No menu items!
9.3 C
Munich
Wednesday, April 29, 2026

ಜೆಡಿಎಸ್ ಪಕ್ಷದ ಪುನಶ್ಚೇತನಕ್ಕೆ ಅಣಿ ಮಾಡಿದ್ದು 32 ಪ್ರಮುಖ ನಾಯಕರ ಸಭೆ.

Must read

ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ ಆರಂಭವಾಗಿದ್ದು
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸಭೆ ನೆಡೆಯಿತು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನೆಡೆದಿದ್ದು ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಭಾಗಿ ಯಾಗಿದ್ದರು ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಂಕ್ರಾಂತಿ ನಂತರ ಪಕ್ಷದ ಪುನಶ್ಚೇತನಕ್ಕೆ ಅಣಿ ಮಾಡಿದ್ದು 32 ಪ್ರಮುಖ ನಾಯಕರ ಸಭೆ ಕರೆಯಲಾಗಿತ್ತು.

ವೈಎಸ್‌ವಿ ದತ್ತಾ ಕುಟುಂಬದವರಿಗೆ ಆರೋಗ್ಯ ಸಮಸ್ಯೆ ಕಾರಣ ಅವರು ಸಭೆ ಗೆ ಬಂದಿಲ್ಲ ದೇವೇಂದ್ರ ಚೌಹಾಣ್ ಡಿಸಿಎಂ ಕಾರ್ಯಕ್ರಮ ಇರುವ ಕಾರಣ ಬಂದಿಲ್ಲ ಎಂದು ಹೇಳಿ ಸಭೆ ಶುರುಮಾಡಲಾಯಿತು ಏಳು ವಿಭಾಗಗಳಲ್ಲಿ ವೀಕ್ಷಕರ ಸಮಿತಿ ರಚನೆ ಶುರು ಮಾಡಿದ್ದು ಹೈ.ಕ ಭಾಗಕ್ಕೆ ಬಂಡೆಪ್ಪ ಕಾಶೆಂಪೂರ, ಮುಂಬೈ ಕರ್ನಾಟಕ ಬಸವರಾಜ ಹೊರಟ್ಟಿ, ಮಧ್ಯ ಕರ್ನಾಟಕಕ್ಕೆ ಶಿವಶಂಕರ್ ಸೇರಿ ಎಲ್ಲ ಭಾಗಗಳಲ್ಲೂ ಜವಾಬ್ದಾರಿ ಪಕ್ಷ ಸಂಘಟನೆಗೆ ಜಿಲ್ಲಾ ಮತ್ತು ತಾಲೂಕು ಘಟಕಗಳು ರಚನೆ ನಿರ್ಧಾರ ಮಾಡಿದೆ ಈ ಸಭೆಯು ಕೋರ್ ಸಮಿತಿಯನ್ನು ಒಗ್ಗೂಡಿಸುವುದಕ್ಕಾಗಿ ಮುಖ್ಯವಾಗಿದೆ. . ನಾವು ಜಿಲ್ಲಾ ಮತ್ತು ರಾಜ್ಯ ಘಟಕಗಳನ್ನು ಪುನರ್ರಚಿಸುತ್ತೇವೆ. ಅಧಿವೇಶನ ಮುಗಿದ ನಂತರ ಫೆಬ್ರವರಿ 5 ರ ನಂತರ ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ‘ ಎಚ್ ಕೆ ಕುಮಾರಸ್ವಾಮಿ, ಹೇಳಿದರು. ಪಕ್ಷವು 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತನ್ನನ್ನು ತಾನು ಮರುಸಂಘಟಿಸಿಕೊಳ್ಲಲು ಪ್ರಯತ್ನಿಸುತ್ತಿದ್ದು ಆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಯತ್ನಿಸುತ್ತದೆ, ಕಳೆದ ಚುನಾವಣೆಗಳಲ್ಲಿ ಪಕ್ಷವು 30ಕ್ಕೂ ಹೆಚ್ಚಿನ ಸ್ಥಾನವನ್ನು 2,000 ಮತಗಳ ಅಂತರದಿಂದ ಕಳೆದುಕೊಂಡಿದ್ದಾಗಿ ಗಮನಿಸಿದೆ. ಸಭೆಯಲ್ಲಿ ಬಂಡಾಯ ನಾಯಕರಾದ ಜಿಟಿ ದೇವೇಗೌಡ ಹಾಗೂ ಇತರರ ಬಗೆಗೆ ಚರ್ಚೆ ನೆಡೆಸಿದರು ಎಂದು ಹೇಳಲಾಗುತ್ತಿದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article