ಯಡಿಯೂರಪ್ಪನವರು 12 ಸ್ಥಾನಗಳನ್ನು ಗೆಲ್ಲುತ್ತಾರೆಂದು ವಿನಯ್ ಗುರೂಜಿಗೆ ಮೊದಲೇ ಗೊತ್ತಿತ್ತು !?

admin
1 Min Read

ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಿಸಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತ ಗಳಿಸಿದ್ದು, ಇದರ ಮಧ್ಯೆ ಉಪ ಚುನಾವಣೆಯ ಫಲಿತಾಂಶದ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಮೊದಲೇ ಭವಿಷ್ಯ ನುಡಿದಿದ್ದರು ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ಹೌದು ಉಪ ಚುನಾವಣೆಗೂ ಮೊದಲು ವಿನಯ್ ಗುರೂಜಿಯವರನ್ನು ಯಡಿಯೂರಪ್ಪ ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತಿದೆ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ವಿನಯ್ ಗುರೂಜಿ ಅವರು ಯಡಿಯೂರಪ್ಪನವರಿಗೆ ಒಂದು ಲಕೋಟೆಯನ್ನು ನೀಡಿ ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಇದನ್ನು ತೆಗೆದು ನೋಡಿ ಎಂದು ಹೇಳಿದ್ದರು ಹಾಗೆ ಯಡಿಯೂರಪ್ಪನವರು ಫಲಿತಾಂಶದ ಬಳಿಕ ಅದನ್ನು ತೆಗೆದು ನೋಡಿದಾಗ ಅದರಲ್ಲಿ ಹನ್ನೆರಡು ಪೆನ್ಸಿಲ್ಗಳು ಇತ್ತು ಹೀಗಾಗಿ  ಹನ್ನೆರಡು ಸ್ಥಾನಗಳನ್ನು ಪಡೆಯುತ್ತಾರೆ ಎಂದು ಮಿನಿ ಗುರೂಜಿಯವರು ಈ ಮೂಲಕ ಭವಿಷ್ಯ ನುಡಿದಿದ್ದಾರೆ ಎಂದು ಯಡಿಯೂರಪ್ಪ ಅವರು ಹಾಗೂ ಅವರ ಆಪ್ತರು ಹೇಳುತ್ತಿದ್ದಾರೆ .

Share This Article
Leave a Comment