ರಿಷಭ್ ಪಂತ್ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಮ್ಯಾನೇಜ್ಮೆಂಟ್, ಆಯ್ಕೆ ಸಮಿತಿ ನಡುವೆ ಮುಸುಕಿನ ಗುದ್ದಾಟ..!

Date:

3ನೇ ವಿಶ್ವಕಪ್​ ಗೆದ್ದು ತರಲು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಸಕಲ ಸನ್ನದ್ಧವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ವಿರುದ್ಧ ಭರ್ಜರಿ ಗೆಲುವುದ ದಾಖಲಿಸಿರುವ ಭಾರತ ಇಂದು ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಶಿಖರ್ ಧವನ್ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಆದ್ದರಿಂದ ಇಂದಿನ ಪಂದ್ಯದಿಂದ ದೂರ ಉಳಿದಿದ್ದಾರೆ. ಅವರಿಗೆ ಮೂರು ವಾರಗಳ ವಿಶ್ರಾಂತಿ ಹಿನ್ನೆಲೆಯಲ್ಲಿ ಅವರ ಬದಲಿಗೆ ರಿಷಭ್ ಪಂತ್ ಅವರನ್ನು ಇಂಗ್ಲೆಂಡ್​ಗೆ ಕಳುಹಿಸಿಕೊಡಲು ಬಿಸಿಸಿಐ ನಿರ್ಧರಿಸಿದೆ ಎಂದು ಆಸೀಸ್ ವಿರುದ್ಧದ ಪಂದ್ಯದ ಮರುದಿನವೇ ಸುದ್ದಿ ಹರಿದಾಡಿತ್ತು.
ಆದರೆ. ಶಿಖರ್ ಬದಲಿಗೆ ಯಾವ ಆಟಗಾರರನ್ನು ಕೂಡ ಕರೆಸಿಕೊಳ್ಳುವ ಯೋಚನೆ ಇಲ್ಲ. ಶಿಖರ್ ಅವರು ನಮಗೆ ಮುಖ್ಯ. ಅವರನ್ನು ಇಲ್ಲೇ ಉಳಿಸಿಕೊಳ್ಳಲಾಗುತ್ತದೆ. ಮೆಡಿಕಲ್ ಟೀಮ್ ಅವರನ್ನು ಅಬ್ಸರ್ವೇಷನ್​ನಲ್ಲಿಟ್ಟಿದೆ ಎಂದು ಮ್ಯಾನೇಜ್ಮೆಂಟ್ ಹೇಳಿತ್ತು. ಆದರೆ. ಬಿಸಿಸಿಐ ಆಯ್ಕೆ ಸಮಿತಿ ಬೇರೆಯದೇ ಯೋಚನೆ ಮಾಡಿದೆ. ಬ್ಯಾಕಪ್ ಆಗಿ ರಿಷಭ್ ಪಂತ್ ಅವರನ್ನು ಕಳುಹಿಸಿಕೊಡಲು ಡಿಸೈಡ್ ಮಾಡಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​​ಕೆ ಪ್ರಸಾದ್​, ದೇವಂಗ್​ ಗಾಂಧಿ ಹಾಗೂ ಸರನ್​ದೀಪ್​ ಸಿಂಗ್ ಅವರು ರಿಷಭ್ ಪಂತ್ ಅವರ ಹೆಸರನ್ನು ಘೋಷಿಸಿ ಅವರನ್ನು ಬೇಗನೇ ಇಂಗ್ಲೆಂಡ್​​ಗೆ ಕಳುಹಿಸಿಕೊಡಲು ಉತ್ಸುಕವಾಗಿದೆ.
ಶಿಖರ್ ಧವನ್ ಗಾಯಗೊಂಡ ಬೆನ್ನಲ್ಲೇ ಟೀಮ್​ ಮ್ಯಾನೇಜ್ಮೆಂಟ್ ಮತ್ತು ಆಯ್ಕೆ ಸಮಿತಿ ನಡುವೆ ರಿಷಭ್ ಪಂತ್ ಆಯ್ಕೆಗಾಗಿ ಮುಸುಕಿನ ಗುದ್ದಾಟ ನಡೆದಿವೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...