2 ವರ್ಷದ ಹಿಂದೆ ಮದುವೆ, ನಂತರ ಮಗು, ಈಗ ಹುಡುಗನ ಸಾವು

Date:

ತಂದೆ-ತಾಯಿ, ಹೆಂಡತಿ-ಮಗುವಿಗೆ ಆಧಾರದಂತಿದ್ದ ಮಗ ಬೆಳ್ಳಬೆಳಗ್ಗೆ ಕೆಲಕ್ಕೆ ಹೋದವನು ಕೆಲವೇ ಗಂಟೆಗಳಲ್ಲಿ ಹೆಣವಾಗಿದ್ದಾನೆ. ಮಗನನ್ನು ಕಳೆದುಕೊಂಡ ತಂದೆ-ತಾಯಿ, ಗಂಡನನ್ನು ಕಳೆದುಕೊಂಡ ಹೆಂಡತಿ, ಏನು ಅರಿಯದ ಪುಟ್ಟ ಕಂದಮ್ಮನನ್ನು ನೋಡಿದರೆ ಎಂಥವರ ಕರುಳು ಕಿತ್ತುಬರುವಂತಿತ್ತು.

 

ಬೆಂಗಳೂರಿನ ಐಟಿ ಉದ್ಯೋಗಿ ರೋಹಿತ್ ಎಂದಿನಂತೆ ಇಂದು ತನ್ನ ಬೈಕ್ ನಲ್ಲಿ ಕೆಲಸಕ್ಕೆ ಹೊರಟ್ಟಿದ್ದರು. ಜವರಾಯ ರಸ್ತೆ ಬದಿಯಲ್ಲಿಯೇ ಕಾದು ಕುಳಿದಿದ್ದನು ಎನಿಸುತ್ತೆ. ವಾಟರ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ರೋಹಿತ್ ತಲೆ ಮೇಲೆ ವಾಹನ ಹರಿದುಬಿಟ್ಟಿದೆ. ಸ್ಥಳದಲ್ಲೇ ರೋಹಿತ್ ಪ್ರಾಣ ಬಿಟ್ಟಿದ್ದಾರೆ. 

 

HSR ಲೇಔಟ್ ನ 27ನೇ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ವಾಟರ್ ಟ್ಯಾಂಕ್ ಪಕ್ಕದಲ್ಲೇ ರೋಹಿತ್ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಟ್ಯಾಂಕರ್ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಬೈಕ್ ಗೆ ಟ್ಯಾಂಕರ್ ಟಚ್ ಆಗಿ ಫುಟ್ ಪಾತ್ ಗೆ ಬೈಕ್ ತಾಗಿದೆ. ಈ ವೇಳೆ ಬ್ಯಾಲೆನ್ಸ್ ತಪ್ಪಿ ಬಲಕ್ಕೆ ಬಿದ್ದ ಬೈಕ್ ಸವಾರ ರೋಹಿತ್ ತಲೆ ಮೇಲೆ ಟ್ಯಾಂಕರ್ ಚಕ್ರ ಹರಿದು ಸಾವು ಸಂಭವಿಸಿದೆ. 

ವಾಟರ್ ಟ್ಯಾಂಕ್ ಚಾಲಕನ ವಿರುದ್ಧ ದೂರು ದಾಖಸಿಕೊಂಡು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ಎದುರು ಮೃತ ರೋಹಿತ್ ಅವರ ತಂದೆಯ ಆಕ್ರಂದನ ಮುಗಿಲು ಮುಟ್ಟಿತ್ತು. 

 

ಆ ಮಗುಗೆ ಯಾರನ್ನ ಅಪ್ಪ ಅಂತಾ ತೋರಿಸ್ಲಪ್ಪಾ, ಇನ್ನೂ ಆ ಮಗುಗೆ ಹಾಂ..ಹೂ ಅನ್ನಕ್ಕೂ ಬರಲ್ಲ. ದೇವರೇ ನಿನಗೆ ಕರುಣೆ ಅನ್ನೊದೇ ಇಲ್ವಾ? ನನ್ನನ್ನಾದರೂ ಕರೆದುಕೊಂಡು ಹೋಗಿದ್ರೆ ಆಗಿರೋದಲ್ವಾ? ಮನೆ ಕುಡಿಯನ್ನೇ ಮುರಿದುಕೊಂಡುಬಿಟ್ಯಲ್ಲ. ನಮಗೆ ಈಗ ಯಾರಪ್ಪ ದಿಕ್ಕು, ಮನೆ ಆಧಾರವಗಿದ್ದ ನನ್ನ ಮಗ ಎಂದು ರೋಹಿತ್ ತಂದೆ ಶ್ರೀನಿವಾಸ್ ಕಣ್ಣೀರು ಹಾಕಿದರು.

Share post:

Subscribe

spot_imgspot_img

Popular

More like this
Related

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...