`ಭಾರತ್ ಮಾತಾಕಿ ಜೈ’ ಅನ್ನಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ, ಕತ್ತಿನ ಮೇಲೆ ಕತ್ತಿಯಿಟ್ಟರೂ ನಾನು `ಭಾರತ್ ಮಾತಾಕೀ ಜೈ’ ಅನ್ನಲ್ಲ ಎಂದಿದ್ದ ಓವೈಸಿ ಮೇಲೆ ಕೇಸ್ ಬಿದ್ದಿದೆ. ಈ ದೇಶದಲ್ಲಿ ಹುಟ್ಟಿ, ಈ ದೇಶದಲ್ಲಿ ಬೆಳೆದು, ಈ ದೇಶದ ಅನ್ನ, ಶಿಕ್ಷಣ, ಅಹಂಕಾರ, ಅಧಿಕಾರಗಳನ್ನು ಪಡೆದ ಅಸಾದುದ್ದೀನ್ ಒವೈಸಿ, ಪಾಕಿಸ್ತಾನದ ಕ್ರಿಕೇಟಿಗ ಶಾಹೀದ್ ಅಫ್ರಿದಿ ಮುಂದೆ ಬೆತ್ತಲಾಗಿದ್ದಾರೆ. ಇಲ್ಲಿ ಭಾರತ ಪಾಕಿಸ್ತಾನಕ್ಕಿಂತ ನಮ್ಮನ್ನು ಹೆಚ್ಚು ಪ್ರೀತಿಸುತ್ತದೆ ಎಂದಿದ್ದ ಆ ಪಾಕ್ ಕ್ರಿಕೇಟಿಗನಿಗೂ ಓವೈಸಿಗೂ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಅಫ್ರಿದಿ ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದಿರುವುದರಿಂದ ಅವನಿಗೆ ಆ ದೇಶದ ನೈಜ ಸ್ಥಿತಿಗಳ ಬಗ್ಗೆ ಅರಿವಿದೆ. ಆದರೆ ಈ ನಿಜಾಮರ ಕುಡಿಗಳಿಗೆ ನಮ್ಮ ದೇಶವೇಕೋ ನರಕವೆನಿಸಿದೆ. ಈ ದೇಶದಲ್ಲಿ ಸಮಸ್ಯೆಗಳು ಇಲ್ಲವೆಂದೇನಲ್ಲ. ಆದರೆ ಆ ಸಮಸ್ಯೆಗಳನ್ನು ಪ್ರತಿಭಟಿಸುವುದಕ್ಕೆ ಅನೇಕ ರಿವಾಜುಗಳಿವೆ. ಆದರೆ ಓವೈಸಿ ಭಾರತಮಾತೆಯ ಬುಡಕ್ಕೆ ಕೈ ಹಾಕಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಈ ದೇಶಕ್ಕೆ ಜೈಕಾರ ಹಾಕುವುದಿಲ್ಲ ಎಂದು ಅವರು ಹೇಳಿದ್ದು ಅತ್ಯಂತ ಹೇಯ.
`ಭಾರತವನ್ನು ವಿರೋಧಿಸುವವರು, ಒಂದೇ ಒಂದು ಸಲ ಪಾಕಿಸ್ತಾನಕ್ಕೆ ಹೋಗಿಬರಲಿ. ಇಲ್ಲಿ ವಾಪಾಸಾದ ಮರುಕ್ಷಣವೇ ಈ ನೆಲವನ್ನು ಮುತ್ತಿಕ್ಕುತ್ತಾರೆ’ ಎಂದಿದ್ದು ಸಾಹಿತಿ ಜಾವೇದ್ ಅಖ್ತರ್. ಒಂದೇ ಧರ್ಮದಲ್ಲಿರುವವರ ಭಿನ್ನ ಮನಃಸ್ಥಿತಿಗಳಿವು. ವಿವಾದಾತ್ಮಕ ಹೇಳಿಕೆಗಳಿಂದ ಸಮಾಜದ ಸ್ವಾಸ್ತ್ಯ ಕೆಡುತ್ತದೆಯೇ ವಿನಃ ನೆಮ್ಮದಿ ನೆಲೆಸುವುದಿಲ್ಲ. ಈ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿರಲು ಕಿಡಿ ಹೊತ್ತಿಸುವ ಬೇರೆ ಬೇರೆ ಕೋಮಿನವರ ಮನಃಸ್ಥಿತಿಗಳ ಬದಲಾಗಬೇಕು. ಆಗ ಮಾತ್ರ ನಾಡು ಸುಭಿಕ್ಷವಾಗುತ್ತದೆ.
- ರಾ.ಚಿಂತನ್
POPULAR STORIES :
ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!
ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!
buy atorvastatin 80mg order lipitor 10mg pills order atorvastatin 10mg