ವೀಕ್ ಎಂಡ್ ವಿತ್​ ರಮೇಶ್​ ನಲ್ಲಿ ರಾಹುಲ್ ದ್ರಾವಿಡ್​?

Date:

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ. ಟೀಮ್ ಇಂಡಿಯಾದ ಮಾಜಿ ನಾಯಕ, ಹೆಮ್ಮೆಯ ಕನ್ನಡ ರಾಹುಲ್ ದ್ರಾವಿಡ್​ ಅವರು ಬರಬೇಕು ಎನ್ನುವುದು ಎಲ್ಲರ ಹೆಬ್ಬಯಕೆ. ಈ ಆಸೆ ಸ್ವತಃ ಜಿ ಕನ್ನಡಕ್ಕೂ ಇದೆ.
ವೀಕೆಂಡ್ ವಿತ್ ರಮೇಶ್’ ಮೊದಲ ಸೀಸನ್ ನಿಂದಲೇ ಜೀ ಕನ್ನಡ ವಾಹಿನಿ ರಾಹುಲ್ ದ್ರಾವಿಡ್ ಅವರನ್ನು ಸಾಧಕರ ಸೀಟ್​​ ಗೆ ಕರೆತರಲು ಪ್ರಯತ್ನ ಮಾಡುತ್ತಿದೆ. ಈ ಬಾರಿ ಕೂಡ ಪತ್ರಮುಖೇನ ಆಹ್ವಾನ ನೀಡಿದರೂ ದ್ರಾವಿಡ್ ಅವರು ಮಾತ್ರ ಮನಸ್ಸು ಮಾಡಿಲ್ಲ. ಆದ್ದರಿಂದ ಜಿ ಕನ್ನಡ ಟ್ವೀಟ್ ಮೂಲಕ ಅಭಿಯಾನ ಆರಂಭಿಸಿದೆ.
‘ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ Retweet ಮಾಡುವ ಮೂಲಕ ರಾಹುಲ್ ದ್ರಾವಿಡ್’ರವರನ್ನು ಸಾಧಕರ ಸೀಟ್’ಗೆ ಕರೆತರುವ ಪ್ರಯತ್ನ ಮಾಡೋಣ” ಎಂದು ಜೀ ಕನ್ನಡ ಟ್ವೀಟ್ ಅಭಿಯಾನವನ್ನು ಆರಂಭಿಸಿದ್ದು, ವೀಕ್ಷಕರು #WWRDravid ಹ್ಯಾಶ್ ಟ್ಯಾಗ್ ಬಳಸಿ ರಿಟ್ವೀಟ್ ಮಾಡಿ ಅದನ್ನು ರಾಹಲ್ ದ್ರಾವಿಡ್ ಅವರಿಗೆ ತಲುಪುವಂತೆ ಮಾಡಿ ಎಂದು ಜಿ ಕನ್ನಡ ಕೇಳಿಕೊಂಡಿದೆ. ಇಂದಿನಿಂದ 4ನೇ ಆವೃತ್ತಿಯ ವೀಕ್ ಎಂಡ್ ವಿತ್ ರಮೇಶ್ ಶುರುವಾಗಿದೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...