ಫ್ರೆಂಚ್‌ ಬಿರಿಯಾನಿಗೆ ‘ಪವರ್’ ಮಸಾಲಾ… ಏನ್ ಮಾಡೋದು ಸ್ವಾಮಿ ಹಾಡಿಗೆ ಅಪ್ಪು ಅಭಿಮಾನಿಗಳು ಫಿದಾ

Date:

ಫ್ರೆಂಚ್ ‌ಬಿರಿಯಾನಿ. ಸದ್ಯ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ. ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಫ್ರೆಂಚ್​ ಬಿರಿಯಾನಿ ಸಿನಿಮಾ ರಿಲೀಸ್​ಗೆ ಕ್ಷಣಗಣನೆ ಶುರುವಾಗಿದೆ. ಈ ಹೊತ್ತಲ್ಲೇ ಚಿತ್ರದ ಬೊಂಬಾಟ್​ ಸಾಂಗ್​ ರಿಲೀಸ್​ ಆಗಿದ್ದು, ಸಿನಿ ರಸಿಕರ ಮನಸೆಳೆಯುತ್ತಿದೆ. ಅದೂ ಸಹ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ವಾಯ್ಸ್​ನಲ್ಲಿ ಮೂಡಿಬಂದಿರುವ ಹಾಡು ಅಭಿಮಾನಿಗಳಿಗೆ ಕಿಕ್​ ಕೊಡುತ್ತದೆ.

ಏನ್ ಮಾಡೋದು ಸ್ವಾಮಿ ಅನ್ನೋ ಸಾಂಗ್‌ನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದು, ಸಖತ್ ಹಿಟ್ ಆಗಿದೆ. ನರಕಕ್ ಇಳ್ಸಿ.. ನಾಲ್ಗೆ ಸೀಳ್ಸಿ.. ಬಾಯ್ ಹೊಲಿಸಾಕಿದ್ರೂನೆ.. ಮೂಗ್ನಲ್ ಕನ್ನಡ್ ಪದವಾಡ್ತೀನಿ, ಅನ್ನೋ ಜಿ.ಪಿ ರಾಜರತ್ನಂ ಅವರ ಸಾಲುಗಳನ್ನು ಬಳಸಿಕೊಂಡು ಈ ಹಾಡನ್ನ ರಚಿಸಲಾಗಿದ್ದು, ಪುನೀತ್‌ ದನಿಯಲ್ಲಿ ಈ ಹಾಡು ಸಖತ್ ಮಜಾಕೊಡುತ್ತೆ.

ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್​​ ಸಂಗೀತದ ಜೊತೆ ಅಭಿಷೇಕ್​ ಜೊತೆ ಸೇರಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಜಿ. ಪಿ ರಾಜರತ್ನಂ ಅವರ ಸಾಲುಗಳ ಜೊತೆಗೆ ಒಂದಷ್ಟು ಹೊಸ ಸಾಲುಗಳನ್ನ ಸೇರಿಸಿ ಹಾಡನ್ನ ಕಟ್ಟಿಕೊಡಲಾಗಿದೆ. ಬಾರಿನಲ್ಲಿ ಶೂಟ್​ ಮಾಡಿರೋ ಹಾಡಿನಲ್ಲಿ ಕುಡುಕರ ಫಿಲಾಸಫಿಯೂ ಇದೆ. ಪಿಆರ್​ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಈ‌ ಹಾಡು ರಿಲೀಸ್ ಆಗಿದ್ದು, ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.ಇನ್ನೂ, ಇದಕ್ಕೂ ಮುನ್ನ ಫ್ರೆಂಚ್ ಬಿರಿಯಾನಿ ಸಿನಿಮಾ ತಂಡವೂ “ದಿ ಬೆಂಗಳೂರು” ಸಾಂಗ್ ಬಿಡುಗಡೆ‌ ಮಾಡಿತ್ತು.‌ ಈ ಹಾಡಿಗೆ ಅವಿನಾಶ್ ಬಲೆಕ್ಕಳ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದರು. ‌ಯುವಗಾಯಕಿ ಅದಿತಿ ಸಾಗರ್ ಈ ಹಾಡನ್ನು ಹಾಡಿದ್ದು, ಪಿಆರ್​ಕೆ ಯುಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗಿತ್ತು.

ಫ್ರೆಂಚ್​ ಬಿರಿಯಾನಿ ಸಿನಿಮಾವನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಪನ್ನಗಾಭರಣ ಬಣ್ಣ ಹಚ್ಚಿ ಹಾಡಿಗೆ ಹೆಜ್ಜೆ ಹಾಕಿರೋದು ವಿಶೇಷ. ಪುನೀತ್​ ರಾಜ್​ ಕುಮಾರ್ ವಾಯ್ಸ್​ನಲ್ಲಿ ಹಾಡು ಸಖತ್​ ಮಜವಾಗಿದ್ದು, ಸಿನಿಮಾ ನೋಡುವ ಕುತೂಹಲ ಹೆಚ್ಚಿಸುವಂತಿದೆ. ಡ್ಯಾನಿಶ್​ ಸೇಠ್​ ಮತ್ತು ಸಾಲ್ ಯೂಸುಫ್​ ಫ್ರೆಂಚ್​ ಬಿರಿಯಾನಿ ಚಿತ್ರದ ಲೀಡ್​ ರೋಲ್​ಗಳಲ್ಲಿ ನಟಿಸಿದ್ದಾರೆ. ‌ಇದರ ಜೊತೆಗೆ ಹಿರಿಯ ನಟ ರಂಗಾಯಣ ರಘು ಸಹ ಮುಖ್ಯಭೂಮಿಕೆಯಲ್ಲಿದ್ದು, ನೋಡುಗರಿಗೆ ಕಾಮಿಡಿ ಕಿಕ್ ಕೊಡಲಿದ್ದಾರೆ.

ಈ‌ ಹಿಂದೆ ಮೊದಲ ಬಾರಿಗೆ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಚಿತ್ರ ಬಿಡುಗಡೆ ಮಾಡಿ ಸಕ್ಸಸ್ ಕಂಡಿದ್ದ ಪುನೀತ್ ಇದೀಗ ಮತ್ತೊಂದು ಪ್ರಯತ್ನಕ್ಕೆ ‌ಕೈ ಹಾಕಿದ್ದಾರೆ. ಈ ಹಿಂದೆ ಲಾ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾವನ್ನು ಸಹ ಒಟಿಟಿ ಪ್ಲಾಟ್ ಫಾರ್ಮ್ ನಲ್ಲೇ ರಿಲೀಸ್ ಮಾಡುತ್ತಿದ್ದಾರೆ. ಇದೇ ಜು.೨೪ಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ಅದಕ್ಕೂ ಮುನ್ನವೇ ಹಾಡುಗಳು ಹಿಟ್ ಪಡೆದಿರೋದು ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.

Share post:

Subscribe

spot_imgspot_img

Popular

More like this
Related

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ ಬೆಂಗಳೂರು, ಮಾ. 22:...

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆಬೆಂಗಳೂರು,...

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳುಬೆಂಗಳೂರು, ಮಾರ್ಚ್ 21:ರಾಜ್ಯದ ಮುಸ್ಲಿಂ ಬಾಂಧವರಿಗೆ...