ಸಮಂತಾ-ನಾಗಚೈತನ್ಯ ಸಂಸಾರದಲ್ಲಿ ಬಿರುಕು? ಬದಲಾದ ನಟಿ!

Date:

ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಸಹ ಪರಸ್ಪರ ಪ್ರೀತಿಸಿ ತದನಂತರ ಮನೆಯವರ ಒಪ್ಪಿಗೆ ಮೇರೆಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಂಡರು. ಇಬ್ಬರೂ ಏ ಮಾಯ ಚೇಸಾವೆ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ತದನಂತರ ಒಳ್ಳೆಯ ಸ್ನೇಹ ಸಂಬಂಧ ಇಟ್ಟುಕೊಂಡಿದ್ದ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಹೀಗೆ ಪ್ರೀತಿಯನ್ನು ಹಲವಾರು ವರ್ಷಗಳ ಕಾಲ ಇಟ್ಟುಕೊಂಡು ಬಂದಿದ್ದ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

ಇಷ್ಟು ದಿನಗಳಾದರೂ ಯಾವುದೇ ಗಾಸಿಪ್ ಗಳಿಗೆ ಒಳಗಾಗದೆ ಸುಖವಾಗಿ ಸಂಸಾರ ವನ್ನು ಸಾಗಿಸುತ್ತಿದ್ದ ನಟಿ ಸಮಂತಾ ಮತ್ತು ನಾಗಚೈತನ್ಯ ಕುರಿತು ಇದೀಗ ದೊಡ್ಡದೊಂದು ಕಾಂಟ್ರವರ್ಸಿ ಶುರುವಾಗಿದೆ. ಹೌದು ಮದುವೆಗೂ ಮುನ್ನ ನಟಿ ಸಮಂತಾ ಇನ್ ಸ್ಟಾಗ್ರಾಂ ಖಾತೆಯ ಹೆಸರು ಸಮಂತಾ ರುತ್ ಪ್ರಭು ಎಂದಿತ್ತು. ಆದರೆ ಮದುವೆಯಾದ ನಂತರ ಅದನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಲಾಯಿತು. ಅಕ್ಕಿನೇನಿ ನಾಗಾರ್ಜುನ ಕುಟುಂಬಕ್ಕೆ ಸೊಸೆಯಾಗಿ ಹೋದ ಕಾರಣಕ್ಕೆ ಸಮಂತಾ ಅಕ್ಕಿನೇನಿ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು.

ಆದರೆ ಇದೀಗ ಮತ್ತೆ ನಟಿ ಸಮಂತಾ ತನ್ನ ಹೆಸರನ್ನು ಸಮಂತಾ ಅಕ್ಕಿನೇನಿ ಬದಲು ಸಮಂತಾ ರುತ್ ಪ್ರಭು ಎಂದು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ ಡೇಟ್ ಮಾಡಿದ್ದಾರೆ. ಹೌದು ಮದುವೆಗೂ ಮುನ್ನ ಇದ್ದ ಹೆಸರನ್ನೇ ಮತ್ತೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಸಮಂತಾ ಕಾಂಟ್ರವರ್ಸಿಗೆ ಕಾರಣವಾಗಿದ್ದಾರೆ. ತಾನು ಮದುವೆಯಾಗಿ ಹೋಗಿರುವ ಮನೆತನದ ಹೆಸರನ್ನು ತೆಗೆದು ಹಾಕಿರುವ ಸಮಂತಾ ಸಂಸಾರದಲ್ಲಿ ಬಿರುಕು ಮೂಡಿದೆಯಾ ಎಂಬ ಚರ್ಚೆಗಳು ಇದೀಗ ಜೋರಾಗಿ ನಡೆಯುತ್ತಿವೆ.

 

Share post:

Subscribe

spot_imgspot_img

Popular

More like this
Related

ಡಾ.ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ತಿರಸ್ಕಾರ – ಈಶ್ವರ ಖಂಡ್ರೆ

ಡಾ.ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ತಿರಸ್ಕಾರ...

ಅವಧಿ ಮುಕ್ತಾಯವಾದ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೆ ಕ್ರಮ: ಪೌರಾಡಳಿತ ಸಚಿವ ರಹೀಂ ಖಾನ್

ಅವಧಿ ಮುಕ್ತಾಯವಾದ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೆ ಕ್ರಮ: ಪೌರಾಡಳಿತ...

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ: ಸಿದ್ದರಾಮಯ್ಯ

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ: ಸಿದ್ದರಾಮಯ್ಯ ಬೆಳಗಾವಿ: ರಾಜ್ಯದಲ್ಲಿ...

ನ್ಯಾಷನಲ್​ ಹೆರಾಲ್ಡ್​ ಪ್ರಕರಣ: ಸೋನಿಯಾಗಾಂಧಿ, ರಾಹುಲ್ʼ​ಗೆ ರಿಲೀಫ್

ನ್ಯಾಷನಲ್​ ಹೆರಾಲ್ಡ್​ ಪ್ರಕರಣ: ಸೋನಿಯಾಗಾಂಧಿ, ರಾಹುಲ್ʼ​ಗೆ ರಿಲೀಫ್ ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ...