ನೋವಗರಡಿಯ ಶಕ್ತಿ

Date:

ನೋವಗರಡಿಯ ಶಕ್ತಿ

ಸರಸರನೆ ಸರಿದ ಸಮಯದಿ
ಸುರಿದ ಜಡಿಮಳೆಯ ನೆತ್ತಿ ಮೇಲೆ
ಹೊತ್ತು ಸಾಲು ಸಾಲಿನಾ
ನೋವಿನಾ ಬೀಜವ
ಮನದಿ ನೆಟ್ಟು
ಜಗದ ಕಣ್ಣೊಳಗೆ ನಗುವೆಂಬ
ಕಾರ್ಮೋಡವ ಹರಡಿ
ಎದೆಭಾರ ಹಗುರವಾಗುವುದೆಂದು
ಒಂಟಿತನದ ಸೆರಗ ಹಾಸಿದಾಗ
ಅಲ್ಲೊಂದು ಗುಡುಗು-
ಇಲ್ಲೊಂದು ಸಿಡಿಲು
ಮಡಿಲ-ಒಡಲ ಕಣ್ಣೀರ
ಕಡಲ ಕಲಕಿ ಹೊಸಬೆಳಕ
ಅರಸುತಿರುವಾಗ
ಕಾವ್ಯದತ್ತನು ಕನಸ
ಗೋಪುರವ ಕಟ್ಟಿ
ನನಸಿನೂರಿನ ಸಂಗವ ಮಾಡೆಂದು
ಮತ್ತದೇ ಮುಗುಳ್ನಗೆಯ ಬಿತ್ತಿ
ಮರೆಯಾದನು-ಗುರಿಯಗುರುವಾದನು.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್ ನವದೆಹಲಿ: ನವೆಂಬರ್...

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...