2021 ನಲ್ಲಿ ಯಾರು ಯಾವ ಮಂತ್ರ ಜಪಿಸಬೇಕು?

Date:

2020 ವರ್ಷವನ್ನು ಕೆಲವರು ಸಂತೋಷದಿಂದ ಕಳೆದರೆ ಇನ್ನು ಕೆಲವರು ದುಃಖದಲ್ಲಿ, ಸಮಸ್ಯೆಗಳ ಸುಳಿಯಲ್ಲಿ ಕಳೆದಿದ್ದಾರೆ. ಇನ್ನೂ ಕೆಲವರು ಕೊರೊನಾ ಮಹಾಮಾರಿಯ ಭಯದಲ್ಲೇ ಕಳೆದಿದ್ದಾರೆ. ನಾವೀಗ 2021 ರ ನೂತನ ವರ್ಷದಲ್ಲಿದ್ದೇವೆ. ಸಮಸ್ಯೆಗಳೆಲ್ಲವೂ ದೂರಾಗುವುದು, ದುಃಖಗಳೆಲ್ಲವೂ ದೂರಾಗುವುದು ಎನ್ನುವ ಹೊಸ ಆಶಾಕಿರಣವನ್ನುಟ್ಟುಕೊಂಡು 2021ನ್ನು ಸ್ವಾಗತಿಸಿದ್ದೇವೆ. ಎಷ್ಟೇ ಹೊಸ ವರ್ಷ ಬಂದರೂ ಸಮಸ್ಯೆಗಳು ಮನುಷ್ಯನನ್ನು ಬಿಡಲಾರದು. 2021 ರಲ್ಲಿ ಅಂದರೆ ಈ ವರ್ಷ ಎದುರಾಗುವ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲು ರಾಶಿಗನುಗುಣವಾಗಿ ಈ ಮಂತ್ರವನ್ನು ಪಠಿಸಬಹುದು. ರಾಶಿಗನುಗುಣವಾಗಿ ಮಂತ್ರವನ್ನು ಪಠಿಸುವುದರೊಂದಿಗೆ ಈ ಪರಿಹಾರವನ್ನು ತೆಗೆದುಕೊಳ್ಳುವುದರಿಂದ ವರ್ಷದುದ್ದಕ್ಕೂ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸುತ್ತೀರಿ. 2021 ರಲ್ಲಿ ರಾಶಿಗನುಗುಣವಾಗಿ ಯಾವ ಮಂತ್ರವನ್ನು ಪಠಿಸಬೇಕು..? ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಬೇಕು..? ತಪ್ಪದೇ ತಿಳಿದುಕೊಳ್ಳಿ..

ಮೇಷ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮೇಷ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಸೋಮವಾರ, ಶುದ್ಧ ಜೇನುತುಪ್ಪವನ್ನು ಮಣ್ಣಿನ ಪಾತ್ರೆಗಳಲ್ಲಿ ತುಂಬಿಸಿ ಟೆರೇಸ್ ಅಥವಾ ಬಾಲ್ಕನಿಯಲ್ಲಿ ಇರಿಸಿ. ಮಂಗಳವಾರ ಅದನ್ನು ಯಾಋಇಗೂ ತಿಳಿಯದಂತೆ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಹಾಕಿ ಬನ್ನಿ. ನಾಯಿಗಳಿಗೆ 43 ದಿನಗಳವರೆಗೆ ಸಿಹಿ ತಿಂಡಿಯನ್ನು ಅಥವಾ ಬಿಟ್ಕೇಟ್‌ನ್ನು ನೀಡಿ.

ಯಶಸ್ಸಿನ ಮಂತ್ರ – ಓಂ ಹ್ರೈಂ ಜೂಂ ಸಃ

ಶುಭ ಬಣ್ಣ – ಕೆಂಪು

ಶುಭ ಗ್ರಹಗಳು – ಸೂರ್ಯ, ಬೃಹಸ್ಪತಿ

ಶುಭ ಸಂಖ್ಯೆ – 9

ಶುಭ ದಿಕ್ಕು – ದಕ್ಷಿಣ

 

ವೃಷಭ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಷಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಷಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಕರಗಿದ ಬೆಣ್ಣೆ, ಮೊಸರು, ಪಾಯಸ, ಸುಗಂಧ ದ್ರವ್ಯ, ಬಟ್ಟೆ, ಬೆಳ್ಳಿ, ಅಕ್ಕಿ ಮುಂತಾದ ವಸ್ತುಗಳನ್ನು ಶುಕ್ರವಾರದಂದು ದಾನ ಮಾಡಬೇಕು.

ಯಶಸ್ಸಿಗೆ ಮಂತ್ರ – ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ ಊರ್ವರೂಕಮೀವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌.

ಗ್ರಹ ಮಂತ್ರ – ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ|

ಶುಭ ಬಣ್ಣ – ಬಿಳಿ, ಹಸಿರು

ಶುಭ ಸಂಖ್ಯೆ – 5,6

ಶುಭ ಗ್ರಹಗಳು – ಶುಕ್ರ, ಬುಧ

ಶುಭ ದಿಕ್ಕು – ಪಶ್ಚಿಮ

ಮಿಥುನ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮಿಥುನ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ: ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ಧ್ವಜವನ್ನು ಸ್ಥಾಪಿಸಿ.

ಯಶಸ್ಸಿಗೆ ಮಂತ್ರ – ಓಂ ಏಂ ಶ್ರೀ ಕ್ಲೀಂ ಪ್ರಾಣ ವಲ್ಲಭಾಯ ಸೌಃ ಸೌಭಾಗ್ಯದಾಯ ಶ್ರೀ ಕೃಷ್ಣಾಯ ಸ್ವಾಹಾ|

 

ಕಟಕ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕಟಕ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಹುಣ್ಣಿಮೆಯ ದಿನದಂದು ಪಾಯಸವನ್ನು ದಾನ ಮಾಡಬೇಕು. ಇದರಿಂದ ಲಕ್ಷ್ಮಿ ದೇವಿಯು ಸಂತಸಗೊಳ್ಳುವಳು.

ಯಶಸ್ಸಿನ ಮಂತ್ರ – ಓಂ ಹಸ್ತುಪಿಶಾಚಿಲಿಖೇ ಸ್ವಾಹಾ|

ಸಿಂಹ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಸಿಂಹ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಬೆಲ್ಲ, ಮಸೂರ, ಬಾದಾಮಿ, ಜೇನುತುಪ್ಪ, ತೆಂಗಿನಕಾಯಿ ಮತ್ತು ಸಾಸಿವೆ ಎಣ್ಣೆಯನ್ನು ಭಾನುವಾರ ದಾನ ಮಾಡಿ. ಇದರಿಂದ ಸೂರ್ಯ ದೇವನಿಗೆ ಸಂತೋಷವಾಗುತ್ತದೆ.

ಯಶಸ್ಸಿನ ಮಂತ್ರ – ಓಂ ಹ್ರೀಂ ಶ್ರೀಂ ಸೌಂಃ

ಕನ್ಯಾ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕನ್ಯಾ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ: ಕಾಗೆಗಳಿಗೆ ಸಿಹಿ ಅನ್ನ ಮತ್ತು ಹಸುವಿಗೆ ಹಸಿರು ಮೇವನ್ನು ನೀಡಿ. ಇದು ನಿಮ್ಮೆಲ್ಲಾ ಸಮಸ್ಯೆಗಳನ್ನು ದೂರಾಗಿಸುತ್ತದೆ.

ಯಶಸ್ಸಿನ ಮಂತ್ರ – ಓಂ ಶ್ರೀಂ ಏಂ ಓಂ|

 

ತುಲಾ

 

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ತುಲಾ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಕೊಳಕು ಅಥವಾ ಹರಿದ ಹಳೆಯ ಬಟ್ಟೆಗಳನ್ನು ಧರಿಸಬೇಡಿ. ಸುಗಂಧ ದ್ರವ್ಯ ಅಥವಾ ಪರ್ಪ್ಯುಮ್‌ ಬಳಸಿ. ಇದರಿಂದ ಲಕ್ಷ್ಮಿ ದೇವಿ ಆಶೀರ್ವಾದ ನೀಡುವಳು.

