ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ- ಬೇಕರಿಗೆ ನುಗ್ಗಿ ದಾಂದಲೆ

0
175

ಬೆಂಗಳೂರು;- ನಗರದಲ್ಲಿ ಮತ್ತೊಂದು ಬೇಕರಿಯ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಇತ್ತೀಚೆಗೆ ಬೇಕರಿ ಮಾಲೀಕರ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿದೆ.
ಅದರಂತೆ ಇದೀಗ ಜೆಸಿ ನಗರ ಬಳಿ ಬ್ರಹ್ಮಲಿಂಗೇಶ್ವರ ಬೇಕರಿಗೆ ನುಗ್ಗಿ ಕಿಡಿಗೇಡಿಗಳು ದಾಂದಲೆ ನಡೆಸಿದ್ದಾರೆ. ಸಂತೋಷ್ ಶೆಟ್ಟಿ ಹಾಗೂ ಪತ್ನಿ ಸಣ್ಣದಾಗಿ ಕಾಂಡಿಮೆಂಟ್ಸ್ ನಡೆಸುತ್ತಿದ್ದರು. ಎಂದಿನಂತೆ ಬಂದ ರೌಡಿಗಳು ಟೀ ವಿಚಾರಕ್ಕೆ ಬೇಕರಿ ಮಾಲೀಕನ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಹಲ್ಲೆ ಮಾಡಿದ್ದಲ್ಲದೇ ಬೇಕರಿಯಲ್ಲಿದ್ದ ಟೀ ಗ್ಲಾಸ್ ಗಳನ್ನು ಪುಡಿಪುಡಿ ಮಾಡಿದ್ದಾರೆ. ಅಲ್ಲದೇ ಮಾಲೀಕ ಸಂತೋಷ್ ಶೆಟ್ಟಿಗೆ ಬಿಸಿ ಹಾಲನ್ನು ಎರಚಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯನ್ನು ಕರವೇ ಪ್ರವೀಣ್ ಶೆಟ್ಟಿ ಸಂಘಟನೆ ತೀವ್ರವಾಗಿ ಖಂಡಿಸಿದೆ.