ಹುಚ್ಚವೆಂಕಟ್ ಗೆಲ್ತಿದ್ರು : ಸುದೀಪ್

Date:

ಕನ್ನಡದ ಬಹುನಿರೀಕ್ಷಿತ, ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ನೋಡಲು ಕಾಯುತ್ತಿರುವ ಬಿಗ್ ಬಾಸ್ ಸೀಸನ್ 8 ಆರಂಭವಾಗಲು ಕೇವಲ ಎರಡು ದಿನ ಬಾಕಿ ಇದೆ. ಈ ವಿಚಾರವಾಗಿ ಮಾತನಾಡಿರುವ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಶೋ ನಿರ್ದೇಶಕ ಪರಮೇಶ್ ಗುಂಡ್ಕಲ್, ಹಲವಾರು ಇಂಟ್ರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಏನಂದ್ರು ಸುದೀಪ್​?: ಸಾಮಾನ್ಯವಾಗಿ ‘ಬಿಗ್ ಬಾಸ್ ಸೀಸನ್’ ಶುರುವಾಯ್ತು ಅಂದ್ರೆ ಸಾಕು ಎಲ್ಲಾ ವಯೋಮಾನದವರು ಇದನ್ನು ಅತ್ಯಂತ ಉತ್ಸುಕರಾಗಿ ನೋಡ್ತಾರೆ. ಅದರಲ್ಲೂ ಈ ಕಾರ್ಯಕ್ರಮವನ್ನು ರಂಜನೀಯವಾಗಿ ನಡೆಸಿಕೊಡ್ತಿರೋ ನಾಯಕ ಕಿಚ್ಚ ಸುದೀಪ್​ ಅವರ ಪ್ರಿಪ್ರೆಶನ್​​ ಹೇಗಿರುತ್ತೆ ಅನ್ನೋ ಕಾತುರತೆಯೂ ಅಷ್ಟೇ ಪ್ರಮಾಣದಲ್ಲಿ ಇರೋದು ಸಹಜ. ಇದೀಗ ಪ್ರೇಕ್ಷಕರಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರುವ ಕಿಚ್ಚ, ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ನಾನು ಯಾವುದಕ್ಕೂ ಪ್ರಿಪೇರ್ ಆಗಿ ಹೋಗಲ್ಲ, ಸಿನಿಮಾ ಶೂಟಿಂಗ್​ನಲ್ಲಿ ಏನು ನಡೆಯುತ್ತೆ ಅನ್ನೋದು ಕನ್ಫರ್ಮ್ ಇರುತ್ತೆ. ಇಲ್ಲಿ ಏನಾಗುತ್ತೆ ಅನ್ನೋದು ಗೊತ್ತಿರಲ್ಲ. ನನಗೂ ಕಂಟೆಸ್ಟೆಂಟ್​​ಗಳಿಗೂ ಲೈವ್ ನಡೆಯುತ್ತಿರುತ್ತೆ. ಅವರೇನು ಮಾತಾಡ್ತಾರೆ ಅನ್ನೋದ್ರ ಮೇಲೆ ನಾನು ಏನು ಮಾತಾಡಬೇಕು ಅನ್ನೋದನ್ನ ಡಿಸೈಡ್ ಮಾಡ್ಬೇಕು. ಶೋ ಸ್ಟಾರ್ಟ್​ ಆಗ್ತಿದ್ದ ಹಾಗೇ ಕ್ಯಾಮರಾ ನೋಡ್ಕೊಂಡು ಕೆಲವು ಲೈನ್​ಗಳನ್ನ ಹೇಳ್ತೀವಿ. ಅವರಿಗೂ ನಮಗೂ ಕನೆಕ್ಟ್ ಆಗ್ತಿದ್ದ ಹಾಗೆ ಅದು ಎಲ್ಲಿಗೆ ಹೋಗುತ್ತೆ ಅನ್ನೋದೇ ಗೊತ್ತಾಗಲ್ಲ’ ಎಂದಿದ್ದಾರೆ.

ಹುಚ್ಚ ವೆಂಕಟ್ ಗೆಲ್ತಿದ್ರು: ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆಯಲ್ಲಿ ಕೈ ಎತ್ತದಿದ್ದರೆ ಆ ವರ್ಷ ಅವ್ರೇ ಗೆಲ್ತಿದ್ರು. ಅಷ್ಟು ಚೆನ್ನಾಗಿ ಹುಚ್ಚ ವೆಂಕಟ್ ಅವರಿಗೆ ವೋಟ್​ಗಳು ಬರ್ತಿದ್ವು ಎಂದಿರುವ ಅವರು, ಬಿಗ್ ​ಬಾಸ್​ ಸೀಸನ್ 6ರ ನಿರೂಪಣೆ ನನಗೆ ಸಖತ್ ಟಫ್ ಆಗಿತ್ತು ಎಂದಿದ್ದಾರೆ.

ಸತತ ಏಳು ಬಿಗ್ ಬಾಸ್ ಸೀಸನ್​​ಗಳನ್ನ ನಿರ್ದೇಶನ ಮಾಡುತ್ತಿರುವ ಪರಮೇಶ್ ಗುಂಡ್ಕಲ್ ಮಾತನಾಡಿ, ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿರುತ್ತೆ. ಮನೆಯಿಂದ ಹಿಡಿದು, 17 ಜನ‌ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಬಹುತೇಕ ಸೆಲೆಬ್ರಿಟಿಗಳು ಆಗಿರುತ್ತಾರೆ. ಕೊರೊನಾ ಹಿನ್ನೆಲೆ ಎಲ್ಲಾ ಸ್ಪರ್ಧಿಗಳನ್ನ ‌ಕ್ವಾರಂಟೈನ್ ಮಾಡಲಾಗುತ್ತೆ ಅಂತಾ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...