ತಮ್ಮ ವಿರುದ್ಧ ಮಾತಾಡುವವರಿಗೆ ಹೀಗೆ ಉತ್ತರ ಕೊಡಬೇಕು ಎಂದ ಚಾಲೆಂಜಿಂಗ್ ಸ್ಟಾರ್..!

admin
By admin
0 Min Read

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ವಿರುದ್ಧ ಮಾತನಾಡುವವರಿಗೆ ಮತದಾನದ ದಿನ ಉತ್ತರ ಕೊಡಬೇಕು ಎನ್ನುವ ಮಹತ್ವದ ಸಂದೇಶದವೊಂದನ್ನು ತನ್ನ ಅಭಿಮಾನಿಗಳಿಗೆ ನೀಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅವರ ಪರ ಪ್ರಚಾರಕ್ಕೆ ಹಾಜರಾಗಿರುವ ಡಿ,ಬಾಸ್ ಎಲ್ಲರೂ ಏನೇನೋ ಮಾತಾಡ್ತಾ ಇದ್ದಾರೆ. ಮಾತಾಡೋರು ಮಾತಾಡ್ಲಿ. ನಮ್ಮ ವಿರುದ್ಧ ಮಾತಾಡೋರಿಗೆ ಮತದಾನದ ದಿನ ಉತ್ತರ ಕೊಡಬೇಕು. ಬಹುಮತ ನೀಡಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸುವ ಮೂಲಕ ಉತ್ತರ ನೀಡೋಣ ಎಂದು ಸಂದೇಶ ನೀಡಿದರು.
ಹೀಗೆ ಮತಯಾಚನೆ ಮಾಡುವ ಮೂಲಕ ದರ್ಶನ್ ಸಿಎಂ ಕುಮಾರಸ್ವಾಮಿ, ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಸೇರಿದಂತೆ ಹಲವರಿಗೆ ಒಟ್ಟಿಗೇ ತಿರುಗೇಟು ನೀಡಿದ್ದಾರೆ.

Share This Article