ಅವರು ಶತಮಾನದ ಬುದ್ಧಿವಂತರಾಗಿದ್ದು ಹೇಗೆ ಗೊತ್ತಾ..?

Date:

ಅವತ್ತೊಂದು ದಿನ ಟೀಚರ್ ಆ ಹುಡುಗನಿಗೆ ಒಂದು ಪತ್ರವನ್ನು ಕೊಟ್ರು, ನೀನು ಇದನ್ನು ನಿನ್ನ ಅಮ್ಮನಿಗೆ ಕೊಡು ಎಂದು ಹೇಳಿದ್ರು..! ಎಂದಿನಂತೆ ಶಾಲೆಯಿಂದ ಮನೆಗೆ ಮರಳಿದ ಹುಡುಗ ಪತ್ರವನ್ನು ತಾಯಿಗೆ ನೀಡಿ, ‘ಅಮ್ಮಾ ಟೀಚರ್ ಈ ಪತ್ರವನ್ನು ನಿಂಗೆ ನೀಡಲು ಹೇಳಿದ್ದಾರೆ’ ಅಂದ.


ಆ ತಾಯಿ ಪತ್ರವನ್ನು ತೆರೆದು, ‘ನಿಮ್ಮ ಮಗ ತುಂಬಾ ಬುದ್ಧಿವಂತನಿದ್ದಾನೆ. ನಮ್ಮ ಶಾಲೆ ಅವನ ಬುದ್ಧಿಮತ್ತೆಗೆ ತುಂಬಾ ಚಿಕ್ಕದು. ಅವನಿಗೆ ಕಲಿಸಬಲ್ಲ ಯಾವ ಅರ್ಹತೆಯೂ ನಮ್ಮಲ್ಲಿನ ಯಾವ ಉಪಾಧ್ಯಾಯರಿಗೂ ಇಲ್ಲ..! ಆದ್ದರಿಂದ ಅವನಿಗೆ ನೀವು ಮನೆಯಲ್ಲೇ ನೀವು ವಿದ್ಯಾಭ್ಯಾಸ ನೀಡುವುದು ಒಳಿತು’ ಎಂದು ಮಗನಿಗೆ ಕೇಳಿದಂತೆ ಗಟ್ಟಿಯಾಗಿ ಓದಿದರು.
ಇದಾಗಿ ಅನೇಕ ವರ್ಷಗಳ ನಂತರ ಆ ಹುಡುಗನ ತಾಯಿ ವಿಧಿವಶರಾದರು. ಆ ವೇಳೆಯಲ್ಲಿ ಆ ಹುಡುಗ ವಿಶ್ವದ ಅಗ್ರಮಾನ್ಯ ವಿಜ್ಞಾನಿಯಾಗಿದ್ದರು..!
ತನ್ನ ತಾಯಿಯ ಪೆಟ್ಟಿಗೆಯನ್ನು ತೆರೆದು ಹಳೆಯ ವಸ್ತುಗಳನ್ನು ಪರಿಶೀಲಿಸ್ತಾ ಇರುವಾಗ. ವಿಶ್ವ ಶ್ರೇಷ್ಠ ವಿಜ್ಞಾನಿಗೆ ಮಡಚಿದ ಕಾಗದವೊಂದು ಕಣ್ಣಿಗೆ ಬಿತ್ತು..! ಅದನ್ನು ಬಿಡಿಸಿ ನೋಡಿದರು.. ಅದರಲ್ಲಿ ಏನ್ ಬರೆದಿತ್ತು ಗೊತ್ತಾ..?
‘ನಿನ್ನ ಮಗ ಒಬ್ಬ ಬುದ್ಧಿಮಾಂದ್ಯ. ಅವನನ್ನು ಇನ್ನುಮುಂದೆ ಶಾಲೆಗೆ ಕಳುಹಿಸಬೇಡಿ’ ಎಂದು ಆ ಪತ್ರದಲ್ಲಿ ಬರೆದಿತ್ತು..! ಆ ವಿಜ್ಞಾನಿ ಬೇರಾರು ಅಲ್ಲ ‘ಥಾಮಸ್ ಅಲ್ವಾ ಎಡಿಸನ್’..!
ಥಾಮಸ್ ಅಲ್ವಾ ಎಡಿಸನ್ ಚಿಕ್ಕವರಿದ್ದಾಗ.. ಅವರ ತಾಯಿಗೆ ಪತ್ರ ಬರೆದ ಟೀಚರ್, ನಿಮ್ಮ ಮಗ ದಡ್ಡ ಅವನು ಶಾಲೆಗೆ ಬರುವುದು ಬೇಡ ಎಂದು ಹೇಳಿದ್ದರು..! ಆದರೆ, ತಾಯಿ ತನ್ನ ಚಿಕ್ಕ ಮಗುವಿಗೆ ಈ ವಿಷಯವನ್ನು ಹೇಳಿದ್ರೆ ನೋವಾಗುತ್ತೆ ಅಂತ ನೀನು ತುಂಬಾ ಬುದ್ಧಿವಂತ ನಿನಗೆ ಕಲಿಸೋ ಸಾಮಾಥ್ರ್ಯ ನಿಮ್ಮ ಶಿಕ್ಷಕರಿಗಿಲ್ಲವಂತೆ ಎಂದು ಹೇಳಿ, ಮನೆಯಲ್ಲೇ ಪಾಠ ಮಾಡಿದ್ರು..! ಆಮೇಲಿದ್ದು ಇತಿಹಾಸ.. ಥಾಮಸ್ ಅಲ್ವಾ ಎಡಿಸನ್ ಇಡೀ ಜಗತ್ತಿಗೇ ಗೊತ್ತಿದೆ..!
ಥಾಮಸ್ ಅಲ್ವಾ ಎಡಿಸನ್ ಒಂದ್ ಕಡೆ ಹೇಳ್ತಾರೆ.. ‘ಬುದ್ಧಿಮಾಂದ್ಯ ಹುಡುಗನೊಬ್ಬ ಅವನ ಶ್ರೇಷ್ಠ ಮಾತೆಯಿಂದಾಗಿ ಶತಮಾನದ ಬುದ್ಧಿವಂತನಾಗಿದ್ದಾನೆ’ ಎಂದು.


