ದುಡ್ಡು ಖರ್ಚು ಮಾಡ್ದೇ ಎಲೆಕ್ಷನ್ ನಡೆಸೋಕೆ ಸಾಧ್ಯವೇ ಎಂದ ಕಾಂಗ್ರೆಸ್ ನ ಹಿರಿಯ ನಾಯಕ…!

Date:

ದುಡ್ಡು ಇಲ್ದೇ ಎಲೆಕ್ಷನ್ ಮಾಡೋಕೆ ಆಗಲ್ಲ. ಅದ್ಕೆ ದುಡ್ಡು ಕೇಳಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಓಪನ್ ಆಗಿ ಹೇಳಿದ್ದಾರೆ.
ಮಂಡ್ಯದ ಹಿರಿಯ ರಾಜಕೀಯ ಮುತ್ಸದ್ಧಿ ಜಿ. ಮಾದೇಗೌಡ್ರು ಮುಕ್ತವಾಗಿ ತಾನೇ ದುಡ್ಡು ಕೇಳಿದ್ದು ಎಂದು ಒಪ್ಪಿಕೊಂಡವರು.
ಜಿ.ಮಾದೇವಗೌಡ್ರು ಸಚಿವ ಸಿ.ಎಸ್ ಪುಟ್ಟರಾಜು ಬಳಿ ದುಡ್ಡಿಗೆ ಬೇಡಿಕೆ ಇಟ್ಟಿದ್ದರು. ಪ್ರಚಾರಕ್ಕೆ ಹಣ ಬೇಕು ಕಳುಹಿಸಿಕೊಡು ಎಂದಿದ್ದರು ಎಂಬ ಆಡಿಯೋ ಇಂದು ಬೆಳಗ್ಗೆ ವೈರಲ್ ಆಗಿತ್ತು.
ಆದರೆ, ಅದು ಮಾದೇಗೌಡ್ರದ್ದೇ ಸಂಭಾಷಣೆ ಎಂದು ಯಾರೂ ನೇರವಾಗಿ ಹೇಳಿರಲಿಲ್ಲ. ಕಾವೇರಿ ಹೋರಾಟಗಾರರು, ಹಿರಿಯರು ಎಂದು ಆ ಬಗ್ಗೆ ಯಾರೂ ಅಪ ಪ್ರಚಾರ ಮಾಡಿರಲಿಲ್ಲ.
ಆದರೆ, ಮಾದೇಗೌಡರು ತಾನೇ ಅಲ್ಲಿ ಮಾತನಾಡಿದ್ದು. ಪ್ರಚಾರಕ್ಕೆ ಬರುವವರು ನನ್ನ ಬಳಿ ದುಡ್ಡು ಕೇಳುತ್ತಾರೆ. ನಾನು ಎಲ್ಲಿಂದ ದುಡ್ ಕೊಡಲಿ.‌ಆದ್ದರಿಂದ ಜಿಲ್ಲಾ ಸಚಿವ ಪುಟ್ಟರಾಜು ಅವರ ಬಳಿ ದುಡ್ಡು ಕೇಳಿದೆ. ಅದರಲ್ಲಿ ತಪ್ಪೇನಿದೆ. ಎಲೆಕ್ಷನ್ ಮಾಡಲು ದುಡ್ ಬೇಕು. ಇಂಡಿಯಾ ದೇಶದಲ್ಲಿ ದುಡ್ಡು ಇಲ್ಲದೇ ಯಾರು ಚುನಾವಣೆ ಮಾಡುತ್ತಾರೆ.
ಖರ್ಚಿಗೆ ದುಡ್ಡು ಬೇಕು ಕೇಳಿದೆ‌‌ ಎಂದು ನೇರವಾಗಿ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...