ಇರುಳು ಸರಿದು ರವಿಯು
ಆಗಸದಿ ಇಳಿದು
ಜೀವ ಜೀವಗಳ ಭಾವನೆಗಳ
ಮತ್ತೆ ಎಳೆಬಿಸಿಲಲ್ಲಿ ಎರೆದು
ಪ್ರೀತಿ ಪ್ರೇಮದ ಪಥದಲ್ಲಿ
ಮುಂದುವರಿದ ಮತಿಗಳೆಲ್ಲವೂ
ಸ್ಥುತಿಸುತಿವೆ ಓ ಭಾಸ್ಕರ
ಬಾ ನೀ ಬಾನಂಚಿಗೆ
ಬರಡಾದ ಬದುಕಿಗೆ
ನವಚೈತನ್ಯದ ಬೆಳಕ ನೀಡು
ಕುರುಡಾದ ಕಾಲ ಸರಿದಿವೆ
ನೀ ಬೆಳಕಿನ ಹಣತೆಯ
ಹಚ್ಚಿ ಬಾಳ ಬೆಳಗು
ಜೀವರಾಶಿಯ ಹೊಸ ರಶ್ಮಿ
ಆತ್ಮ ಆತ್ಮಗಳಿಗೂ ನೀ ನೀಡು.
✍?ದತ್ತರಾಜ್ ಪಡುಕೋಣೆ✍?
cheap lipitor cheap lipitor 10mg atorvastatin 40mg usa