ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಇಂದು ಜಿಲ್ಲೆಯ ಪಶುಪತಿ ಗ್ರಾಮದಲ್ಲಿ ದರ್ಶನ್ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಲು ಮುಂದಾದ್ರು.
ನಿಮ್ಮ ಅತ್ಯಮೂಲ್ಯ, ಸ್ವಾಭಿಮಾನದ ಮತವನ್ನು ದಯವಿಟ್ಟು ಅವರಿಗೆ ಹಾಕಿ. ಮನೆಯಲ್ಲಿ ಒಂದು ಜೊತೆ ಎತ್ತು ತೆಗೋಬೇಕು ಅಂದ್ರೆ ₹ 1 ವರೆ ಲಕ್ಷ ಖರ್ಚು ಮಾಡ್ತೀವಿ. ಅದೇ ಒಂದು ಒಳ್ಳೆಯ ಹಸು ತೆಗೋಬೇಕು ಅಂದರೂ ₹ 85 ರಿಂದ ₹ 90 ಸಾವಿರ ಖರ್ಚು ಮಾಡ್ತೀವಿ. ಒಂದು ಕುರಿ ತೆಗೋಬೇಕು ಅಂದ್ರೆ ₹ 15 ರಿಂದ ₹ 20 ಸಾವಿರ ಖರ್ಚು ಮಾಡ್ತೀವಿ.
ಮನೆಗೆ ಸುಮ್ಮನೆ ಒಂದು ನಾಯಿ ತಗೊಂಡು ಬರಬೇಕು ಅಂದ್ರೂ, ₹ 5 ಸಾವಿರ ಖರ್ಚು ಮಾಡ್ತೀವಿ. ಆದ್ರೆ ₹ 500 , ₹ 1000 ಸಾವಿರಗೆ ಮತ ಹಾಕಿ, ನಾಳೆ ದಿನ ಪ್ರಾಣಿಗಳಿಗಿಂತಲೂ ನಾವು ಕಮ್ಮಿ ಅಂತಾ ತೋರಿಸ್ಕೋಳೋದು ಬೇಡ. ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ನಿಮ್ಮ ಹಕ್ಕನ್ನು ಚಲಾಯಿಸಿ, ನಿಮ್ಮ ಅಧಿಕಾರವನ್ನು ಉಳಿಸಿಕೊಳ್ಳಿ ಎಂದು ನಟ ದರ್ಶನ್ ಕರೆ ನೀಡಿದರು.