ನೋವಗರಡಿಯ ಶಕ್ತಿ

Date:

ನೋವಗರಡಿಯ ಶಕ್ತಿ

ಸರಸರನೆ ಸರಿದ ಸಮಯದಿ
ಸುರಿದ ಜಡಿಮಳೆಯ ನೆತ್ತಿ ಮೇಲೆ
ಹೊತ್ತು ಸಾಲು ಸಾಲಿನಾ
ನೋವಿನಾ ಬೀಜವ
ಮನದಿ ನೆಟ್ಟು
ಜಗದ ಕಣ್ಣೊಳಗೆ ನಗುವೆಂಬ
ಕಾರ್ಮೋಡವ ಹರಡಿ
ಎದೆಭಾರ ಹಗುರವಾಗುವುದೆಂದು
ಒಂಟಿತನದ ಸೆರಗ ಹಾಸಿದಾಗ
ಅಲ್ಲೊಂದು ಗುಡುಗು-
ಇಲ್ಲೊಂದು ಸಿಡಿಲು
ಮಡಿಲ-ಒಡಲ ಕಣ್ಣೀರ
ಕಡಲ ಕಲಕಿ ಹೊಸಬೆಳಕ
ಅರಸುತಿರುವಾಗ
ಕಾವ್ಯದತ್ತನು ಕನಸ
ಗೋಪುರವ ಕಟ್ಟಿ
ನನಸಿನೂರಿನ ಸಂಗವ ಮಾಡೆಂದು
ಮತ್ತದೇ ಮುಗುಳ್ನಗೆಯ ಬಿತ್ತಿ
ಮರೆಯಾದನು-ಗುರಿಯಗುರುವಾದನು.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...