್ವ ದಾಖಲೆ ಬರೆದ ಸ್ಮೃತಿ ಮಂದಾರ

Date:

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ, ಲಖನೌದ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರವಾಸಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.

ಅಂದಿನಿಂದ ಇಂದಿನ ವರೆಗೆ ರನ್‌ ಚೇಸಿಂಗ್‌ ವೇಳೆ ಸತತ 10 ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಎಡಗೈ ಬ್ಯಾಟರ್‌ ಸ್ಮೃತಿ ಕ್ರಮವಾಗಿ 67, 52, 86, 53*, 73*, 105, 90*, 63, 74 ಮತ್ತು 80* ರನ್‌ಗಳನ್ನು ದಾಖಲಿಸಿ ನೂತನ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ರನ್‌ ಚೇಸಿಂಗ್‌ ವೇಳೆ ಸ್ಮೃತಿ ಮಂಧಾನಾ ಅವರ ಬ್ಯಾಟಿಂಗ್‌ ಸರಾಸರಿ ಒಟ್ಟಾರೆ 63.26ರಷ್ಟಿದೆ. 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ ಮಹಿಳಾ ಬ್ಯಾಟರ್‌ಗಳ ಪಟ್ಟಿಯಲ್ಲಿ ಇದು ಎರಡನೇ ಶ್ರೇಷ್ಠ ಸರಾಸರಿಯಾಗಿದೆ. ಆಸೀಸ್‌ನ ನಾಯಕಿ ಮೆಗ್‌ ಲ್ಯಾನಿಂಗ್ (67.81) ಅವರಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನವಿದೆ.

ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಅಂತೆಯೇ ಎರಡನೇ ಪಂದ್ಯದಲ್ಲಿ ಮಿಥಾಲಿ ರಾಜ್‌ ಸಾರಥ್ಯದ ಆತಿಥೇಯರ ಬಳಗ ತಿರುಗೇಟು ನೀಡಿದೆ. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಭಾರತ ಮಹಿಳಾ ಕ್ರಿಕೆಟ್‌ ತಂಡ ಎದುರಾಳಿಯನ್ನು 41 ಓವರ್‌ಗಳಲ್ಲಿ 157 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಮಾಡಿತು.

ಬಳಿಕ ಸುಲಭದ ಗುರಿ ಬೆನ್ನತ್ತಿದಾಗ ಸ್ಮೃತಿ ಮಂಧಾನಾ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಓಪನರ್‌ ಜೆಮಿಮಾ ರೋಡ್ರಿಗಸ್‌ (9) ಆರಂಭದಲ್ಲೇ ವಿಕೆಟ್‌ ಒಪ್ಪಿಸಿದರೂ ಕೂಡ 2ನೇ ವಿಕೆಟ್‌ಗೆ ಪೂನಮ್‌ ರಾವತ್‌ ಜೊತೆಗೆ ಶತಕದ ಜೊತೆಯಾಟವಾಡಿದ ಮಂಧಾನಾ 64 ಎಸೆತಗಳಲ್ಲಿ 10 ಫೋರ್‌ ಮತ್ತು 3 ಸಿಕ್ಸರ್‌ ಒಳಗೊಂಡ ಅಜೇಯ 80 ರನ್‌ಗಳನ್ನು ಸಿಡಿಸಿದರು. ಸ್ಮೃತಿಗೆ ಉತ್ತಮ ಸಾಥ್‌ ನೀಡಿದ ಪೂನಮ್ 89 ಎಸೆತಗಳಲ್ಲಿ ಅಜೇಯ 62 ರನ್‌ಗಳನ್ನು ಗಳಿಸಿದರು. ಪರಿಣಾಮ ಇನ್ನೂ 31.2 ಓವರ್‌ಗಳು ಬಾಕಿ ಇರುವಾಗಲೇ ಭಾರತ ತಂಡ 9 ವಿಕೆಟ್‌ಗಳ ಜಯ ದಾಖಲಿಸಿತು.

ದಕ್ಷಿಣ ಆಫ್ರಿಕಾ ಮಹಿಳಾ ತಂಡ: 41 ಓವರ್‌ಗಳಲ್ಲಿ 157 ಆಲ್‌ಔಟ್‌ (ಸೂನ್‌ ಲೂಸ್‌ 36, ಲಾರಾ ಗುಡ್‌ಆಲ್‌ 49; ಜೂಲನ್‌ ಗೋಸ್ವಾಮಿ 42ಕ್ಕೆ 4, ರಾಜೇಶ್ವರಿ ಗಾಯಕ್ವಾಡ್‌ 37ಕ್ಕೆ 3, ಮಾನ್ಸಿ ಜೋಶಿ 23ಕ್ಕೆ 2).

ಭಾರತ ಮಹಿಳಾ ಕ್ರಿಕೆಟ್‌ ತಂಡ: 28.4 ಓವರ್‌ಗಳಲ್ಲಿ 1 ವಿಕೆಟ್‌ಗೆ 160 ರನ್‌ (ಸ್ಮೃತಿ ಮಂಧಾನಾ ಅಜೇಯ 80, ಪೂನಮ್‌ ರಾವತ್ ಅಜೇಯ 68; ಶಬ್ನಿಮ್ ಇಸ್ಮಾಯಿಲ್ 46ಕ್ಕೆ 1).

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...