ಯಶಸ್ಸಿನ ಮಂತ್ರ – ಓಂ ಏಂ ಹ್ರೀಂ ಶಿವ ಗೌರೀಮಯ, ಹ್ರೀಂ ಏಂ ಓಂಃ. ಇದು ಲಕ್ಷ್ಮಿ ಮಂತ್ರ.

ವೃಶ್ಚಿಕ

 

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಶ್ಚಿಕ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ನಿರ್ಗತಿಕರಿಗೆ ಬಡವರಿಗೆ ಸಿಹಿ ಆಹಾರವನ್ನು ನೀಡಿ ಆದರೆ ನೀವು ಆ ಆಹಾರವನ್ನು ಸೇವಿಸಬೇಡಿ. ಜೇನುತುಪ್ಪ ಮತ್ತು ಸಿಂಧೂರವನ್ನು ಮಣ್ಣಿನ ಪಾತ್ರೆಗಳಲ್ಲಿ ಹಾಕಿ ಮನೆಯಲ್ಲಿ ಇಟ್ಟುಕೊಳ್ಳಿ. ಕೆಂಪು ಗುಲಾಬಿಯನ್ನು ನದಿಯಲ್ಲಿ ಹರಿಬಿಡಿ.

ಯಶಸ್ಸಿನ ಮಂತ್ರ – ಓಂ ನಾರಾಯಣಾಯ ಸುರಸಿಂಹಾಯ ನಮಃ

ಧನು

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಧನು ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ದೇವಾಲಯದಲ್ಲಿ ಅರಳಿ ಗಿಡವನ್ನು ನೆಟ್ಟು ಅದಕ್ಕೆ ಪ್ರತಿನಿತ್ಯ ನೀರು ಹಾಕಿ. ಅಲ್ಲದೆ, ಹಣೆಗೆ, ಹೊಕ್ಕುಳಿಗೆ ಮತ್ತು ನಾಲಿಗೆಗೆ ಕೇಸರಿ ಮಿಶ್ರ ನೀರನ್ನು ಹಚ್ಚಿ.

 

ಯಶಸ್ಸಿಗೆ ಮಂತ್ರ – ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ

 

ಮಕರ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮಕರ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಎರಡು ಬಾಳೆಗಿಡವನ್ನು ನೆಟ್ಟು ಅದನ್ನು ಪೋಷಣೆ ಮಾಡಿ. ಮತ್ತು ಯಾವಾಗಲೂ ಆ ಬಾಳೆಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿಡಿ. ಪ್ರತಿನಿತ್ಯ ಇದು ಸಾಧ್ಯವಾಗದಿದ್ದರೆ ಗುರುವಾರದಂದು ತಪ್ಪದೇ ಮಾಡಬೇಕು. ಇದರಿಂದ ವಿಷ್ಣು ನಿಮ್ಮನ್ನು ಆಶೀರ್ವದಿಸುತ್ತಾನೆ.

ಯಶಸ್ಸಿನ ಮಂತ್ರ – ಓಂ ಶ್ರೀಂ ಹ್ರೀಂ ಶ್ರೀಂ ನಮಃ |

ಕುಂಭ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕುಂಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಯಾವಾಗಲೂ ಬೆಳ್ಳಿಯ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಸಾಸಿವೆ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಹಸುಗಳಿಗೆ ನೀಡಿ.

ಗ್ರಹ ಮಂತ್ರ – ಓಂ ಶ್ರೀಂ ಪ್ರಾಂ ಪ್ರೀಂ ಪ್ರೌಂ ಸಃ ಶಂ ಶನೇಶ್ಚರಾಯ ನಮಃ

 

ಮೀನ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮೀನ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಹಣೆಗೆ, ಹೊಕ್ಕುಳಿಗೆ ಮತ್ತು ನಾಲಿಗೆಗೆ ಕೇಸರಿ ಮಿಶ್ರ ನೀರನ್ನು ಹಚ್ಚಿ ಮತ್ತು ಮಸೂರ ಬೇಳೆಯನ್ನು ದಾನ ಮಾಡಿ.

ಯಶಸ್ಸಿನ ಮಂತ್ರ- ಓಂ ಹ್ರೀಂ ಕ್ಲೀಂ ಶ್ರೀಂ ಶ್ರೀಯೇ ನಮಃ

 

 

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...