ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ. ಟೀಮ್ ಇಂಡಿಯಾದ ಮಾಜಿ ನಾಯಕ, ಹೆಮ್ಮೆಯ ಕನ್ನಡ ರಾಹುಲ್ ದ್ರಾವಿಡ್ ಅವರು ಬರಬೇಕು ಎನ್ನುವುದು ಎಲ್ಲರ ಹೆಬ್ಬಯಕೆ. ಈ ಆಸೆ ಸ್ವತಃ ಜಿ ಕನ್ನಡಕ್ಕೂ ಇದೆ.
ವೀಕೆಂಡ್ ವಿತ್ ರಮೇಶ್’ ಮೊದಲ ಸೀಸನ್ ನಿಂದಲೇ ಜೀ ಕನ್ನಡ ವಾಹಿನಿ ರಾಹುಲ್ ದ್ರಾವಿಡ್ ಅವರನ್ನು ಸಾಧಕರ ಸೀಟ್ ಗೆ ಕರೆತರಲು ಪ್ರಯತ್ನ ಮಾಡುತ್ತಿದೆ. ಈ ಬಾರಿ ಕೂಡ ಪತ್ರಮುಖೇನ ಆಹ್ವಾನ ನೀಡಿದರೂ ದ್ರಾವಿಡ್ ಅವರು ಮಾತ್ರ ಮನಸ್ಸು ಮಾಡಿಲ್ಲ. ಆದ್ದರಿಂದ ಜಿ ಕನ್ನಡ ಟ್ವೀಟ್ ಮೂಲಕ ಅಭಿಯಾನ ಆರಂಭಿಸಿದೆ.
‘ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ Retweet ಮಾಡುವ ಮೂಲಕ ರಾಹುಲ್ ದ್ರಾವಿಡ್’ರವರನ್ನು ಸಾಧಕರ ಸೀಟ್’ಗೆ ಕರೆತರುವ ಪ್ರಯತ್ನ ಮಾಡೋಣ” ಎಂದು ಜೀ ಕನ್ನಡ ಟ್ವೀಟ್ ಅಭಿಯಾನವನ್ನು ಆರಂಭಿಸಿದ್ದು, ವೀಕ್ಷಕರು #WWRDravid ಹ್ಯಾಶ್ ಟ್ಯಾಗ್ ಬಳಸಿ ರಿಟ್ವೀಟ್ ಮಾಡಿ ಅದನ್ನು ರಾಹಲ್ ದ್ರಾವಿಡ್ ಅವರಿಗೆ ತಲುಪುವಂತೆ ಮಾಡಿ ಎಂದು ಜಿ ಕನ್ನಡ ಕೇಳಿಕೊಂಡಿದೆ. ಇಂದಿನಿಂದ 4ನೇ ಆವೃತ್ತಿಯ ವೀಕ್ ಎಂಡ್ ವಿತ್ ರಮೇಶ್ ಶುರುವಾಗಿದೆ.
ವೀಕ್ ಎಂಡ್ ವಿತ್ ರಮೇಶ್ ನಲ್ಲಿ ರಾಹುಲ್ ದ್ರಾವಿಡ್?
Date: