ಹುಷಾರ್, ವಿಡಿಯೋ ಕಾಲ್ ಮಾಡಿ , ‘ ಆ’ ವಿಡಿಯೋ ಕಳುಹಿಸಿ ಬ್ಲಾಕ್ಮೇಲ್ ಮಾಡ್ತಾರೆ..!

Date:

ಹುಷಾರ್, ವಿಡಿಯೋ ಕಾಲ್ ಮಾಡಿ , ‘ ಆ’ ವಿಡಿಯೋ ಕಳುಹಿಸಿ ಬ್ಲಾಕ್ಮೇಲ್ ಮಾಡ್ತಾರೆ..!

ಸಾರ್ವಜನಿಕರನ್ನು ಸುಲಿಗೆ ಮಾಡಲು ಸೈಬರ್‌ ಖದೀಮರು ಹೊಸದಾ ತಂತ್ರವೊಂದನ್ನು ಕಂಡುಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕಾಲ್‌ ಮಾಡಿ, ಅಶ್ಲೀಲ ವಿಡಿಯೊಗಳನ್ನು ಹಾಕಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಈ ರೀತಿಯ ಬ್ಲ್ಯಾಕ್‌ಮೇಲ್‌ ಕರೆಗಳು ಹಲವರಿಗೆ ಬಂದಿವೆ. ಬೆಂಗಳೂರು ನಗರದ ಇನ್ಸ್‌ಪೆಕ್ಟರ್‌ವೊಬ್ಬರು ಸೈಬರ್‌ ಕ್ರೈಂ (ಸಿಇಎನ್‌) ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್‌ ಸಿ.ದಯಾನಂದ ಎಂಬುವರಿಗೆ ಡಿ.8ರಂದು ರಾತ್ರಿ 8.30ರ ಸುಮಾರಿಗೆ ಅಪರಿಚಿತ ಫೋನ್‌ ನಂಬರ್‌ನಿಂದ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಾಲ್‌ ಬಂದಿದ್ದು, ಸ್ವೀಕರಿಸಿದ್ದಾರೆ. ಕೂಡಲೇ ಅದರಲ್ಲಿ ಮಹಿಳೆಯ ಅಶ್ಲೀಲ ವಿಡಿಯೊ ಬಂದಿದೆ. ಗಾಬರಿಗೊಂಡ ಇನ್ಸ್‌ಪೆಕ್ಟರ್‌ ಫೋನ್‌ ಕಟ್‌ ಮಾಡಿದ್ದಾರೆ. ಯಾರಿದು ಎಂದು ತಲೆಕೆಡಿಸಿಕೊಳ್ಳುವಷ್ಟರಲ್ಲಿ ಆ ವಿಡಿಯೊದ ಸ್ಕ್ರೀನ್‌ಶಾಟ್‌ ತೆಗೆದು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಲಾಗಿದೆ.
11 ಸಾವಿರ ರೂ. ಹಣ ನೀಡದಿದ್ದರೆ ನಿನ್ನ ಫೇಸ್‌ಬುಕ್‌ ಸ್ನೇಹಿತರಿಗೆ ಕಳುಹಿಸುತ್ತೇನೆಂದು ಬೆದರಿಸಿದ್ದಾರೆ. ಆನ್‌ಲೈನ್‌ ಖದೀಮರ ಕೆಲಸ ಎಂದು ಅರಿತ ದಯಾನಂದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ನಲ್ಲಿ ಮೊಬೈಲ್‌ ಫೋನ್‌ ಸ್ಕ್ರೀನ್‌ ಮೇಲೆ ನಮ್ಮೊಂದಿಗೆ ಮಾತನಾಡುತ್ತಿರುವವರ ವಿಡಿಯೊ ಜೊತೆಗೆ ನಮ್ಮ ವಿಡಿಯೊ ಕೂಡ ನಮಗೆ ಕಾಣಿಸುತ್ತದೆ. ಖದೀಮರು, ಆ ಕಡೆಯಿಂದ ಅಶ್ಲೀಲ ವಿಡಿಯೊವನ್ನು ವಿಡಿಯೊ ಕಾಲ್‌ ವೇಳೆ ಪ್ಲೇ ಮಾಡುತ್ತಾರೆ. ಕರೆ ಸ್ವೀಕರಿಸಿದಾಗ ಸಹಜವಾಗಿ ಖದೀಮರ ಮೊಬೈಲ್‌ನಲ್ಲಿ ನಮ್ಮ ವಿಡಿಯೊ ಇರುತ್ತದೆ.
ಅಶ್ಲೀಲ ವಿಡಿಯೊ ಜತೆಗೆ ನಮ್ಮ ವಿಡಿಯೊ ಇರುವ ಕಾರಣ ಅದನ್ನೇ ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಾರೆನ್ನಲಾಗಿದೆ. ಅಪರಿಚಿತರು ವಿಡಿಯೊ ಕಾಲ್‌ ಮಾಡಿದರೆ, ಕರೆ ಸ್ವೀಕರಿಸುವ ಮೊದಲು ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.
ಹಿರಿಯ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ಅವರ ಫೇಸ್‌ಬುಕ್‌ ಖಾತೆಯಿಂದ ಫೋಟೋ ಎತ್ತಿಕೊಂಡ ಖದೀಮರು, ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ವಂಚಿಸಲು ಯತ್ನಿಸಿದ್ದಾರೆ. ಈ ಕುರಿತು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿರುವ ಅಂಜುಂ ಪರ್ವೇಜ್‌ ಅವರು, ಅಪರಿಚತರು ನನ್ನ ಫೋಟೊ ಎತ್ತಿಕೊಂಡು ನಕಲಿ ಖಾತೆ ಸೃಷ್ಟಿಸಿ, ನನ್ನ ಫೇಸ್‌ಬುಕ್‌ ಫ್ರೆಂಡ್ಸ್‌ಗಳಿಗೆ ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ. ಸ್ನೇಹಿತರಾದವರಿಗೆ ಮೆಸೆಂಜರ್‌ ಮೂಲಕ ತುರ್ತಾಗಿ ಹಣದ ಅಗತ್ಯವಿದೆ ಎಂದು ಸಂದೇಶ ಕಳುಹಿಸಿ ಮೋಸ ಮಾಡಲು ಯತ್ನಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

