ಟಿಕ್​​​​​​ಟಾಕ್​ ಬರೀ ಆ್ಯಪ್ ಅಲ್ಲ..ಅದು ಡೆಡ್ಲಿ ಆ್ಯಪ್..!

Date:

ಟಿಕ್​​ಟಾಕ್​ ಹುಚ್ಚು ಕೆಲವರಿಗೆ ಹೆಚ್ಚಾಗಿದೆ. ಮಾಡುವ ಕೆಲಸವನ್ನು ಬಿಟ್ಟು ಟಿಕ್​ ಟಾಕ್​ ಹಿಂದೆ ಬಿದ್ದಿದ್ದಾರೆ. ಕೆಲವರು ಜೀವಕ್ಕಿಂತ ಹೆಚ್ಚು ಟಿಕ್​ ಟಾಕ್​ ಅನ್ನು ಪ್ರೀತಿಸ್ತಾರೆ. ನಟನೆಯ ಕೌಶಲ್ಯತೆಯನ್ನು ಹೊರ ಹಾಕಲು ಇರುವ ಆನ್​ಲೈನ್ ವೇದಿಕೆ ಇದಾಗಿದ್ದು, ಇದರ ಹುಚ್ಚು ಜನರಿಗೆ ನೆತ್ತಿಗೇರಿ ಬಿಟ್ಟಿದೆ.
ಮೊನ್ನೆ ಮೊನ್ನೆಯಷ್ಟೇ ಟಿಕ್ ಟಾಕ್​ ಮಾಡುತ್ತಾ ತಮಿಳುನಾಡುನ ಮಹಿಳೆಯೊಬ್ಬರು ವಿಷ ಕುಡಿದಿದ್ದರು. ಟಿಕ್ ಟಾಕ್ ಮಾಡೋದನ್ನು ಕಮ್ಮಿ ಮಾಡಿ ಸ್ವಲ್ಪ ಮಕ್ಕಳ ಕಡೆ ಗಮನ ಕೊಡು ಅಂದಿದ್ದಕ್ಕೇ ಆ ಮಹಿಳೆ ವಿಷ ಕುಡಿಯುತ್ತಾ ಟಿಕ್​ಟಾಕ್ ಮಾಡಿ ವಿಷ ಕುಡಿದು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ ತುಮಕೂರಿನ ಯುವಕನೊಬ್ಬ ಟಿಕ್ ಟಾಕ್ ಮಾಡಲು ಹೋಗಿ ದುಸ್ಸಾಹಸಕ್ಕೆ ಯತ್ನಿಸಿ ಮೂಳೆ ಮುರಿದುಕೊಂಡು ಸಾವು-ಬುದಕಿನ ನಡುವೆ ಆಸ್ಪತ್ರೆಯಲ್ಲಿದ್ದಾನೆ.
ಈಗ 12 ವರ್ಷದ ಬಾಲಕ ಟಿಕ್​ಟಾಕ್​ಗಾಗಿ ಪ್ರಾಣ ಬಿಟ್ಟಿದ್ದಾನೆ. ರಾಜಸ್ಥಾನದ ಬಾಲಕ ಕುಶಾಲ್ ಮೃತ. ಈತ ಟಿಕ್​ ಟಾಕ್ ಮಾಡುತ್ತಾ ಕುತ್ತಿಗೆಗೆ ಕಬ್ಬಿಣದ ಸರಪಳಿ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. ಟಿಕ್​ಟಾಕ್​ನಲ್ಲಿ ಸರಪಳಿ ಹಾಕಿಕೊಳ್ಳುವ ಚಾಲೆಂಜನ್ನು ನೋಡಿದ ಬಾಲಕ ತಾನು ಕೂಡ ಅದೇರೀತಿ ಮಾಡಲು ಮುಂದಾಗಿದ್ದಾನೆ. ಚಾಲೆಂಜಿಗಾಗಿ ತಡರಾತ್ರಿ ಎದ್ದು ಮಂಗಳಸೂತ್ರ ಮತ್ತು ಬಳೆಗಳನ್ನು ಧರಿಸಿ ಟಾಸ್ಕ್​ ಮಾಡಿದ್ದಾನೆ. ಬಳಿಕ ಕಬ್ಬಿಣದ ಸರಪಳಿಯನ್ನು ಕುತ್ತಿಗೆಗೆ ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಕುಶಾಲ್ ಬೆಳಗ್ಗೆ ಎಷ್ಟು ಹೊತ್ತಾದ್ರು ಎದ್ದೇಳದನ್ನು ಕಂಡು ಪೋಷಕರು ಅವನ ರೂಮ್​ಗೆ ಹೋದಾಗ ಅಲ್ಲೂ ಇರಲಿಲ್ಲ. ಬಳಿ ಬಾತ್ ರೂಮ್ಗ್ ಹೋದಾಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾತ್ ರೂಮ್​ ನಲ್ಲಿ ಅವನು ನೇಣಿಗೆ ಶರಣಾಗಿದ್ದನು. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟೊತ್ತಿಗೆ ಪ್ರಾಣ ಪಕ್ಷಿ ಹಾರಿತ್ತು.
ಟಿಕ್​ ಟಾಕ್ ಹುಚ್ಚು ಒಬ್ಬ ಬಾಲಕನ ಜೀವವನ್ನೇ ತೆಗೆದಿದೆ. ನಟನೆಗೆ ವೇದಿಕೆಯಾಗಿದ್ದ ಆ್ಯಪ್ ಈಗ ಡೆಡ್ಲಿ ಆ್ಯಪ್ ಆಗಿದೆ. ಪೋಷಕರೇ ನೀವು ನಿಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸಿ.. ಮೊಬೈಲ್ನಿಂದ ದೂರ ಇಡಿ.

Share post:

Subscribe

spot_imgspot_img

Popular

More like this
Related

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ...

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...