ಕುದುರೆ ಏರಿ ಮೆರವಣಿಗೆಯೊಂದಿಗೆ ಬರ್ತಿದ್ದ ವರ ಅರೆಸ್ಟ್…!

Date:

ತನ್ನ ಮದುವೆಗೆ ಕುದುರೆಯನ್ನೇರಿ ಬರ್ತಿದ್ದ ವರನನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯ ಪ್ರದೇಶದ ಬಾಲಾಘಾಟ್ ನ ವಾರಾಸಿವಾನಿಯ ಸಿಕಂದರ್ ಗ್ರಾಮದಲ್ಲಿ ನಡೆದಿದೆ.‌
ದಿನೇಶ್ ಬಂಧಿತ. ಅಂದಹಾಗೆ ಕುದುರೆ ಏರಿ ಬಂದಿದ್ದಕ್ಕೆ ಈತನನ್ನು ಬಂಧಿಸಿದ್ದಲ್ಲ…ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಿರೋದು.


ದಿನೇಶ್ ತನ್ನ ಗ್ರಾಮದ ಯುವತಿಯೊಬ್ಬಳನ್ನು ಎರಡು ವರ್ಷದಿಂದ ಪ್ರೀತಿಸ್ತಿದ್ದ ..ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕವನ್ನೂ ಹೊಂದಿದ್ದ ಎನ್ನಲಾಗಿದೆ.
ಆದರೆ ದಿನೇಶ್ ನ ಪೋಷಕರು ದಿನೇಶ್ ಗೆ ಬೇರೆ ಯುವತಿಯೊಡ‌ನೆ ಮದುವೆ ನಿಶ್ಚಯ ಮಾಡಿದ್ದರು.ಇದು ಪ್ರೀತಿಸುತ್ತಿದ್ದ ಯುವತಿಗೆ ಗೊತ್ತೇ ಇರ್ಲಿಲ್ಲ. ದಿನೇಶ್ ಮದುವೆಯ ಎರಡು ದಿನದ ಹಿಂದಷ್ಟೇ ಪ್ರೇಯಸಿಯನ್ನು ಭೇಟಿಯಾದಾಗ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ವರದಿಯಾಗಿದೆ.


ಮದುವೆ ದಿನ ಯುವತಿಗೆ ವಿಷಯ ಗೊತ್ತಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾಳೆ. ಮೆರವಣಿಗೆ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾರ್ಚ್ 31ರಂದು ಮದುವೆ ನೆರವೇರಬೇಕಿತ್ತು. ಈ ಘಟನೆ ಇಂದು‌ ಬೆಳಕಿಗೆ ಬಂದಿದೆ

Share post:

Subscribe

spot_imgspot_img

Popular

More like this
Related

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ!

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ! ಬೆಂಗಳೂರು:...

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...