ತುಮಕೂರು ವಿಶ್ವವಿದ್ಯಾಲಯದ ಕರ್ಮಕಾಂಡವಿದು. ಬಡ ವಿದ್ಯಾರ್ಥಿಗಳಿಗೆ ವಿದ್ಯಾಲಯ ಮಾಡುತ್ತಿರೋ ಮಹಾ ಮೋಸದ ವ್ಯತೆ ಇದು. ವಿವಿಯಲ್ಲಿ ಲ್ಯಾಪ್ ಟಾಪ್ ಹಗರಣ ನಡೆದಿದೆ..?!
ಸೆಮಿಸ್ಟರ್ ಎಕ್ಸಾಮ್ ಹತ್ತಿರ ಬರ್ತಿದೆ. ಅದಕ್ಕು ಮುನ್ನ ವಿದ್ಯಾರ್ಥಿಗಳು ಸಂಪ್ರಂಧ ಬರೆಯಬೇಕು (Dissertation work) . ಆದರೆ, ವಿವಿಯಿಂದ ಬಡ ವಿದ್ಯಾರ್ಥಿಗಳಿಗೆ ಸಿಗಬೇಕಾದ ಲ್ಯಾಪ್ ಟಾಪ್ ಸಿಕ್ಕಿಲ್ಲ.
ಹೌದು, ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆ ಅಡಿಯಲ್ಲಿ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಬೇಕು. ಆದರೆ, ಇಲ್ಲಿಯವರೆಗೂ ಅರ್ಹ ಫಲಾನುಭವಿಗಳಿಗೆ ಲ್ಯಾಪ್ ಟಾಪ್ ಸಿಕ್ಕಿಲ್ಲ…!
ಆದರೆ, 20-1-2018ರಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ 2017-18ನೇ ಸಾಲಿನ ಚಟುವಟಿಕೆಗಳ ವರದಿ ಕೈಪಿಡಿಯಲ್ಲಿ ಈಗಾಗಲೇ ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಯಡಿಯಲ್ಲಿ 264 ಉನ್ನತ ಗುಣಮಟ್ಟದ ಲ್ಯಾಪ್ ಟಾಪ್ ಗಳನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ಈ ಹೇಳಿಕೆಯಿಂದ ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದಾರೆ…! ಲ್ಯಾಪ್ ಟಾಪ್ ಯಾರಿಗೆ,ಯಾವಾಗ ಕೊಟ್ಟಿದ್ದಾರೆ ಎಂಬುದು ತಿಳಿದಿಲ್ಲ..!
ಇದರಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ನಾಳೆ ಪ.ಜಾತಿ , ಪ.ಪಂಗಡದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.