ಹೀಗೆ ಶ್ರೇಷ್ಠ ತಾಯಿಯಿಂದ ಜಗತ್ತಿಗೆ ಸರ್ವಶ್ರೇಷ್ಠ ವಿಜ್ಞಾನಿಯೊಬ್ಬರು ಲಭ್ಯರಾದ್ರು..! ಅವತ್ತು ಎಡಿಸನ್ ಅವರ ತಾಯಿ ಟೀಚರ್ ಮಾತಿಗೆ ಓಗೊಟ್ಟು, ಮಗನಿಗೆ ಬೈದಿದ್ದಾರೆ.. ಅವರೂ ಕೂಡ ಮಗನನ್ನು ನಿರ್ಲಕ್ಷಿಸಿದ್ದರೆ..ಎಡಿಸನ್ ದೊಡ್ಡ ವಿಜ್ಞಾನಿಯೇ ಆಗುತ್ತಿರಲಿಲ್ಲ..!
ದೊರೆಯುವ ಪ್ರೋತ್ಸಾಹ ವ್ಯಕ್ತಿಯನ್ನು ಎಲ್ಲಿಗೋ, ಎಷ್ಟೋ ಎತ್ತರಕ್ಕೆ ಕರೆದುಕೊಂಡು ಹೋಗುತ್ತೆ..!
ಎಡಿಸನ್ ಅವರ ಈ ಸ್ಟೋರಿ ನಿಮಗೆ ಈಗಾಗಲೇ ಗೊತ್ತಿತ್ತೇನೊ.. ಒಂದ್ಸಲ ನೆನಪು ಮಾಡಿದ್ದೇವಷ್ಟೇ..!

ಲಾಲ್ ಬಹುದ್ದೂರ್ ಶಾಸ್ತ್ರೀಜಿ ಸೋಮವಾರ ಉಪವಾಸ ವ್ರತ ಕೈಗೊಂಡಿದ್ದೇಕೆ ಗೊತ್ತಾ?

ಇಂಗ್ಲಿಷ್​ ಬರದವರು ಇಂಗ್ಲೆಂಡ್​​ನಲ್ಲಿ ಸಿಇಒ ಆಗಿದ್ದು ಹೇಗೆ?

ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್​..!

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!

ರಾಖಿಯಲ್ಲಿ ಮುರಿದ ಪ್ರೇಮದ ಚಿಗುರು

ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!

ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!

ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?

ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!

ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ‌ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?

ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?

ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?

ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.

ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!

ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್

‘ಕರ್ಮ’ ಯೋಗಿಗಳ ಪಾಲಿನ ‘ಜೀವ’ದಾತ!

ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!

ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!

ತಂದೆ ಕೊಟ್ಟ ಆ 10 ಸಾವಿರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು..!

 

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...