 

ಹುಷಾರ್, ವಿಡಿಯೋ ಕಾಲ್ ಮಾಡಿ , ‘ ಆ’ ವಿಡಿಯೋ ಕಳುಹಿಸಿ ಬ್ಲಾಕ್ಮೇಲ್ ಮಾಡ್ತಾರೆ..!

ಸಾರ್ವಜನಿಕರನ್ನು ಸುಲಿಗೆ ಮಾಡಲು ಸೈಬರ್‌ ಖದೀಮರು ಹೊಸದಾ ತಂತ್ರವೊಂದನ್ನು ಕಂಡುಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕಾಲ್‌ ಮಾಡಿ, ಅಶ್ಲೀಲ ವಿಡಿಯೊಗಳನ್ನು ಹಾಕಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಈ ರೀತಿಯ ಬ್ಲ್ಯಾಕ್‌ಮೇಲ್‌ ಕರೆಗಳು ಹಲವರಿಗೆ ಬಂದಿವೆ. ಬೆಂಗಳೂರು ನಗರದ ಇನ್ಸ್‌ಪೆಕ್ಟರ್‌ವೊಬ್ಬರು ಸೈಬರ್‌ ಕ್ರೈಂ (ಸಿಇಎನ್‌) ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್‌ ಸಿ.ದಯಾನಂದ ಎಂಬುವರಿಗೆ ಡಿ.8ರಂದು ರಾತ್ರಿ 8.30ರ ಸುಮಾರಿಗೆ ಅಪರಿಚಿತ ಫೋನ್‌ ನಂಬರ್‌ನಿಂದ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಾಲ್‌ ಬಂದಿದ್ದು, ಸ್ವೀಕರಿಸಿದ್ದಾರೆ. ಕೂಡಲೇ ಅದರಲ್ಲಿ ಮಹಿಳೆಯ ಅಶ್ಲೀಲ ವಿಡಿಯೊ ಬಂದಿದೆ. ಗಾಬರಿಗೊಂಡ ಇನ್ಸ್‌ಪೆಕ್ಟರ್‌ ಫೋನ್‌ ಕಟ್‌ ಮಾಡಿದ್ದಾರೆ. ಯಾರಿದು ಎಂದು ತಲೆಕೆಡಿಸಿಕೊಳ್ಳುವಷ್ಟರಲ್ಲಿ ಆ ವಿಡಿಯೊದ ಸ್ಕ್ರೀನ್‌ಶಾಟ್‌ ತೆಗೆದು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಲಾಗಿದೆ.
11 ಸಾವಿರ ರೂ. ಹಣ ನೀಡದಿದ್ದರೆ ನಿನ್ನ ಫೇಸ್‌ಬುಕ್‌ ಸ್ನೇಹಿತರಿಗೆ ಕಳುಹಿಸುತ್ತೇನೆಂದು ಬೆದರಿಸಿದ್ದಾರೆ. ಆನ್‌ಲೈನ್‌ ಖದೀಮರ ಕೆಲಸ ಎಂದು ಅರಿತ ದಯಾನಂದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ನಲ್ಲಿ ಮೊಬೈಲ್‌ ಫೋನ್‌ ಸ್ಕ್ರೀನ್‌ ಮೇಲೆ ನಮ್ಮೊಂದಿಗೆ ಮಾತನಾಡುತ್ತಿರುವವರ ವಿಡಿಯೊ ಜೊತೆಗೆ ನಮ್ಮ ವಿಡಿಯೊ ಕೂಡ ನಮಗೆ ಕಾಣಿಸುತ್ತದೆ. ಖದೀಮರು, ಆ ಕಡೆಯಿಂದ ಅಶ್ಲೀಲ ವಿಡಿಯೊವನ್ನು ವಿಡಿಯೊ ಕಾಲ್‌ ವೇಳೆ ಪ್ಲೇ ಮಾಡುತ್ತಾರೆ. ಕರೆ ಸ್ವೀಕರಿಸಿದಾಗ ಸಹಜವಾಗಿ ಖದೀಮರ ಮೊಬೈಲ್‌ನಲ್ಲಿ ನಮ್ಮ ವಿಡಿಯೊ ಇರುತ್ತದೆ.
ಅಶ್ಲೀಲ ವಿಡಿಯೊ ಜತೆಗೆ ನಮ್ಮ ವಿಡಿಯೊ ಇರುವ ಕಾರಣ ಅದನ್ನೇ ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಾರೆನ್ನಲಾಗಿದೆ. ಅಪರಿಚಿತರು ವಿಡಿಯೊ ಕಾಲ್‌ ಮಾಡಿದರೆ, ಕರೆ ಸ್ವೀಕರಿಸುವ ಮೊದಲು ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.
ಹಿರಿಯ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ಅವರ ಫೇಸ್‌ಬುಕ್‌ ಖಾತೆಯಿಂದ ಫೋಟೋ ಎತ್ತಿಕೊಂಡ ಖದೀಮರು, ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ವಂಚಿಸಲು ಯತ್ನಿಸಿದ್ದಾರೆ. ಈ ಕುರಿತು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿರುವ ಅಂಜುಂ ಪರ್ವೇಜ್‌ ಅವರು, ಅಪರಿಚತರು ನನ್ನ ಫೋಟೊ ಎತ್ತಿಕೊಂಡು ನಕಲಿ ಖಾತೆ ಸೃಷ್ಟಿಸಿ, ನನ್ನ ಫೇಸ್‌ಬುಕ್‌ ಫ್ರೆಂಡ್ಸ್‌ಗಳಿಗೆ ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ. ಸ್ನೇಹಿತರಾದವರಿಗೆ ಮೆಸೆಂಜರ್‌ ಮೂಲಕ ತುರ್ತಾಗಿ ಹಣದ ಅಗತ್ಯವಿದೆ ಎಂದು ಸಂದೇಶ ಕಳುಹಿಸಿ ಮೋಸ ಮಾಡಲು ಯತ್ನಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

 

 

 

 

Share post:

Subscribe

spot_imgspot_img

Popular

More like this
Related

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...